ಡಿಸಿಯಿಂದ ಕಪ್ಪೆಟ್ಟು ಅಂಬೇಡ್ಕರ್ ಭವನ ಕಾಮಗಾರಿ ಪರಿಶೀಲನೆ
ಉಡುಪಿ, ಸೆ.11: ದಲಿತರ ಸಾಂಸ್ಕೃತಿಕ ಚಟುವಟಿಕೆಗಾಗಿ ಕಪ್ಪೆಟ್ಟುವಿನಲ್ಲಿ ಸುಮಾರು 38.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿ ಅರ್ಧದಲ್ಲೇ ನಿಂತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗುರುವಾರ ದಿಢೀ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಲಿತ ಸಮುದಾಯದ ಮದುವೆ, ಸಭೆ ಸಮಾರಂಭಕ್ಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗೆ ಅನುಕೂಲವಾಗಲೆಂದು ನಿರ್ಮಿಸುತ್ತಿರುವ ಈ ಅಂಬೇಡ್ಕರ್ ಭವನದ ಕಾಮಗಾರಿಯು ಪ್ರಸ್ತುತ ಸುಮಾರು 20ಲಕ್ಷ ರೂ. ಕೊರತೆಯಿಂದ ಅರ್ಧದಲ್ಲೇ ನಿಂತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿ ಸಿದರು. ಈ ಸಂದರ್ಭದಲ್ಲಿ ಮುಂದಿನ ಕಾಮಗಾರಿಯ ವೆಚ್ಚಕ್ಕೆ ಮಲೆನಾಡು ಅಭಿವೃದ್ಧಿ ಮಂಡಳಿ, ನಿರ್ಮಿತಿ ಕೇಂದ್ರ, ಗ್ರಾಪಂ ಹಾಗೂ ದಾನಿಗಳಿಂದ ಕ್ರೂಡೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎನ್.ರಮೇಶ್, ನಿರ್ಮಿತಿ ಕೇಂದ್ರದ ಮುಖ್ಯ ಇಂಜಿನಿಯಾರ್ ದಿವಾಕರ್, ಗುತ್ತಿಗೆದಾರ ಜಿತೇಶ್, ಕಟ್ಟಡ ಇಂಜಿನಿಯರ್ ಗುರುಪ್ರಸಾದ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಭಾಸ್ಕರ್, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ನಗರಸಬಾ ಸದಸ್ಯ ಗಣೇಶ್ ನೆರ್ಗಿ, ಸಮುದಾಯ ಭವನದ ಅಧ್ಯಕ್ಷ ಮಂಜುನಾಥ ಅಮೀನ್, ಮುಖಂಡರಾದ ಮಾಧವ ನಿಟ್ಟೂರು, ಸತೀಶ್ ಕಪ್ಪೆಟ್ಟು, ಸಂತೋಷ್,ಕುಮಾರ್ ಕಪ್ಪೆಟ್ಟು, ಕೃಷ್ಣ, ರತ್ನಕರ, ಸದಾನಂದ ಕಪ್ಪೆಟ್ಟು, ಪ್ರಬಾಕರ್, ಸುನೀಲ್ ಕಪ್ಪೆಟ್ಟು, ಸತೀಶ್, ಸೋಮನಾಥ ಕಪ್ಪೆಟ್ಟು, ವೀನ್ ಕಪ್ಪೆಟ್ಟು ಉಪಸ್ಥಿತರಿದ್ದರು.