ಹಾಲಿನಲ್ಲಿ ಕೊಬ್ಬಿನಾಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಬೇಕು: ನಂಜುಂಡಸ್ವಾಮಿ

ಹನೂರು, ಸೆ.8: ತಾಲೂಕಿನ ಪಾಳ್ಯ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಜಿಲ್ಲೆಯ ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು. ಅಲ್ಲದೆ, ರಾಸುವಿಗೆ ಸಮತೋಲನ ಆಹಾರ ನೀಡಿ ಹಾಲಿನಲ್ಲಿ ಕೊಬ್ಬಿನಾಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು.
ಈ ಸಹಕಾರ ಸಂಘವು ದಿನಕ್ಕೆ 400 ಲೀ. ಹಾಲು ಉತ್ಪಾದನೆ ಮಾಡುತ್ತಿದ್ದು, ಹಾಲಿನ ಗುಣಮಟ್ಟಕಾಪಾಡುವಲ್ಲಿ ಪ್ರಥಮ ಪ್ರಾಶಸ್ಥ್ಯ ನೀಡಬೇಕು. ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕೇಂದು ಸಲಹೆ ನೀಡಿದರು.
ಜಲ್ಲಿಪಾಳ್ಯಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಲೀಲಾ ಜೋಸ್ಪಿನ್ ಮಾತನಾಡಿ, 2016-17 ನೆ ಸಾಲಿನ ಸಹಕಾರ ಸಂಘದ ವಾರ್ಷಿಕ ವರದಿ ಓದುತ್ತಾ, ಸಹಕಾರ ಸಂಘವು 47372/- ರೂ. ನಿವ್ವಳ ಲಾಭದಲ್ಲಿದ್ದು, ಹೆಚ್ಚಿನ ರೀತಿ ಮುಂದೆಯೂ ಸಹ ಸಂಘವು ಲಾಭದಾಯಕವಾಗಿಲಿ ಎಂದು ಹಾರೈಸಿದರು.
ಸಭೆಯಲ್ಲಿ ಚಾಮುಲ್ ಮಹಿಳಾ ನಿರ್ದೇಶಕ ಪ್ರಮೋದ್ , ಶಂಕರಮೂರ್ತಿ, ಸದಸ್ಯರಾದ ಶಂಕರಮೂರ್ತಿ, ವಿಸ್ತರಣಾಧಿಕಾರಿ ವೆಂಕಟೇಶ್, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗೀತಾ ಭಾಗವಹಿಸಿದ್ದರು.







