ಸರಕಾರ ಕೃಷಿ, ಕೃಷಿಕರಿಗೆ ಎಲ್ಲ ರೀತಿಯಿಂದ ಬೆಂಬಲ ನೀಡುತ್ತಿದೆ: ಎಸ್.ಅಜಿತ್ ಕುಮಾರ್ ರೈ

ಶಿಡ್ಲಘಟ್ಟ, ಸೆ.14: ಸರ್ಕಾರವು ಕೃಷಿ ಹಾಗೂ ಕೃಷಿಕರಿಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತಿದೆ. ನೀರಿನ ಸದ್ಬಳಕೆ, ಕೃಷಿಯಲ್ಲಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳುವುದು ಮುಖ್ಯ ಎಂದು ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ತಿಳಿಸಿದರು.
ತಾಲೂಕಿನ ಶೀಗೆಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಚಿಂತಾಮಣಿ ಕುರುಬೂರಿನ ರೇಷ್ಮೆ ಕೃಷಿ ವಿಶ್ವವಿದ್ಯಾನಿಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕ್ಷೇತ್ರ ಅನುಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಐಸಿರಿ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೀಡ್ ಬ್ಯಾಂಕ್ನ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆ ನಡೆಸಿ ಯಾವುದೆ ಕಾರಣಕ್ಕೂ ಬರಗಾಲದ ಅವಧಿಯಲ್ಲಿ ಸಾಲ ಮರುಪಾವತಿಸುವಂತೆ, ಬಡ್ಡಿ ಕಟ್ಟುವಂತೆ ಅಥವಾ ಇನ್ನಾವುದೆ ರೀತಿಯಲ್ಲಿ ನೊಟೀಸ್ ನೀಡುವಂತಹ ಕ್ರಮ ಜರಗಿಸಬಾರದು ಎಂದು ಸೂಚಿಸಲಾಗಿದೆ ಎಂದರು.
ರೇಷ್ಮೆ ಇಲಾಖೆಯ ಉಪನಿರ್ದೆಶಕ ಬಿ.ಆರ್.ನಾಗಭೂಷಣ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಸಾಕಷ್ಟು ಆವಿಷ್ಕಾರಗಳು ಆಗಿದ್ದು ಅವುಗಳನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆ, ಅಧಿಕ ಲಾಭಗಳಿಸುವಂತಾಗಬೇಕೆಂದರು.
ಈ ವೇಳೆ ಶೀಗೆಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ಕರ ಪತ್ರಗಳನ್ನು ಹಂಚಲಾಯಿತಲ್ಲದೆ ವಿವಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವೈ.ಹುಣಸೇನಹಳ್ಳಿ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್, ಸದಸ್ಯರಾದ ಶ್ರೀನಿವಾಸರೆಡ್ಡಿ, ಕಲ್ಪನಜಯಣ್ಣ, ಮಂಜುನಾಥ್, ಪ್ರಗತಿಪರ ರೈತ ಮಳ್ಳೂರು ಶಿವಣ್ಣ, ರೇಷ್ಮೆ ಕೃಷಿ ಸಹಾಯಕ ನಿರ್ದೆಶಕ ಬೋಜಣ್ಣ, ವಿಸ್ತರಣಾಕಾರಿ ರಾಮಕೃಷ್ಣಪ್ಪ, ಮಾರುಕಟ್ಟೆ ಪ್ರಭಾರಿ ಉಪನಿರ್ದೆಶಕ ಬೈರಾರೆಡ್ಡಿ, ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ವೆಂಕಟರೋಣಪ್ಪ, ಡಾ.ರಾಜಣ್ಣ, ಡಾ.ಆರ್.ಬಿ.ನಾಯಕ್, ಡಾ.ರಾಮಕೃಷ್ಣ ನಾಯಕ್, ಡಾ.ಶ್ರೀನಿವಾಸರೆಡ್ಡಿ, ಡಾ.ನಾರಾಯಣಸ್ವಾಮಿ, ಡಾ.ರಿಂಕು ವರ್ಮ, ಡಾ.ಅಮರನಾಥ್, ಭಾರತಿ, ಡಾ.ಸೀನಪ್ಪ, ವಿದ್ಯಾರ್ಥಿಗಳಾದ ಸುಪ್ರಿಯಾ, ಶ್ವೇತ, ಸುಮಾ, ಝಕಿಯಾ ಸುಲ್ತಾನ, ರಘು, ಸೋಮೇಶ್ ಹಿರೇಮಠ್, ಸಂಜಿತ್ ಕುಮಾರ್, ಮೋಹನ್, ರುದ್ರೇಶ್, ಸುಭಾಶ್, ರವಿತೇಜ, ಸಾಗರ್, ಶರತ್ ಹಾಜರಿದ್ದರು.







