Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮೇರಿಮಾತೆ ಕ್ರೈಸ್ತರ ಪಾಲಿಗೆ...

ಮೇರಿಮಾತೆ ಕ್ರೈಸ್ತರ ಪಾಲಿಗೆ ನಿಷ್ಕಳಂಕತೆಯ ಆದರ್ಶಧಾತೆ: ಆಲ್ಬರ್ಟ್ ಡಿಸಿಲ್ವ

ವಾರ್ತಾಭಾರತಿವಾರ್ತಾಭಾರತಿ8 Sept 2017 7:40 PM IST
share
ಮೇರಿಮಾತೆ ಕ್ರೈಸ್ತರ ಪಾಲಿಗೆ ನಿಷ್ಕಳಂಕತೆಯ ಆದರ್ಶಧಾತೆ: ಆಲ್ಬರ್ಟ್ ಡಿಸಿಲ್ವ

ಬಣಕಲ್, ಸೆ.8: ಕ್ರೈಸ್ತರು ಮೇರಿಮಾತೆಯನ್ನು ಬರೀ ಯೇಸುವಿನ ತಾಯಿಯಾಗಿ ಗೌರವ ನೀಡದೇ ತಮಗೂ ಅವರು ಮಾತಾ ಸ್ವರೂಪಿಯಾಗಿದ್ದಾರೆ. ಮೇರಿಮಾತೆ ಕ್ರೈಸ್ತರ ಹೆಮ್ಮೆಯ ತಾಯಿಯಾಗಿದ್ದು, ಅವರ ಆದರ್ಶಗಳನ್ನು ಕ್ರೈಸ್ತರು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಪ್ರೀತಿ ತೋರಿಸಬೇಕು ಎಂದು ಬಣಕಲ್ ಭಾಲಿಕ ಮಾರಿಯ ಚರ್ಚ್ ಧರ್ಮಗುರು ಪಾದರ್ ಆಲ್ಬರ್ಟ್ ಡಿಸಿಲ್ವ ಹೇಳಿದರು.

ಅವರು ಶುಕ್ರವಾರ ಮೇರಿ ಮಾತೆಯ ಜನ್ಮದಿನವನ್ನು ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ ಮತ್ತು ಬಣಕಲ್ ಭಾಲಿಕ ಮರಿಯ ಚರ್ಚ್‍ನಲ್ಲಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

ಐಕ್ಯತೆ ಮತ್ತು ಪ್ರೀತಿ ಪ್ರತಿಯೊಬ್ಬರ ಕುಟುಂಬದಲ್ಲಿ ನೆಲೆಯೂರಬೇಕು. ಯೇಸುವಿನ ತಾಯಿ ಮರಿಯಮ್ಮನವರ ತ್ಯಾಗ ನಮಗೆಲ್ಲಾ ಮಾರ್ಗದರ್ಶನವಾಗಿದೆ. ಮರಿಯಮ್ಮನವರ ಆದರ್ಶ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಇತರ ಧರ್ಮಿಯರೊಂದಿಗೂ ಸೌಜನ್ಯತೆ, ಐಕ್ಯತೆ ಮತ್ತು ಪ್ರೀತಿಯಲ್ಲಿ ಬದುಕಿ ನಿಜವಾದ ಕ್ರಿಸ್ತರ ಪ್ರೀತಿಯನ್ನು ನಾವು ನಮ್ಮ ನಡವಳಿಕೆ ಮೂಲಕ ತೋರಿಸಿಕೊಡಬೇಕು ಎಂದರು.

ಧರ್ಮಗುರು ಪಾದರ್ ಅಲ್ಬರ್ಟ್ ಡಿಸಿಲ್ವರವರು ಹೊಸಕ್ಕಿ ತೆನೆಯನ್ನು ಆಶೀರ್ವದಿಸಿ ಪವಿತ್ರತೆಗೊಳಿಸಿದರು. ನಂತರ ಭಕ್ತರು ತಂದ ಹೂಗಳನ್ನು ಭಾಲಿಕಾ ಮರಿಯ ಪ್ರತಿಮೆಗೆ ಅರ್ಪಿಸಿ ಹಬ್ಬದ ಸಂಭ್ರಮ ಮೆರೆದರು. ಕಬ್ಬು, ಸಿಹಿಯನ್ನು ಚರ್ಚ್‍ನಲ್ಲಿ ನೆರೆದಚ ಭಕ್ತರಿಗೆ ನೀಡಲಾಯಿತು. ಹೊಸಕ್ಕಿಯನ್ನು ನೆರೆದ ಎಲ್ಲಾ ಭಕ್ತರಿಗೂ ಪಾಯಸದ ಮೂಲಕ ಹಂಚಲಾಯಿತು.

ಈ ಸಂದರ್ಭದಲ್ಲಿ ಕೊಟ್ಟಿಗೆಹಾರದ ಚರ್ಚ್‍ನ ಅಧ್ಯಕ್ಷ ಸಿಲ್ವೆಸ್ಟರ್ ಪಿರೇರಾ, ಜೆಸ್ಸಿಂತಾ ಡಿಸೋಜ, ವಿನ್ಸೆಂಟ್‍ಲೋಬೊ, ಅನಿಲ್‍ಮೊಂತೆರೊ, ಮೇರಿಸರೋಜ, ವಿನಿತ್‍ಲೋಬೊ, ಐರಿನ್‍ಲೋಬೊ, ವಿಶ್ವಾಸ್‍ಲೋಬೊ, ವಿನ್ಸೆಂಟ್‍ಡಿಸೋಜ, ಪ್ರೆಡ್ರಿಕ್‍ಡಿಸೋಜ, ಸ್ಟ್ಯಾನಿ ಡಿಸೋಜ, ಬಿನುವರ್ಗೀಸ್, ಲಿಯೋ ಪೆರ್ನಾಂಡಿಸ್, ರಿಚರ್ಡ್‍ಡಿಸೋಜ, ಆಲ್ಬರ್ಟ್‍ಡಿಸೋಜ, ದಿಲಿಪ್‍ಪಿಂಟೊ, ಪ್ರಮೀಳ, ಡೆನಿಸ್‍ಡಿಸೋಜ, ಅರುಣ್, ತೆರೆಸ್ಸಿಯಾ, ಜಾನ್ಸನ್‍ಲೋಬೊ, ಉಲ್ಲಾಸ್‍ಪಿಂಟೊ, ಮಾರ್ಕ್‍ಮೊಂತೆರೊ ಮತ್ತಿತರರಿದ್ದರು.


ಕೆಳಗೂರು ಚರ್ಚ್‍ನಲ್ಲಿ ಹಬ್ಬ ಆಚರಣೆ
ಬಾಳೂರು, ಜಾವಳಿ, ಕೆಳಗೂರು ಚರ್ಚ್‍ನಲ್ಲೂ ಮೇರಿ ಮಾತೆಯ ಜನ್ಮದಿನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. 
ಕೆಳಗೂರು ಚರ್ಚ್‍ನಲ್ಲಿ ಹಿರೇಬೈಲ್ ಧರ್ಮಗುರು ಪಾದರ್ ಜಾರ್ಜ್ ಅಂದ್ರಾದೆ ಮಾತನಾಡಿ, ಕ್ರಿಸ್ತರ ತಾಯಿಯಾದ ಮೇರಿ ಮಾತೆ ಆದರ್ಶ ಮಹಿಳೆಯರಲ್ಲಿ ಒಬ್ಬರಾಗಿದ್ದು ಯೇಸುವಿಗೆ ಜನ್ಮ ನೀಡಿ ನಿಷ್ಕಳಂಕ ಮಾತೆಯಾಗಿ ಕ್ರೈಸ್ತರ ಪ್ರೀತಿದಾಯಕ ಮಾತೆಯಾಗಿ ಹೊರಹೊಮ್ಮಿದ್ದಾರೆ. ಅವರ ಆದರ್ಶತೆ ಸರ್ವರಿಗೂ ದಾರಿ ದೀಪವಾಗಲಿ ಎಂದರು.

ಪೂಜಾವಿದಿಯಲ್ಲಿ ಕೆಳಗೂರು ತೋಟದ ವ್ಯವಸ್ಥಾಪಕ ಸತುರ್ನಿನ್ ಡಿಸೋಜ, ಉಪ ವ್ಯವಸ್ಥಾಪಕ ವಲೇರಿಯನ್ ಪಿರೇರಾ, ಕಿಟ್ಟಿ ಗೊನ್ಸಾಲ್ವಿಸ್, ಲಾರೆನ್ಸ್ ಡಿಸೋಜ, ಜಾನ್‍ನೊರೋನ್ನಾ, ನೋಯೆಲ್ ಗೊನ್ಸಾಲ್ವಿಸ್, ಅನಿಲ್ ಕುಮಾರ್, ರೋಹನ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X