ಯುವತಿ ಆತ್ಮಹತ್ಯೆ
ಶಂಕರನಾರಾಯಣ, ಸೆ.7: ಅಂಪಾರು ಗ್ರಾಮ ನೆಲ್ಲಿಕಟ್ಟೆಯ ಶ್ರೀನಿವಾಸ ದೇವಾಡಿಗ ಎಂಬವರ ಪುತ್ರಿ, ವಿವಾಹಿತೆ ದೀಕ್ಷಿತಾ (22) ಎಂಬವರು ಬುಧವಾರ ಬೆಳಗ್ಗೆ ತಾಯಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೀಕ್ಷಿತಾ ಅವರ ವಿವಾಹ ಅಜಿತ್ ದೇವಾಡಿಗ ಎಂಬವರೊಂದಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣವಿನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story