ಸೆ.15: ಮ್ಯಾನ್ಮಾರಿನಲ್ಲಿ ರೋಹಿಂಗ್ಯಾ ಮುಸ್ಲಿಮರ ರಕ್ಷಣೆಗೆ ಆಗ್ರಹಿಸಿ ಬಿ.ಸಿ.ರೋಡಿನಲ್ಲಿ ಧರಣಿ
ಫರಂಗಿಪೇಟೆ, ಸೆ.14: ಮ್ಯಾನ್ಮಾರಿನಲ್ಲಿ ಅಸಹಾಯಕ ರೋಹಿಂಗ್ಯಾ ಮುಸ್ಲಿಮರನ್ನು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಸಾಮೂಹಿಕ ಹತ್ಯೆ ನಡೆಸಲಾಗುತ್ತಿದೆ, ಅತ್ಯಾಚಾರ ಎಸಗಿ ಅವರನ್ನು ಬಲವಂತದಿಂದ ದೇಶದಿಂದ ಹೊರಹಾಕಲಾಗುತ್ತಿದೆ. ಇದನ್ನು ಖಂಡಿಸಿ ರೋಹಿಂಗ್ಯಾ ಮುಸ್ಲಿಮರಿಗೆ ರಕ್ಷಣೆ ನೀಡಬೇಕು, ಅವರನ್ನು ಮಾನವರಂತೆ ಕಾಣಬೇಕು, ಶಾಂತಿ ಸ್ಥಾಪನೆಗೆ ಯುನೈಟೆಡ್ ನೇಶನ್ಸ್ ಆರ್ಗನೈಝೇಶನ್ ಮದ್ಯಸ್ಥಿಕೆ ವಹಿಸಲು ಭಾರತ ಸರಕಾರ ಆಗ್ರಹಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಂಟ್ವಾಳ ವಿದಾನಸಭಾ ಕ್ಷೇತ್ರ ಸಮಿತಿಯು ಸೆ.15ರಂದು ಸಂಜೆ 4:30ಕ್ಕೆ ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ ಎಂದು ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ಶಾಹುಲ್ ಎಸ್.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story