Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸರಕಾರ ತಕ್ಷಣ ಎಫ್‌ಐಆರ್‌ ರದ್ದುಪಡಿಸಲು...

ಸರಕಾರ ತಕ್ಷಣ ಎಫ್‌ಐಆರ್‌ ರದ್ದುಪಡಿಸಲು ಕ್ರಮ ಕೈಗೊಳ್ಳಲಿ: ಎ.ಕೆ. ಸುಬ್ಬಯ್ಯ

ವಾರ್ತಾಭಾರತಿ ವರದಿಗಾರನ ಬಂಧನ

ವಾರ್ತಾಭಾರತಿವಾರ್ತಾಭಾರತಿ10 Sept 2017 9:06 PM IST
share
ಸರಕಾರ ತಕ್ಷಣ ಎಫ್‌ಐಆರ್‌ ರದ್ದುಪಡಿಸಲು ಕ್ರಮ ಕೈಗೊಳ್ಳಲಿ: ಎ.ಕೆ. ಸುಬ್ಬಯ್ಯ

ಮಂಗಳೂರು, ಸೆ.10: ಪೊಲೀಸರು ತಮ್ಮ ತಪ್ಪನ್ನು ಮುಚ್ಚಿ ಹಾಕಲು 'ವಾರ್ತಾಭಾರತಿ' ಪತ್ರಿಕೆಯ ಬಂಟ್ವಾಳ ವರದಿಗಾರ ಮತ್ತು ಪತ್ರಿಕೆಯ ಮುಖ್ಯಸ್ಥರ ವಿರುದ್ಧ ಮಾಡಿರುವ ಎಫ್‌ಐಆರ್‌ನ್ನು ರದ್ದು ಪಡಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಹೈಕೋರ್ಟ್ ನ ಹಿರಿಯ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಎ.ಕೆ.ಸುಬ್ಬಯ್ಯ ತಿಳಿಸಿದ್ದಾರೆ.

ಆರೋಪಿಯೊಬ್ಬನ ಮನೆಯನ್ನು ಶೋಧ ಮಾಡುವ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಆರೋಪಗಳು ಬಂದಿದ್ದರೆ ಈ ಬಗ್ಗೆ ಆರೋಪ ಮಾಡುತ್ತಿರುವ ಮನೆಯವರ ದೂರನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿತ್ತು. ಶೋಧ ನಡೆದ ಸಂದರ್ಭದಲ್ಲಿ ಮನೆಯವರ ಧಾರ್ಮಿಕ ಭಾವನೆಗೆ ತೊಂದರೆಯಾಗುವ ಘಟನೆ ನಡೆದಿದೆಯೇ?, ಪೊಲೀಸರಿಂದ ದೌರ್ಜನ್ಯ ನಡೆದಿದೆಯೇ?, ಇಲ್ಲವೇ ? ಎಂದು ಸಮರ್ಪಕ ತನಿಖೆ ನಡೆಯಬೇಕಾಗಿತ್ತು. ಆದರೆ ಬಂಟ್ವಾಳದ ಘಟನೆಯಲ್ಲಿ ವರದಿಗಾರನ ವರದಿಯ ಬಳಿಕ ಎಸ್ಪಿಯಿಂದ ಅಥವಾ ಉನ್ನತ ಪೊಲೀಸ್ ಅಧಿಕಾರಿಯಿಂದ ಈ ರೀತಿಯ ತನಿಖೆ ನಡೆದಂತೆ ಕಂಡು ಬರುವುದಿಲ್ಲ. ಶೋಧ ನಡೆಸಿದ ಪೊಲೀಸರ ವಿಡಿಯೋವೊಂದರ ಆಧಾರದಲ್ಲಿ ನೇರವಾಗಿ ಎಸ್ಪಿ ಹೇಳಿಕೆ ನೀಡಿದಂತೆ ಕಂಡು ಬರುತ್ತದೆ. ಈ ಪ್ರಕರಣದಲ್ಲಿ ಶೋಧದ ಸಂದರ್ಭ ಪೊಲೀಸರ ವಿರುದ್ಧ ಮನೆಯವರು ಮಾಡುತ್ತಿರುವ ಆರೋಪವನ್ನು ಪೊಲೀಸ್‌ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಮತ್ತು 'ಒಂದು ಪತ್ರಿಕೆ'ಯ 'ಒಬ್ಬ ವರದಿಗಾರನ' ವಿರುದ್ಧ ಮಾತ್ರ ಪ್ರಕರಣವನ್ನು ದಾಖಲಿಸಿ ವರದಿಗಾರನ ಬಗ್ಗೆ ಪೊಲೀಸರು ಪ್ರತೀಕಾರದ ಕ್ರಮ ಕೈಗೊಂಡಂತೆ, ಅವಕಾಶವನ್ನು ಬಳಸಿಕೊಂಡಂತೆ ಕಂಡು ಬರುತ್ತಿದೆ ಎಂದು ಎ.ಕೆ. ಸುಬ್ಬಯ್ಯ ತಿಳಿಸಿದ್ದಾರೆ.

"ಪೊಲೀಸರು ಶೋಧದ ಸಂದರ್ಭ ಆ ರೀತಿಯಾಗಿ ನಡೆದುಕೊಂಡಿಲ್ಲ" ಎಂದು ಎಸ್ಪಿ ಹೇಳಿಕೆಯನ್ನು 'ವಾರ್ತಾಭಾರತಿ' ಪತ್ರಿಕೆ ಪ್ರಕಟಿಸಿದೆ. ಆರೋಪ ಸುಳ್ಳಾಗಿದ್ದರೆ ಮನೆಯವರ ಆರೋಪ ಸುಳ್ಳು ಎಂದು ತನಿಖೆ ನಡೆಸಿ ಎಸ್ಪಿ ಪತ್ರಿಕೆಗೆ ಹೇಳಿಕೆ ನೀಡಬಹುದಿತ್ತು. ಪತ್ರಿಕೆಗೂ ಸಮಯಾವಕಾಶ ನೀಡಿ ವಿವರಣೆ ಕೇಳಿ ಪಡೆಯಬಹುದಿತ್ತು. ಬದಲಾಗಿ ಪೊಲೀಸರು ತಮ್ಮ ತಪ್ಪು ಬೆಳಕಿಗೆ ಬಂದಾಗ ಅದನ್ನು ಮುಚ್ಚಿಹಾಕಲು ಪತ್ರಿಕೆಯ ಮುಖ್ಯಸ್ಥರ ಮತ್ತು ವರದಿಗಾರನ ಮೇಲೆ ಎಫ್‌ಐಆರ್‌ನ್ನು ದಾಖಲಿಸಿರುವುದು ಸಮಂಜಸವಲ್ಲ. ಪೊಲೀಸರು ಅಲ್ಪ ಸಂಖ್ಯಾತ ಸಮುದಾಯದ ವರದಿಗಾರನೊಬ್ಬನ ಮೇಲೆ ಸೆಕ್ಷನ್‌ಗಳನ್ನು ಹಾಕಿ ಬಂಧಿಸಿರುವುದು ಪೊಲೀಸರ ಕೋಮುವಾದಿ ಭಾವನೆಯನ್ನು ತೋರ್ಪಡಿಸುತ್ತದೆ. ಅವರು ಕೋಮುವಾದಿಗಳ ಕೈ ಗೊಂಬೆಗಳ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ" ಎಂದವರು ಹೇಳಿದ್ದಾರೆ.

"ರಾಜ್ಯದ ಪ್ರಮುಖ ಪತ್ರಿಕೆಯೊಂದರ ವರದಿಗಾರನ ಮೇಲೆ ಪೊಲೀಸರು ಈ ರೀತಿಯ ಸೆಕ್ಷನ್‌ಗಳನ್ನು ಹಾಕಿ ಬಂಧನಕ್ಕೊಳಪಡಿಸುವಾಗ ಮೌನವಹಿಸುವುದು, ಕ್ರಮಕೈಗೊಳ್ಳದೆ ಇರುವುದು ಸರಿಯಲ್ಲ. ಪತ್ರಿಕೆಗಳಿಗೆ, ಪತ್ರಿಕೆಯ ವರದಿಗಾರರಿಗೆ ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ವರದಿ ಮಾಡಲು ಸರಕಾರ ಪೊಲೀಸರ ಮೂಲಕ ರಕ್ಷಣೆ ನೀಡಬೇಕು. ಅದು ಸರಕಾರದ ಹೊಣೆಗಾರಿಕೆ. ವರದಿಗಾರನ ವರದಿ ಸರಕಾರದ ಅಥವಾ ಪೊಲೀಸರ ವಿರುದ್ಧವಾಗಿದ್ದರೂ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ್ದಾಗಿದೆ. ಆದುದರಿಂದ ಸರಕಾರ ಈ ರೀತಿಯ ಎಫ್‌ಐಆರ್‌ನ್ನು ರದ್ದು ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಎ.ಕೆ.ಸುಬ್ಬಯ್ಯ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X