ಸಿಂಚನ ಲೈಟಿಂಗ್ಸ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಸೆ. 8: ಸಿಂಚನ ಲೈಟಿಂಗ್ಸ್ ಆ್ಯಂಡ್ ಲೈಟಿಂಗ್ ಕಂಟ್ರೋಲ್ಸ್ ನ 6ನೆ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಧರ್ಮದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಿದ್ದು, ಅರ್ಜಿ ಆಹ್ವಾನಿಸಿದೆ.
ಕಳೆದ 5ನೆ ವಾರ್ಷಿಕೋತ್ಸವ ಪ್ರಯುಕ್ತ ಸುಮಾರು 100 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದರು. ಆಸಕ್ತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಅರ್ಜಿಯನ್ನು ಸೆ. 7ರ ಬಳಿಕ ಪಡೆದು ಭರ್ತಿ ಮಾಡಿ ಸೆ. 25ರೊಳಗೆ ಸಲ್ಲಿಸಬೇಕು.
ಪಂಪುವೆಲ್ ನ ವಿಶ್ವಾಸ್ ವ್ಯೂ ಬಿಲ್ಡಿಂಗ್ ನ ಕೆಳ ಅಂತಸ್ತಿನಲ್ಲಿ (ಕರ್ಣಾಟಕ ಬ್ಯಾಂಕಿನ ಪ್ರಧಾನ ಶಾಖೆಯ ಬಳಿ) ಹಾಗೂ ಪುತ್ತೂರು ದರ್ಬೆ ಮುಖ್ಯ ರಸ್ತೆಯ ಗಿರಿಜಾ ಕ್ಲಿನಿಕ್ ನ ಎದುರಿನ ಕೃಷ್ಣಾ ಆರ್ಕೇಡ್, ಮೂಡುಬಿದಿರೆಯಲ್ಲಿ ಕಾರ್ಕಳ ರಸ್ತೆಯ ಭಾರತ್ ಬ್ಯಾಂಕ್ ನ ಬಳಿಯ ವೀನು ಸ್ಕೈ ಪ್ಲಾಝಾದಲ್ಲಿರುವ ಸಂಸ್ಥೆಯ ಶೋರೂಂ ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಮಾಲಕರ ಪ್ರಕಟನೆ ತಿಳಿಸಿದೆ.
Next Story