ಆರಾಧಾನಾಲಯದ ಫೋಟೋ ದುರುಪಯೋಗ : ಛಾಯಾಗ್ರಾಹಕನ ವಿರುದ್ಧ ಪ್ರಕರಣ ದಾಖಲು
ಕಾಸರಗೋಡು, ಸೆ.6: ಆರಾಧಾನಾಲಯದ ಫೋಟೋವನ್ನು ದುರುಪಯೋಗ ಪಡಿಸಿದ ಘಟನೆಗೆ ಸಂಬಂಧಪಟ್ಟಂತೆ ಬದಿಯಡ್ಕದ ಛಾಯಾಗ್ರಾಹಕನೋರ್ವನ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕದ ಫೋಟೋ ಗ್ರಾಫರ್ ಅಖಿಲೇಶ್ ಯಾದವ್ ವಿರುದ್ಧ ಕೇಸು ದಾಖಲಿಸಲಾಗಿದೆ.
ಬದಿಯಡ್ಕದ ನುಸ್ರತುಲ್ ಇಸ್ಲಾಂ ಯುವಜನ ಸಂಘಟನೆಯ ಪದಾಧಿಕಾರಿಗಳು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಭಾವಚಿತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿ ಗಲಭೆಗೆ ಹುನ್ನಾರ ನಡೆಸಿದ್ದಾನೆ ಎಂಬ ಆರೋಪದಂತೆ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ
Next Story