25ಕ್ಕೆ ‘ಸಾಮಗಾನ’ ಕೃತಿ ಅನಾವರಣ
ಉಡುಪಿ, ಸೆ.19: ಕನ್ನಡ, ಸಂಸ್ಕೃತ, ಸಂಗೀತ ಹಾಗೂ ಸಾಮವೇದದ ವಿದ್ವಾಂಸರಾಗಿದ್ದ ದಿ.ಮಟಪಾಡಿ ರಾಜಗೋಪಾಲಾಚಾರ್ಯರ ಬದುಕು ಸಾಧನೆಗಳನ್ನು ಬಿಂಬಿಸುವ ಕೃತಿ ‘ಸಾಮಗಾನ’ದ ಅನಾವರಣ ಸೆ.25ರಂದು ಸೋಮವಾರ ಅಪರಾಹ್ನ 3:45ಕ್ಕೆ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯಲಿದೆ.
ಅದಮಾರು ಮಠದ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಡಾ.ಜಿ.ಎಸ್.ಚಂದ್ರಶೇಖರ್, ಪ್ರದೀಪ್ ಕುಮಾರ್, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ ಉಪಸ್ಥಿತ ರಿರುವರು.
ಅದಮಾರು ಮಠದ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಡಾ.ಜಿ.ಎಸ್.ಚಂದ್ರಶೇಖರ್, ಪ್ರದೀಪ್ ಕುಮಾರ್, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ ಉಪಸ್ಥಿತ ರಿರುವರು. ಮಟಪಾಡಿ ರಾಜಗೋಪಾಲಾಚಾರ್ಯರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ ಸಿದ್ಧಾಪುರ ಅವರು ಈ ಕೃತಿಯನ್ನು ರಚಿಸಿದ್ದಾರೆ.
Next Story