Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ11 Sept 2017 12:33 AM IST
share
ಓ ಮೆಣಸೇ..


  ಕೇರಳದ ಜನರು ದನದ ಮಾಂಸ ತಿನ್ನುವುದಕ್ಕೆ ಯಾವುದೇ ಅಡೆತಡೆ ಇಲ್ಲ.
- ಅಲ್ಫೋನ್ಸೋ ಕನ್ನಂ ತಾನಂ, ಕೇಂದ್ರ ಸಚಿವ
 
ಮನುಷ್ಯರ ಮಾಂಸ ತಿನ್ನುವವರ ಬಗ್ಗೆಯೂ ಅಭಿಪ್ರಾಯ ಹೇಳಿಬಿಡಿ.

---------------------
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ
- ಡಾ.ಜಿ.ಪರಮೇಶ್ವರ್,  ಕೆಪಿಸಿಸಿ ಅಧ್ಯಕ್ಷ
  ಸದಭಿಪ್ರಾಯವಿಲ್ಲ ಎಂದರೆ ಆದೀತೇ?
---------------------
 
ಕಪ್ಪು ಹಣದ ವಿರುದ್ಧ ಹೋರಾಟ ಮುಂದುವರಿಯುತ್ತದೆ
- ನರೇಂದ್ರ ಮೋದಿ, ಪ್ರಧಾನಿ
ಅಂದರೆ ದೇಶ ಇನ್ನೊಮ್ಮೆ ನೋಟು ನಿಷೇಧ ಎದುರಿಸಬೇಕೇ?
---------------------
ಮುಖ್ಯಮಂತ್ರಿ ‘ಯೋಗಿ’ ಉತ್ತರಪ್ರದೇಶವನ್ನು ‘ರೋಗಿ’ಯಾಗಿ ಮಾಡುತ್ತಿದ್ದಾರೆ.
- ರಣದೀಪ್ ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಮುಖಂಡ
  ಕಾಂಗ್ರೆಸ್ ಯಾಕೆ ಐಸಿಯುನಲ್ಲಿದೆ?
---------------------
 
ಯಾವುದೇ ಸಾಹಸವಾಗಲಿ ಆರಂಭದ ಹಂತ ದಾಟಿದರೆ ಮತ್ತೆ ಸಲೀಸು - ಬಾಬಾ ರಾಮ್‌ದೇವ್, ಯೋಗಗುರು
  ಪತಂಜಲಿ ಸರ್ಕಸ್ ಕಂಪೆನಿ ಆರಂಭಿಸುತ್ತಿದ್ದೀರಾ?
---------------------
 
ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ಸವಾಲೇ ಅಲ್ಲ.
- ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
 
ಯಡಿಯೂರಪ್ಪ, ಈಶ್ವರಪ್ಪರೇ ದೊಡ್ಡ ಸವಾಲಿರಬೇಕು.

---------------------
 
ಯಾರಿಗೂ ನನ್ನಿಂದ ಗಂಗೆಯನ್ನು ಕಿತ್ತುಕೊಳ್ಳಲಾಗದು
- ಉಮಾಭಾರತಿ, ಕೇಂದ್ರ ಸಚಿವೆ
  ಆ ಖಾತೆ ಅಷ್ಟೂ ಲಾಭದಾಯಕವೇ?
---------------------
 
ಬಾಂಬ್ ಇಟ್ಟುಕೊಂಡು ರ್ಯಾಲಿ ಮಾಡುವವರಿಗೆ ಸರಕಾರ ಅನುಮತಿ ಕೊಡುತ್ತದೆ.
-ಸಿ.ಟಿ.ರವಿ, ಶಾಸಕ
  ಅಂದರೆ ಬಾಂಬ್ ಇಟ್ಟುಕೊಂಡು ಮತ್ತೊಂದು ರ್ಯಾಲಿ ಹಮ್ಮಿಕೊಳ್ಳುವ ಯೋಚನೆಯೇ?
---------------------
 
ಭದ್ರತೆ ಮತ್ತು ರಕ್ಷಣೆ ವಿಚಾರದಲ್ಲಿ ಭಾರತ ಯಾರಿಗೂ ತಲೆ ಬಾಗುವುದಿಲ್ಲ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
  ಯಾರ ಭದ್ರತೆ ಮತ್ತು ಯಾರ ರಕ್ಷಣೆ?
---------------------
ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ, ಗ್ರಾಮ ಪಂಚಾಯತ್ ಅಧ್ಯಕ್ಷ ಚೆನ್ನಾಗಿ ಆಡಳಿತ ನಡೆಸುತ್ತಾನೆ
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
  ಅಂದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುವ ಉದ್ದೇಶವೇ?
---------------------
  ಶಿಕ್ಷಕರು ಎಂದಿಗೂ ಮಾಜಿಗಳಾಗುವುದಿಲ್ಲ
- ಪ್ರಮೋದ್ ಮಧ್ವರಾಜ್, ಸಚಿವ
 
ಕೆಲವು ರಾಜಕಾರಣಿಗಳು ಮಾಜಿಗಳಾಗಬೇಕಾದುದು ಇಂದಿನ ಅಗತ್ಯ.

---------------------
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಟ್ಲರ್‌ನಂತೆ.
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
 
ನರೇಂದ್ರ ಮೋದಿಯ ಬಿರುದನ್ನು ಸಿದ್ದರಾಮಯ್ಯಗೆ ವರ್ಗಾಯಿಸಿದ್ದಕ್ಕೆ ಭಕ್ತರು ನಿಮ್ಮ ಮೇಲೆ ಬೀಳಲಿದ್ದಾರೆ.

---------------------
  ಜಿಎಸ್‌ಟಿ ಜಾರಿಯಿಂದ ಭಾರತದಲ್ಲಿ ವಹಿವಾಟು ಸುಗಮವಾಗಿದೆ.
- ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ
  ಯಾರಿಗೆ ಎನ್ನುವುದು ಮುಖ್ಯ.
---------------------
 
ರಾಜ್ಯ ಸರಕಾರಕ್ಕೆ ಶಾಂತಿ ಸುವ್ಯವಸ್ಥೆ ಕಾಪಾಡುವ ಶಕ್ತಿಯಿಲ್ಲ
- ಶೋಭಾ ಕರಂದ್ಲಾಜೆ, ಸಂಸದೆ
 
ಶಕ್ತಿಯಿದೆಯೇ ಎಂದು ಪರೀಕ್ಷಿಸಲು ಅಶಾಂತಿ ಹುಟ್ಟಿಸುತ್ತಿದ್ದೀರಿ ಎಂದು ಕಾಣುತ್ತದೆ.

---------------------
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶನಿ ಹಿಡಿದಿದೆ - ಜನಾದರ್ನ ಪೂಜಾರಿ, ಕಾಂಗ್ರೆಸ್ ಮುಖಂಡ
  ತಮ್ಮನ್ನು ತಾವೇ ಶನಿಗೆ ಹೋಲಿಸಿರುವುದು ಎಷ್ಟು ಸರಿ?
---------------------
 
ಇಂದಿನ ಮಕ್ಕಳಲ್ಲಿ ಪ್ರಶ್ನೆಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
- ಡಾ.ವೀರೇಂದ್ರ ಹೆಗ್ಗಡೆ, 
ಧರ್ಮಾಧಿಕಾರಿ ಧರ್ಮಸ್ಥಳ
  ಮುಂದಿನ ದಿನಗಳಲ್ಲಿ ಸಂಘಪರಿವಾರ ಇನ್ನಷ್ಟು ಪಿಸ್ತೂಲುಗಳನ್ನು ಖರೀದಿಸಬೇಕಾಗುತ್ತದೆ.
---------------------
  ಆಂಧ್ರದ ನಾಗರಿಕರು ಹೆಚ್ಚು ಮಕ್ಕಳನ್ನು ಹೆರಬೇಕು.
- ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ
 
ರಾಜಕೀಯವಾಗಿ ಅವರನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಇರಬೇಕು.

---------------------
  ಗುರುಗಳು ನಿಜವಾದ ಜಗದ್ಗುರು.
- ನಳಿನ್‌ಕುಮಾರ್ ಕಟೀಲು, ಸಂಸದ
  ಜಗದ್ಗುರುಗಳಿಗೆ ಹೋಲಿಸಿ ಗುರುಗಳನ್ನು ಅವಮಾನ ಮಾಡುವುದೇ?
---------------------
 
ಆರೆಸ್ಸೆಸ್ ಬಗ್ಗೆ ರಾಹುಲ್ ಮತ್ತು ಸೋನಿಯಾಗೆ ಏನೂ ಗೊತ್ತಿಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
 
ಹೌದು. ಅವರ ಪಾತಕಗಳ ಕುರಿತಂತೆ ನಿಮ್ಮಷ್ಟು ಅವರಿಗೆ ಗೊತ್ತಿರಲಿಕ್ಕಿಲ್ಲ.

---------------------
 
ನಾವು ನಮ್ಮ ದೇಶವನ್ನು ಸುಧಾರಣೆ ಮಾಡುತ್ತಿಲ್ಲ, ಪರಿವರ್ತನೆ ಮಾಡುತ್ತಿದ್ದೇವೆ.
- ನರೇಂದ್ರ ಮೋದಿ, ಪ್ರಧಾನಿ
 
ಅಂತೂ ಸುಧಾರಣೆ ನಿಮ್ಮ ಗುರಿಯಲ್ಲ ಎನ್ನುವುದನ್ನು ಒಪ್ಪಿಕೊಂಡಿರಿ.

---------------------
 
ಸಹಿಷ್ಣುತೆ ಎನ್ನುವುದು ಭಾರತದ ಸಂಸ್ಕೃತಿ - ಮುಖ್ತಾರ್‌ಅಬ್ಬಾಸ್ ನಖ್ವಿ,
ಕೇಂದ್ರ ಸಚಿವ
  ಅಸಹಿಷ್ಣುತೆ ಸಂಘಪರಿವಾರದ ಸಂಸ್ಕೃತಿಯಿರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X