ಸೆ. 17: ಯುನಿವೆಫ್ ನಿಂದ 'ವ್ಯಕ್ತಿತ್ವ ವಿಕಸನ ಶಿಬಿರ'
ಮಂಗಳೂರು, ಸೆ. 13: ಯುನಿವೆಫ್ ಕರ್ನಾಟಕ ವತಿಯಿಂದ ಸ್ವಾಭಿಮಾನಿ, ಸ್ವಾವಲಂಬಿ ಹಾಗೂ ಶಕ್ತ ಸಮುದಾಯವನ್ನಾಗಿ ಮಾಡುವ ಗುರಿಯೊಂದಿಗೆ ಜಿಲ್ಲೆಯ ವಿವಿಧೆಡೆ ಶಿಬಿರಗಳನ್ನು ಏರ್ಪಡಿಸಲು ತೀರ್ಮಾನಿಸಿದೆ.
ಸೆ.17ರಂದು ಬೆಳಗ್ಗೆ 8:30 ರಿಂದ 12:30 ರವರೆಗೆ ಉಳ್ಳಾಲದ ಮುಕ್ಕಚ್ಚೇರಿಯ ಬಿರ್ಲಾ ಕಾಂಪೌಂಡ್ ನಲ್ಲಿರುವ ನಿಮ್ರ ಮಸೀದಿಯಲ್ಲಿ 'ವ್ಯಕ್ತಿತ್ವ ವಿಕಸನದ ಏಕದಿನ ಶಿಬಿರ' ಏರ್ಪಡಿಸಲಾಗಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಲವು ವಿಷಯಗಳ ಬಗ್ಗೆ ತರಗತಿ ನಡೆಸಲಿದ್ದಾರೆ.
ಆಸಕ್ತರು ಹೆಸರು ನೊಂದಾಯಿಸಲು ಖಾಲಿದ್ ಯು.ಕೆ. ಮೊ.ಸಂ. 9845199931, ಮುಹಮ್ಮದ್ ಸೈಫುದ್ದೀನ್ 9945913824 ಸಂಪರ್ಕಿಸಬೇಕಾಗಿ ಯುನಿವೆಫ್ ಕರ್ನಾಟಕ ಇದರ ಸಂಚಾಲಕ ಬಿ.ಎಂ.ಬದ್ರುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story