Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ನಿರ್ಭೀತ ಪತ್ರಕರ್ತೆಯ ಗುಣಗಾನ ಮಾಡಿದ...

ನಿರ್ಭೀತ ಪತ್ರಕರ್ತೆಯ ಗುಣಗಾನ ಮಾಡಿದ ವಿದೇಶಿ ಮಾಧ್ಯಮಗಳು

ಗೌರಿ ಲಂಕೇಶ್ ಹತ್ಯೆಯ ವರದಿ ಪ್ರಕಟಿಸಿದ ದ ಗಾರ್ಡಿಯನ್, ಬಿಬಿಸಿ, ನ್ಯೂಯಾರ್ಕ್ ಟೈಮ್ಸ್

ವಾರ್ತಾಭಾರತಿವಾರ್ತಾಭಾರತಿ6 Sept 2017 10:16 PM IST
share
ನಿರ್ಭೀತ ಪತ್ರಕರ್ತೆಯ ಗುಣಗಾನ ಮಾಡಿದ ವಿದೇಶಿ ಮಾಧ್ಯಮಗಳು

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ  ಹತ್ಯೆ ಘಟನೆಯಿಂದ ಇಡೀ ದೇಶವೇ ಆಘಾತಗೊಂಡಿದೆ.  ದೇಶದಾದ್ಯಂತವಲ್ಲದೆ ವಿದೇಶಗಳಿಂದಲೂ ಗೌರಿ ಹತ್ಯೆಗೆ ಖಂಡನೆಗಳ ಮಹಾಪೂರವೇ ಹರಿದು ಬರುತ್ತಿದೆ. 55 ವರ್ಷದ ಗೌರಿ ತಮ್ಮ ಲಂಕೇಶ್ ಪತ್ರಿಕೆಯ ಮೂಲಕ ದಿಟ್ಟ ಪತ್ರಕರ್ತೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಲ್ಲದೆ ತಮ್ಮ ಖಡಕ್ ಬರಹಗಳಿಂದ ಕೆಲ ಸಂಘಟನೆಗಳ ಆಕ್ರೋಶಕ್ಕೂ ಗುರಿಯಾಗಿದ್ದವರು.

ವಿಪಕ್ಷಗಳು ಕೊಲೆ ಕೃತ್ಯವನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಪತ್ತೆ ಹೆಚ್ಚುವಂತೆ ಬೇಡಿಕೆಯಿರಿಸಿದ್ದರೆ, ಕೇಂದ್ರ ಸಚಿವರುಗಳಾದ ಸ್ಮøತಿ ಇರಾನಿ ಹಆಗೂ ರಾಜವರ್ಧನ್ ಸಿಂಗ್ ರಾಥೋರ್ ಕೂಡ ಹತ್ಯೆಯನ್ನು ಖಂಡಿಸಿದ್ದಾರೆ. ತರುವಾಯ ಕರ್ನಾಟಕ ಮುಉಖ್ಯಮಂತ್ರಿ  ಈ ಕೊಲೆ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯನ್ನೂ ಘೊಷಿಸಿದ್ದಾರೆ. ಕೊಲೆಯನ್ನು ಖಂಡಿಸಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ವಿದೇಶಿ ಮಾಧ್ಯಮಗಳೂ ಈ ಪತ್ರಕರ್ತೆಯ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ ವರದಿಗಳನ್ನು ಪ್ರಕಟಿಸಿವೆ.

ದಿ ನ್ಯೂಯಾರ್ಕ್ ಟೈಮ್ಸ್ 

ಅಮೆರಿಕಾದ ಈ ಪತ್ರಿಕೆಯು ಅಸೋಸಿಯೇಟೆಡ್ ಪ್ರೆಸ್ ಹಾಗೂ ರೂಟರ್ಸ್ ಏಜನ್ಸಿ ಮೂಲಕ ಬಂದ ಎರಡು ವರದಿಗಳನ್ನು ಪ್ರಕಟಿಸಿದೆ. ರೂಟರ್ಸ್ ವರದಿಯು ಗೌರಿ ಲಂಕೇಶ್ ಅವರನ್ನು `ನಿರ್ಭೀತ ಹಾಗೂ ವಾಕ್ಚತುರೆ ಪತ್ರಕರ್ತೆ' ಎಂದು ಬಣ್ಣಿಸಿತ್ತಲ್ಲದೆ ಆಕೆ ಬಲಪಂಥೀಯ ಸಿದ್ಧಾಂತದ ಕಡು ವಿರೋಧಿಯಾಗಿದ್ದನ್ನೂ ಉಲ್ಲೇಖಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರ ಹೇಳಿಕೆಗಳೂ ಉಲ್ಲೇಖಗೊಂಡಿದ್ದವು. ಅಸೋಸಿಯೇಟೆಡ್ ಪ್ರೆಸ್ ಲೇಖನವು ವಿದ್ವಾಂಸ ಎಂ ಎಂ ಕಲಬುರ್ಗಿ , ವಿಚಾರವಾದಿ ಗೋವಿಂದ ಪನ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಹತ್ಯೆ ಘಟನೆಗಳ ಮೇಲೂ ಬೆಳಕು ಚೆಲ್ಲಿತ್ತು. ಅವರನ್ನು ಕೂಡ ಗೌರಿ ಅವರನ್ನು ಕೊಲೆಗೈದ ರೀತಿಯಲ್ಲೇ ಹತ್ಯೆ ಮಾಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬಿಬಿಸಿ

ಬಿಬಿಸಿ ವೆಬ್‍ಸೈಟ್ ಕೂಡ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವರದಿ ಪ್ರಕಟಿಸಿದೆಯಲ್ಲದೆ ``ಇತ್ತೀಚಿಗಿನ ವರ್ಷಗಳಲ್ಲಿ ಕೊಲೆಗೀಡಾದ ಭಾರತದ ಅತ್ಯಂತ ಪ್ರಮುಖ ಪತ್ರಕರ್ತೆ' ಎಂದು ಆಕೆಯನ್ನು ಬಣ್ಣಿಸಿದೆ. ತೀವ್ರವಾದಿ ಹಿಂದುತ್ವಗಳ ಆಕ್ರೋಶಕ್ಕೆ ಪತ್ರಕರ್ತರು ಇತ್ತೀಚಿಗಿನ ದಿನಗಳಲ್ಲಿ ಬಲಿಯಾಗುತ್ತಿದ್ದಾರೆ ಎಂದೂ ವರದಿಯಲ್ಲ ಹೇಳಲಾಗಿದೆಯಲ್ಲದೆ ಮಹಿಳಾ ಪತ್ರಕರ್ತೆಯರು  ಅತ್ಯಾಚಾರ ಮತ್ತು ಹಲ್ಲೆ ಬೆದರಿಕೆಗಳನ್ನೂ ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.

ದ ಗಾರ್ಡಿಯನ್

ಗೌರಿ ಲಂಕೇಶ್ ಅವರು ಹಿಂದೂ ತೀವ್ರವಾದಿಗಳ  ಕಟು ಟೀಕಾಕಾರ್ತಿಯಾಗಿದ್ದರು ಎಂಬುದನ್ನು ದಿ ಗಾರ್ಡಿಯನ್ ಪತ್ರಿಕೆ ಹೇಳಿಕೊಂಡಿದೆ. `ಇಂಡಿಯನ್ ಜರ್ನಲಿಸ್ಟ್  ಕ್ರಿಟಿಕಲ್ ಆಫ್ ಹಿಂದು ಎಕ್ಸ್ ಟ್ರೀಮಿಸ್ಟ್ಸ್ ಈಸ್ ಶಾಟ್ ಡೆಡ್ ಇನ್ ಬೆಂಗಳೂರು' ಎಂಬ ಶೀರ್ಷಿಕೆಯ ತನ್ನ ವರದಿಯಲ್ಲಿ ಪತ್ರಿಕೆಯು    ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯನ್ನು ಉಲ್ಲೇಖಿಸಿ ಆಕೆಯ ಬರಹಗಳಿಗೂ ಆಕೆಯ ಕೊಲೆಗೂ ಸಂಬಂಧವಿದ್ದಿರಬಹುದು ಎಂದು ಹೇಳಿದೆ. `` ಹಲವಾರು ವಿಚಾರಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದ ನಿರ್ಭೀತ, ಸ್ವತಂತ್ರ ಪತ್ರಕರ್ತೆಯೊಬ್ಬರನ್ನು ಅತ್ಯಂತ ಅಮಾನುಷ ರೀತಿಯಲ್ಲಿ ಗುಂಡಿಕ್ಕಿ ಸಾಯಿಸಿ ಆಕೆಯ ದನಿಯನ್ನು ಶಾಶ್ವತವಾಗಿ ಅಡಗಿಸಲಾಗಿದೆ'' ಎಂದು  ವರದಿಯಲ್ಲಿ ತಿಳಿಸಲಾಗಿದೆ. 1992ರಿಂದ ಭಾರತದಲ್ಲಿ ಪತ್ರಕರ್ತರನ್ನು ಯಾವುದೇ ಭೀತಿಯಿಲ್ಲದೆ ಹತ್ಯೆಗೈಯ್ಯಲಾಗುತ್ತಿದೆ ಎಂದೂ ಹೇಳಲಾಗಿದೆ.

ದಿ ವಾಷಿಂಗ್ಟನ್ ಪೋಸ್ಟ್

ಗೌರಿ ಲಂಕೇಶ್ ಅವರ ಕೊಲೆಗೆ ಸಂಬಂಧಿಸಿದಂತೆ ದಿ ವಾಷಿಂಗ್ಟನ್ ಪೋಸ್ಟ್ ಕೂಡ ಏಜನ್ಸಿ ವರದಿಯೊಂದನ್ನು ಪ್ರಕಟಿಸಿದೆ. ಭಾರತದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ  ಸ್ವತಂತ್ರ ಪತ್ರಕರ್ತರು ಹಾಗೂ ಧಾರ್ಮಿಕ ಅಂಧಶ್ರದ್ಧೆಗಳ ಟೀಕಾಕಾರರ ಮೇಲೆ ದಾಳಿಗೈಯ್ಯುವ ಹಲವು ಘಟನೆಗಳು ನಡೆದಿವೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ``ದಕ್ಷಿಣ ಏಷ್ಯಾದ ಜಾತ್ಯತೀತ ಪ್ರಜಾಪ್ರಭುತ್ವ ದೇಶವೊಂದರಲ್ಲಿ ತೀವ್ರವಾದ ಹಾಗೂ ಅಸಹಿಷ್ಣುತೆಯ ಬೆಳವಣಿಗೆಯ ಬಗ್ಗೆ ಆತಂಕ ಮೂಡಿಸಿದೆ'' ಎಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X