Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಾಹನಗಳಿಗೆ ಇಂಧನ ಹಾಕಿಸುವಾಗ ಇರಲಿ...

ವಾಹನಗಳಿಗೆ ಇಂಧನ ಹಾಕಿಸುವಾಗ ಇರಲಿ ಎಚ್ಚರ!

ಎ.ಎಸ್.ಎಂ.ಎ.ಎಸ್.ಎಂ.10 Sept 2017 8:14 PM IST
share
ವಾಹನಗಳಿಗೆ ಇಂಧನ ಹಾಕಿಸುವಾಗ ಇರಲಿ ಎಚ್ಚರ!

ಮಂಗಳೂರು, ಸೆ.10: ನೀವು ನಿಮ್ಮ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ಸಹಿತ ಇತರ ವಾಹನಗಳಿಗೆ ಬಂಕ್‌ಗಳಲ್ಲಿ ಇಂಧನ ಹಾಕಿಸುವಾಗ ಎಚ್ಚರ ವಹಿಸುವುದು ಅಗತ್ಯ. ಬಂಕ್‌ಗಳಲ್ಲಿ ಇಂಧನ ಸುರಿಯುವ ಸಿಬ್ಬಂದಿಯನ್ನು ನಂಬಿ ನೀವು ಎಚ್ಚರಿಕೆ ತಪ್ಪಿದರೆ ನೀವೇ ತೊಂದರೆಯನ್ನು ಅನುಭವಿಸಬೇಕಾದೀತು... ಜೋಕೆ! 

ಈಗಾಗಲೇ ಈ ರೀತಿಯ ಎರಡು ಘಟನೆಗಳು ಮಂಗಳೂರಿನಲ್ಲಿ ನಡೆದಿವೆ. ಇಂಧನ ತುಂಬಿಸಿಕೊಳ್ಳಲು ಪಂಪ್‌ಗಳಿಗೆ ಆಗಮಿಸುವ ವಾಹನ ಮಾಲಕರು ತಮ್ಮ ವಾಹನಗಳನ್ನು ಬಂಕ್‌ಗಳ ಮುಂದೆ ನಿಲ್ಲಿಸಿ ವಾಹನದ ಟ್ಯಾಂಕ್‌ನ ಕೀಯನ್ನು ತೆರೆದು ಸುಮ್ಮನಿರುತ್ತಾರೆ. ಇಲ್ಲಿ ನೀವು ಸ್ವಲ್ಪ ಎಚ್ಚರ ತಪ್ಪಿದರೆ ನಿಮ್ಮ ವಾಹನದ ಟ್ಯಾಂಕ್‌ನಲ್ಲಿ ಪೆಟ್ರೋಲ್ ಬದಲು ಡೀಸೆಲ್ ತುಂಬಬಹುದು. ಅಥವಾ ನೀವು ನಂಬಿದ ಪಂಪ್ ಸಿಬ್ಬಂದಿ ನಿಮ್ಮ ವಾಹನಕ್ಕೆ ಡೀಸೆಲ್ ಬದಲು ಪೆಟ್ರೋಲ್ ಹಾಕಿಯಾರು...!

ಬಂಕ್‌ನ ಸಿಬ್ಬಂದಿಯವರ ಅಚಾತುರ್ಯಕ್ಕೆ ಬಂಕ್‌ನವರು ನೀಡುವ ಕಾರಣವೇನು ಗೊತ್ತೇ? ಪೆಟ್ರೋಲ್ ಪಂಪ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧ ಇದ್ದರೂ ಬಂಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಾಟ್ಸ್‌ಆ್ಯಪ್‌ಗಳಲ್ಲಿ ತಲ್ಲೀನರಾಗಿರುತ್ತಾರಂತೆ. ಆದ್ದರಿಂದಲೇ ಇಂತಹ ಅಚಾತುರ್ಯ ನಡೆಯುತ್ತದಂತೆ. ಬಂಕ್‌ನವರ ಈ ಆರೋಪಕ್ಕೆ ಫುಷ್ಟಿ ನೀಡುವಂತೆ ಕಳೆದ ಶುಕ್ರವಾರ ಇಂತಹದ್ದೇ ಅಚಾತುರ್ಯ ನಗರದ ಪೆಟ್ರೋಲ್ ಬಂಕ್‌ವೊಂದರಲ್ಲಿ ನಡೆದಿದೆ.

ಕಾರುಗಳಿಗೆ ಇಂಧನ ತುಂಬಿಸುವಾಗ ಬಂಕ್‌ನ ಸಿಬ್ಬಂದಿ ಗೊಂದಲಕ್ಕೀಡಾಗುವುದು ಸಾಮಾನ್ಯ. ಯಾಕೆಂದರೆ ಕೆಲವು ಕಾರುಗಳು ಡೀಸೆಲ್‌ನದ್ದಾಗಿದ್ದರೆ, ಮತ್ತೆ ಕೆಲವು ಪೆಟ್ರೋಲ್ ಕಾರುಗಳಾಗಿರುತ್ತವೆ. ಆದರೆ, ಆಶ್ಚರ್ಯವೆಂದರೆ ಸಿಬ್ಬಂದಿಯೋರ್ವ ಡೀಸೆಲ್ ಸುರಿದಿರುವುದು ಬೈಕ್‌ಗೆ. ಬಂಕ್‌ನಲ್ಲಿ ಇಂಧನ ಹಾಕುವ ನಾಲ್ಕು ನಳಿಗೆಗಳು ಒಟ್ಟೊಟ್ಟಿಗೆ ಇದ್ದವು. ಆ ಸಿಬ್ಬಂದಿ ಯಾವ ಲೋಕದಲ್ಲಿ ಇದ್ದನೋ ಗೊತ್ತಿಲ್ಲ. ಆ ನಾಲ್ಕು ನಳಿಗೆಯ ಪೈಕಿ ಒಂದು ನಳಿಗೆಯನ್ನು ಬೈಕ್‌ನ ಟ್ಯಾಂಕ್‌ಗೆ ಇಟ್ಟಿದ್ದ.

ಬೈಕ್ ಸುಮಾರು 2 ಕಿ.ಮೀ.ನಷ್ಟು ಚಲಿಸಿತ್ತು. ಚಾಲನೆಯಲ್ಲೇ ಬೈಕ್‌ನ್ನು ಹಿಂದಿನಿಂದ ಎಳೆದಾಡುವ ಅನುಭವ. ಟ್ಯಾಂಕ್‌ನೊಳಗೆ ಗಾಳಿ ತುಂಬಿರಬಹುದೆಂದು ಅನಿಸಿದ್ದೆ. ಮತ್ತೆ ಎಷ್ಟು ಕಿಕ್ ಹೊಡೆದರೂ ಸ್ಟಾರ್ಟ್ ಆಗಲೇ ಇಲ್ಲ. ಕೊನೆಗೂ ಹತ್ತಿರದ ಮೆಕ್ಯಾನಿಕ್ ಬಳಿ ತೋರಿಸಿದೆ. ಅಲ್ಲಿ ಮೆಕ್ಯಾನಿಕ್‌ನ ಗಮನಕ್ಕೆ ಬಾರದೆ ಅವರು ಬಿಡಿ ಭಾಗ ಹೋಗಿರಬಹುದೆಂದು ಹೇಳಿ, ಹೊಸತು ತಂದು ಅಳವಡಿಸಿದರು. ಆದರೂ ಸ್ಟಾರ್ಟ್ ಆಗಲಿಲ್ಲ. ಟ್ಯಾಂಕ್‌ನೊಳಗೆ ನೀರು ಹೋಗಿರಬಹುದೆಂದು ಟ್ಯಾಂಕ್‌ನಿಂದ ಇಂಧನ ತೆಗೆಯುವಾಗ ಇದು ಪೆಟ್ರೋಲ್ ಅಲ್ಲ ಡೀಸೆಲ್ ಎಂದರು.

ಇತ್ತೀಚೆಗೆ ಶಾಸಕರೊಬ್ಬರ ಐಶಾರಾಮಿ ಕಾರಿಗೆ ಇಂಧನ ತುಂಬಿಸುವಾಗ ಮಂಗಳೂರಿನ ಪೆಟ್ರೋಲ್ ಬಂಕ್‌ವೊಂದರಲ್ಲಿ ಇದೇ ರೀತಿಯ ಘಟನೆ ನಡೆದಿರುವುದು ಪತ್ರಿಕೆಯಲ್ಲಿ ವರದಿಯಾಗಿತ್ತು.

share
ಎ.ಎಸ್.ಎಂ.
ಎ.ಎಸ್.ಎಂ.
Next Story
X