ಬೆಳೆ ವಿಮೆ ತಾರತಮ್ಯ: ವಿವಿಧ ರೈತ ಸಂಘದಿಂದ ತಹಶೀಲ್ದಾರಿಗೆ ಮನವಿ

ಮುಂಡಗೋಡ, ಸೆ.19: ತಾಲೂಕಿನ ರೈತರಿಗೆ ಬೆಳೆ ವಿಮೆ ನೀಡುವಲ್ಲಿ ತಾರತಮ್ಯ ಮಾಡಿದ್ದು, 8 ದಿನದೊಳಗಾಗಿ ಈ ರೈತರ ಖಾತೆಗೆ ಜಮಾ ಆಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪಟ್ಟಣದಲ್ಲಿ ಮೇರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ತಾಲೂಕಿನ 6 ಪಂಚಾಯತ್ ವ್ಯಾಪ್ತಿಯ ರೈತರಿಗೆ ಬೆಳೆವಿಮೆಯು ಜಮವಾಗಿಲ್ಲಾ, 8 ದಿನದೊಳಗಾಗಿ ರೈತರ ಖಾತೆಗಳಿಗೆ ವಿಮಾ ಹಣ ಜಮೆ ಆಗದಿದ್ದಲ್ಲಿ ತಾಲೂಕಾ ಕಚೇರಿಗೆ ಮುತ್ತಿಗೆ ಮತ್ತು ಜಿಲ್ಲಾದ್ಯಂತ ಪ್ರತಿಭಟಸಲಾಗುವುದು. ಈ ಮನವಿಯನ್ನು ಪರಿಶೀಲಿಸಿ ನೀರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅಧ್ಯಕ್ಷ ಶಂಭಣ್ಣ ಕೊಳೂರ, ರೈತ ಮುಖಂಡರಾದ ಲೋಹಿತ ಮಟ್ಟಿಮನಿ, ಮಲ್ಲಿಕಾರ್ಜುನ ಕುಟ್ರಿ, ವಾಯ.ಪಿ ಪಾಟೀಲ್, ಪಾಂಡುರಂಗ ಪವಾರ, ರವಿ ವಾಲ್ಮೀಕಿ, ಮೌನೇಶಪ್ಪ ಕಂಬಾರ, ಗದಗಯ್ಯಾ ಉಗ್ಗಿನಕೇರಿ ಮತ್ತಿತರರಿದ್ದರು.
Next Story





