Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಒಡೆದ ಕನ್ನಡಿಯ ಫಲಿಸುವ ಚೂರುಗಳು...

ಒಡೆದ ಕನ್ನಡಿಯ ಫಲಿಸುವ ಚೂರುಗಳು...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ9 Sept 2017 12:29 AM IST
share
ಒಡೆದ ಕನ್ನಡಿಯ ಫಲಿಸುವ ಚೂರುಗಳು...

‘ಒಡೆದ ಕನ್ನಡಿ’ ಜಗತ್ಪ್ರಸಿದ್ಧ ವ್ಯಕ್ತಿಗಳ ನುಡಿ ಚಿತ್ರಗಳನ್ನು ಒಳಗೊಂಡಿವೆ. ತೆಲುಗು ಲೇಖಕ ಮುಕ್ತವರಂ ಪಾರ್ಥಸಾರಥಿ ಅವರು ಇವುಗಳನ್ನು ಜೊತೆ ಸೇರಿಸಿ, ಬಿ. ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಇಳಿಸಿದ್ದಾರೆ. ಸುಮಾರು 34 ಸುಪ್ರಸಿದ್ಧ ವಿದೇಶಿ ಲೇಖಕರ ವಿವಾದಾತ್ಮಕ ಬದುಕಿನ ಕಡೆಗೆ ಅವರು ಬೆಳಕು ಚೆಲ್ಲಿದ್ದಾರೆ. ಆದುದರಿಂದಲೇ ಒಡೆದ ಕನ್ನಡಿ ಎಂದು ಹೆಸರನ್ನು ನೀಡಿದ್ದಾರೆ. ಈ ಕನ್ನಡಿಯ ಚೂರುಗಳನ್ನು ಆಯುವಾಗ ಎಲ್ಲೋ ನಮ್ಮೆದೆಯ ಮೂಲೆಯಲ್ಲಿ ರಕ್ತ ಒಸರಿದಂತಾಗುತ್ತದೆ. ತನ್ನ ಬರವಣಿಗೆ, ಅಭಿವ್ಯಕ್ತಿಯ ಬದ್ಧತೆಗೆ ಮತ್ತು ಹಾಗೂ ಪ್ರಯೋಗಗಳಿಗೆ ಬದುಕನ್ನು ಒತ್ತೆಯಿಟ್ಟ ವಿವಿಧ ಪ್ರತಿಭೆಗಳು ಇಲ್ಲಿದ್ದಾರೆ. ಅವರು ಸಿನೆಮಾ ನಟರಾಗಿರಬಹುದು, ಹೋರಾಟಗಾರರು, ಕ್ರಾಂತಿಕಾರಿಗಳಾಗಿರ ಬಹುದು, ಗೋ ಹಕ್ಕಿಗಾಗಿ ಸಮಾಜದಿಂದ ಬಹಿಷ್ಕಾರ ಗೊಂಡವರಾಗಿರಬಹುದು, ತತ್ವಜ್ಞಾನಿಗಳಾಗಿರಬಹುದು. ಕ್ರಿಸ್ಟೋಫರ್ ಕಾಡ್ವೆಲ್, ಕಾರ್ಲ್‌ಮಾರ್ಕ್ಸ್, ಚಾರ್ಲಿ ಚಾಪ್ಲಿನ್, ಮಾರ್ಕ್ ಟ್ವೇನ್, ಹಿಟ್ಲರ್, ಚೆಕಾಫ್, ಮೊಪಾಸಾ, ವಿಕ್ಟರ್ ಹ್ಯೂಗೋ, ಓ ಹೆನ್ರಿ, ಟಾಲ್‌ಸ್ಟಾಯ್, ಆಸ್ಕರ್ ವೈಲ್ಡ್, ಚಾರ್ಲ್ಸ್ ಡಿಕೆನ್ಸ್... ಹೀಗೆ ವಿಭಿನ್ನ ಕ್ಷೇತ್ರಗಳ ವಿಭಿನ್ನ ವ್ಯಕ್ತಿತ್ವಗಳನ್ನು ಸರಳ, ಕುತೂಹಲಕರವಾಗಿ ಲೇಖಕರು ನಿರೂಪಿಸಿದ್ದಾರೆ. ತಮ್ಮ ಮನೆಮಾರು, ಹೆಂಡತಿ ಮಕ್ಕಳು ಸಂಸಾರ, ಸಮಾಜ, ಪ್ರಭುತ್ವ, ಕಷ್ಟ, ಸುಖ, ಸಮಸ್ಯೆ, ನೋವು, ಹಿಂಸೆ, ಬಿಕ್ಕಟ್ಟು, ಚಟಗಳು, ಸಾಹಸಗಳು, ಇವುಗಳೊಂದಿಗೆ ಈ ಲೇಖಕರು ನಮ್ಮ ಕಣ್ಣ ಮುಂದೆ ಹೊಸದಾಗಿ ಬಂದು ನಿಲ್ಲುತ್ತಾರೆ. ಇವರು ನಿರ್ಮಿಸಿದ ಕಲೆ, ಸಾಹಿತ್ಯ, ಸಿದ್ಧಾಂತ, ವಿವಿಧ ರೀತಿಯ ಜ್ಞಾನ ಸಂಪತ್ತು, ಸಮಾಜದ ಮೇಲೆ ಬೀರಿದ ಪ್ರಭಾವ, ಅದರಿಂದ ಇವರಿಗೆ ಸಿಕ್ಕಿದ ಪ್ರತಿಫಲ, ಇವೆಲ್ಲವನ್ನೂ ಸಂಕ್ಷಿಪ್ತವಾಗಿ ಕೃತಿಯಲ್ಲಿ ಹೇಳಲಾಗಿದೆ. ಬೆನ್ನುಡಿಯಲ್ಲಿ ಡಾ. ಬಿ. ಎಂ. ಪುಟ್ಟಯ್ಯ ಹೇಳುವಂತೆ ಬರವಣಿಗೆ ಪೂರ್ವಾಗ್ರಹ ಪೀಡಿತವಾಗಿಲ್ಲ. ವೈಭವೀಕರಣವಿಲ್ಲ. ತೆಗಳಿಕೆ, ಮೂದಲಿಕೆ ಇಲ್ಲ. ಅತ್ಯಂತ ಕಡಿಮೆ ಪದಗಳ ಚಿಕ್ಕ ಚಿಕ್ಕ ವಾಕ್ಯಗಳು. ಮನಮುಟ್ಟುವ ನಿರೂಪಣೆ. ಕಣ್ಣಿಗೆ ಕಟ್ಟುವ ಚಿತ್ರಣ. ಲಡಾಯಿ ಪ್ರಕಾಶ ಈ ಕೃತಿಯನ್ನು ಹೊರತಂದಿದೆ. ಪುಟಗಳು 106. ಕೃತಿಯ ಮುಖಬೆಲೆ 80 ರೂ. 

share
-ಕಾರುಣ್ಯಾ
-ಕಾರುಣ್ಯಾ
Next Story
X