Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಶಿವರಾಜ್ ಕುಮಾರ್ ಗೆ ಧ್ರುವ ಸರ್ಜ...

ಶಿವರಾಜ್ ಕುಮಾರ್ ಗೆ ಧ್ರುವ ಸರ್ಜ ಪೈಪೋಟಿ?!

ಶಶಿಕರ ಪಾತೂರುಶಶಿಕರ ಪಾತೂರು18 Sept 2017 4:52 PM IST
share
ಶಿವರಾಜ್ ಕುಮಾರ್ ಗೆ ಧ್ರುವ ಸರ್ಜ ಪೈಪೋಟಿ?!

ಕನ್ನಡ ಚಿತ್ರರಂಗದ ‌ಜನಪ್ರಿಯ ತಾರೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಬಿರುದಾಂಕಿತ ಶಿವರಾಜಕುಮಾರ್. ಡಾ. ರಾಜಕುಮಾರ್ ಪುತ್ರ ಎನ್ನುವುದಕ್ಕಿಂತಲೂ ತಮ್ಮದೇ ಚಿತ್ರಗಳ‌ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡವರು ಶಿವಣ್ಣ. ಆದರೆ ಹೊಸದಾಗಿ ಬರುವ ಹೀರೋಗಳು ಜಾತ್ರೆಯಲ್ಲಿ ಆನೆಯ ಬಾಲ ಎಳೆಯಲು ಬರುವ ಪೋರರಂತೆ ಶಿವರಾಜ್ ಕುಮಾರ್ ತಂಟೆಗೆ ಬರುವುದುಂಟು. ಅಂಥ ಘಟನೆ ಇತ್ತೀಚೆಗೆ ಧ್ರುವ ಸರ್ಜ ಕಡೆಯಿಂದ ನಡೆಯುತ್ತಿದೆ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಿವರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿ ನಟಿಸಲಾರಂಭಿಸಿದ ಹಾಗೆ ಯಶಸ್ಸು ಕೂಡ ಜತೆ ನೀಡಿತ್ತು. 'ಆನಂದ್', 'ರಥಸಪ್ತಮಿ' ಮತ್ತು 'ಮನಮೆಚ್ಚಿದ ಹುಡುಗಿ' ಹೀಗೆ ಬಿಡುಗಡೆಯಾದ ಮೂರು ಚಿತ್ರಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದಾಗ ಅವರಿಗೆ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ನೀಡಲಾಗಿತ್ತು. ಇದೀಗ ಮೂರುದಶಕಗಳ ಬಳಿಕ ಅಂಥದೊಂದು ಬಿರುದನ್ನು ಧ್ರುವಸರ್ಜಾಗೆ ನೀಡಲು ಅಭಿಮಾನಿಗಳು‌ ಮುಂದಾಗಿದ್ದಾರೆ. ಆದರೆ ಈಗಲೂ ಕೂಡ ಚಂದನವನದಲ್ಲಿ ಕ್ಲಾಸ್ ಮಾಸ್ ಹೀರೋವಾಗಿ ಸಕ್ರಿಯವಾಗಿರುವ ಶಿವರಾಜ್ ಕುಮಾರ್ ಬಗ್ಗೆ ಇವರು ಯಾರೂ ಗಮನಹರಿಸಿಲ್ಲವೆನ್ನುವುದು ವಿಷಾದನೀಯ.

ನಾನು ಶಿವಣ್ಣನ ಅಭಿಮಾನಿ: ಧ್ರುವ

ಇದರ ನಡುವೆ 'ನಾನು‌ ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿರುವಾಗ ಇಲ್ಲಿ‌ ಗೊಂದಲಗಳಿಗೆ ಅವಕಾಶವಿಲ್ಲ' ಎಂದಿದ್ದಾರೆ ಧ್ರುವ ಸರ್ಜ. ಅದಕ್ಕೆ ಅವರು ಚಿತ್ರದಲ್ಲಿ ಬಳಸಿರುವ ಒಂದು ಸಂಭಾಷಣೆ ಕೂಡ ಪೂರಕವಾಗಿದೆ ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಆದರೆ ಸಮಸ್ಯೆ ಇಲ್ಲಿಗೆ ಮುಗಿದಂತೆ ಕಾಣುತ್ತಿಲ್ಲ.

'ಟಗರು' ಮುಂದೆ 'ಪೊಗರು'

ದುನಿಯಾ ಸೂರಿ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟನೆಯ 'ಟಗರು' ಚಿತ್ರ ತೆರೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತು. ಇದೀಗ ಭರ್ಜರಿಯ ಬಳಿಕ ಬರುತ್ತಿರುವ ಧ್ರುವಸರ್ಜ ಚಿತ್ರಕ್ಕೆ 'ಪೊಗರು' ಎಂದು ಹೆಸರಿಡಲಾಗಿದೆ. ವಿಶೇಷ ಏನೆಂದರೆ ಈ ಮೊದಲು 'ಹಯಗ್ರೀವ' ಎನ್ನುವ ಹೆಸರಿನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಸುದ್ದಿಯಲ್ಲಿದ್ದ ನಿರ್ದೇಶಕ ನಂದಕಿಶೋರ್ ಸಿನಿಮಾ ಇದು. ಮತ್ತೆ ಈಗ ಯಾಕೆ ಹೀಗೆ 'ಪೊಗರು' ಎಂದು ಬದಲಾಯಿತು ಎನ್ನುವುದು ಗೊತ್ತಾಗುತ್ತಿಲ್ಲ.

ಗೆಲುವು ಅಹಂಕಾರವಾಗದಿರಲಿ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜ ನಾಮಬಲದೊಂದಿಗೆ ತೆರೆಗೆ ಬಂದ ಧ್ರುವ ಸರ್ಜ ಅದೇ ಕಾರಣಕ್ಕೆ 'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಇಟ್ಟುಕೊಂಡರು. ಇದುವರೆಗೆ ತೆರೆಕಂಡ ಅವರ ಮೂರು ಚಿತ್ರಗಳು ಕೂಡ ಮಹಾನ್ ಚಿತ್ರಗಳೇನೂ ಅಲ್ಲವಾದರೂ, ಮಹಾ ವಿಜಯ ಸಾಧಿಸಿರುವುದನ್ನು ಅಲ್ಲಗಳೆಯಲಾಗದು. ಆದರೆ ನೂರು ‌ಚಿತ್ರಗಳನ್ನು ದಾಟಿದ ಮೇಲೆಯೂ‌ ಮೂರೇ ಮೂರು ಬಿರುದುಗಳಿಗೆ ತೃಪ್ತಿ ಪಟ್ಟುಕೊಂಡ ಶಿವರಾಜ್ ಕುಮಾರ್ ಮುಂದೆ, ಪ್ರತಿ ಚಿತ್ರಕ್ಕೂ ಬಿರುದು ನೀಡುತ್ತಿರುವ ಈಗಿನ ತಾರೆಗಳು ಅಭಿಮಾನ ಅಂಧಾಭಿಮಾನವೆನಿಸುತ್ತಿದೆ. ಖುದ್ದು ಧ್ರುವ ಸರ್ಜ ಕೂಡ ಇನ್ನುಮುಂದೆ ನಾನು ''ಹ್ಯಾಟ್ರಿಕ್ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ " ಎನ್ನುತ್ತಾರೆ. ಇರಲಿ, ಆದರೆ ಪೊಗರು ಚಿತ್ರದಲ್ಲಷ್ಟೇ ಉಳಿದರೆ ಸರಿ, ನಿಜ‌ ಬದುಕಲ್ಲೂ ತೋರಿಸಿದರೆ ಮುಂದೆ ಕಷ್ಟ ಮರಿ' ಎನ್ನುತ್ತಿದೆ ಗಾಂಧಿನಗರ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X