ಆಳ್ವಾಸ್ನಲ್ಲಿ ಮಂಕುತಿಮ್ಮನ ಕಗ್ಗದ ಗಾಯನ- ವ್ಯಾಖ್ಯಾನ
ಮೂಡುಬಿದಿರೆ, ಸೆ. 11: ದಿನನಿತ್ಯದ ಜೀವನದಲ್ಲಿ ಎದುರಾಗುವ ಹಲವು ಗೊಂದಲ ಮತ್ತು ಅತೃಪ್ತಿಗೆ ಮಂಕುತಿಮ್ಮನ ಕಗ್ಗದಲ್ಲಿ ಪರಿಹಾರವಿದೆ. ವಸ್ತುಪರಿಕರಗಳ ಸಂಗ್ರಹದಿಂದಲೇ ಎಲ್ಲವನ್ನೂ ಸಾಧಿಸುತ್ತೇವೆ ಎಂಬುದು ಭ್ರಮೆ. ಕಗ್ಗದಂತಹ ಕೃತಿಗಳನ್ನು ಓದಿ ಅರ್ಥಯಿಸಿದಾದ ಬದುಕು ಸರಳವೂ, ಸಮೃದ್ಧವೂ ಆಗುತ್ತದೆ ಎಂದು ಚಿಂತಕ ಡಾ.ಪ್ರದೀಪ ನಾವೂರ ನುಡಿದರು.
ಅವರು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ‘ಮಂಕುತಿಮ್ಮನ ಕಗ್ಗದ ಗಾಯನ ಮತ್ತು ವ್ಯಾಖ್ಯಾನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಯುವ ಸಮುದಾಯ ಸಾಹಿತ್ಯದ ಓದಿನಿಂದ ವಿಮುಖರಾಗಿ ಯಂತ್ರಗಳ ದಾಸರಾಗುತ್ತಿದ್ದಾರೆ. ಎಲ್ಲಾ ರೋಗಗಳನ್ನು ಮಾರುಕಟ್ಟೆಯಲ್ಲಿ ದೊರೆಯುವ ಔಷಧಿಗಳಿಂದ ಗುಣಪಡಿಸಲಾಗುವುದಿಲ್ಲ. ಉತ್ತಮ ಪುಸ್ತಕಗಳನ್ನು ಓದಬೇಕು ಎಂದರು.
ಕನ್ನಡ ವಿಭಾಗದ ಡಾ.ಯೋಗೀಶ ಕೈರೋಡಿ ಪ್ರಸ್ತಾವನೆಗೈದರು. ಚಂದ್ರಶೇಖರ ಸ್ವಾಗತಿಸಿದರು. ಪ್ರೊ.ಹರೀಶ್ ಟಿ.ಜಿ, ಡಾ.ಪ್ರವೀಣ್ಚಂದ್ರ, ಡಾ.ಕೃಷ್ಣರಾಜ ಕರಬ ಉಪಸ್ಥಿತರಿದ್ದರು.
Next Story