ಬಂಟ್ವಾಳ: ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ
ಬಂಟ್ವಾಳ, ಸೆ. 16: ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ವತಿಯಿಂದ ಈಚೆಗೆ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಇಲ್ಲಿನ ಹುಡುಗರ ವಿಭಾಗ ಮತ್ತು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು ಸಮಾನ ಅಂಕಗಳಿಸಿ ಪ್ರಥಮ ಸ್ಥಾನ ಗೆದ್ದುಕೊಂಡಿತು.
ಹುಡುಗಿಯರ ವಿಭಾಗದಲ್ಲಿ ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನ ತಂಡ ವಿನ್ನರ್ಸ್ ಮತ್ತು ಕಕ್ಯಪದವು ಎಲ್ಸಿಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನ ತಂಡವು ರನ್ನರ್ಸ್ ಸ್ಥಾನ ಗೆದ್ದುಕೊಂಡಿತು.
ಕಾಲೇಜಿನ ಸಂಚಾಲಕಕೂಡಿಗೆ ಪ್ರಕಾಶ್ ಶೆಣೈ, ಕ್ರೀಡಾ ಸಹಾಯಕ ತಾರಾನಾಥ ಜಿ.ಎಸ್., ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ ಕೃಷ್ಣಪ್ಪ ಬಂಗೇರ, ಸಂಯೋಜಕ ಲೆಪ್ಟಿನೆಂಟ್ ಸುಂದರ್, ಕೆ.ಶಶಿಕಲಾ ಮತ್ತಿತರರು ಇದ್ದರು.
Next Story