ಬೆಳ್ತಂಗಡಿ : ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆ
ಬೆಳ್ತಂಗಡಿ,ಸೆ.6: ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಹೇಡಿತನದ ಕೃತ್ಯವಾಗಿದೆ ಇದರ ಹಿಂದಿರುವವರನ್ನು ಕಾನೂನಿನ ಮುಂದೆ ತರಬೇಕಾಗಿದೆ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.
ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತು ಸದಸ್ಯ ಶೇಖರ ಕುಕ್ಕೇಡಿ, ಸಿಪಿಐಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಪತ್ರಕರ್ತರಾದ ಶಿಬಿ ಧರ್ಮಸ್ಥಳ. ದೇವಿಪ್ರಸಾದ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ನೇಮಿರಾಜ ಕಿಲ್ಲೂರು, ಹಿರಿಯ ದಲಿತ ಮುಖಂಡರಾದ ಅಣ್ಣುಸಾಧನ, ದಮ್ಮಾನಂದ ಮಾತನಾಡಿ ಕೊಲೆಗಾರರನ್ನು ಕಾನೂನಿನ ಮುಂದೆ ತರುವಂತೆ ಒತ್ತಾಯಿಸಿದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ಮುಖಂಡರುಗಲಾದ ಬೇಬಿಸುವರ್ಣ, ಹರಿದಾಸ್, ಜಯಾನಂದ ಕೊಯ್ಯೂರು, ಚೆನ್ನಕೇಶವ, ವಸಂತ ನಡ, ಅಶ್ರಫ್ ಆಲಿಕುಂಜ್ಞಿ, ಸುಕನ್ಯ, ನಾಗರಾಜ ಲಾಯಿಲ, ಶೇಷಪ್ಪನಲ್ಕೆ, ಶಾಫಿ ಬಂಗಾಡಿ, ಪ್ರಶಾಂತ ಪೂಂಜಾಲಕಟ್ಟೆ, ಹಾಗೂ ಇತರರು ವಹಿಸಿದ್ದರು.
ಪ್ರತಿಭಟನೆಯ ಬಳಿಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಮಯಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.