ನಾವಿಕ 4ನೆ ವಿಶ್ವ ಕನ್ನಡ ಸಮಾವೇಶ
ಉಡುಪಿ, ಸೆ.7: ನಾವಿಕ 4ನೇ ವಿಶ್ವ ಕನ್ನಡ ಸಮಾವೇಶವನ್ನು ಇತ್ತೀಚೆಗೆ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅಮೆರಿಕಾ ಟೆಕ್ಸಾಸ್ನ ಡಲ್ಲಾಸ್ ನಗರದಲ್ಲಿ ಉದ್ಘಾಟಿಸಿದರು.
ಇವರೊಂದಿಗೆ ಸಮ್ಮೇಳನದ ಉಸ್ತುವಾರಿಗಳಾದ ಅನು ಬೆನಕಟ್ಟಿ, ನಾವಿಕ ಸಂಸ್ಥೆಯ ಅಧ್ಯಕ್ಷ ರೇಣುಕಾ ರಾಮಪ್ಪ, ಸ್ವಾಮಿ ವಿವೇಕಾನಂದ ಯೋಗ ಅನುಸಂದಾನ ಸಂಸ್ಥಾನದ ಕುಲಪತಿ ಹೆಚ್.ಆರ್ ನಾಗೇಂದ್ರ ಗುರೂಜಿ ಮತ್ತು ನಾವಿಕ ಸದಸ್ಯರಾದ ವಲ್ಲೀಶ ಶಾಸ್ತ್ರಿ ಉಪಸ್ಥಿತರಿದ್ದರು.
ಅಮೆರಿಕಾದ ನಾವಿಕ ಸಂಸ್ಥೆ ಎರಡು ವರ್ಷಗಳಿಗೊಮ್ಮೆ ನಾವಿಕ ವಿಶ್ವ ಕನ್ನಡ ಸಮಾವೇಶವನ್ನು ಮೂರು ದಿನಗಳ ಸಾಂಸ್ಕೃತಿಕ ಉತ್ಸವದೊಂದಿಗೆ ಆಯೋಜಿಸು ತ್ತಿದೆ. ಸಮಾವೇಶದಲ್ಲಿ ವಾಣಿಜ್ಯ ವೇದಿಕೆ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಸಾಹಿತ್ಯಗೋಷ್ಠಿ, ಯುವ ಮತ್ತು ಮಹಿಳಾ ಗೋಷ್ಠಿ ಹಾಗೂ ವೈದ್ಯಕೀಯ ವಿಷಯಗಳ ಚರ್ಚೆಗಳನ್ನು ನಡೆಸಲಾಗುತ್ತದೆ.
Next Story