ಯುವತಿ ನಾಪತ್ತೆ: ದೂರು
ಪುತ್ತೂರು, ಸೆ. 19: ತಾಲೂಕಿನ ಬಲ್ನಾಡು ಗ್ರಾಮದ ಮುಗೆರೋಡಿ ನಿವಾಸಿ ಯುವತಿಯೋರ್ವಳು ನಾಪತ್ತೆಯಾಗಿರುವ ಕುರಿತು ಮಂಗಳವಾರ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಮುಗೆರೋಡಿ ನಿವಾಸಿ ಚನಿಯಪ್ಪ ನಾಯ್ಕ ಅವರ ಪುತ್ರಿ ಸುಶೀಲ (28) ನಾಪತ್ತೆಯಾದವರು. ಸುಶೀಲ ಅವರು ಸೆ.2ರಂದು ಬೆಳಗ್ಗೆ ತನ್ನ ತಾಯಿಯಲ್ಲಿ ಕುದ್ದುಪದವಿನಲ್ಲಿರುವ ಸಹೋದರನ ಮನೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದರು. ಸುಶೀಲನ ಅಣ್ಣ ತಿಮ್ಮಪ್ಪ ನಾಯ್ಕ ಅವರು ಸೆ.17ರಂದು ಪೂಜಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಶೀಲ ತೆರಳಿದ್ದ ಸಹೋದರನ ಮನೆಗೆ ಹೋಗಿದ್ದ ವೇಳೆ ಅಲ್ಲಿಗೆ ಆಕೆ ಹೋಗದಿರುವ ವಿಚಾರ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಕೆಯ ಪತ್ತೆಗೆ ಮನೆಮಂದಿ ಸೇರಿಕೊಂಡು ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಸುಶೀಲ ಅವರ ಸಹೋದರ ತಿಮ್ಮಪ್ಪ ನಾಯ್ಕ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
Next Story