ಸೆ. 19ರಿಂದ ಮದ್ಯ ವರ್ಜನ ಶಿಬಿರ
ಹೊನ್ನಾಳಿ, ಸೆ.19: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೆ. 19ರಿಂದ 26ರವರೆಗೆ ಮದ್ಯ ವರ್ಜನ ಶಿಬಿರ ನಡೆಯಲಿದೆ. ಅಂದು ನಡೆಯುವ ಶಿಬಿರವು ಕ್ಷೇತ್ರದ ಬಾಲಕೃಷ್ಣ ಮಹಾರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ತಾಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಸ್ವಾಮಿಯ ಸನ್ನಿಧಿ ವಹಿಸಲಿದ್ದಾರೆ ಎಂದು ತಾಪಂ ಸದಸ್ಯ ಪೀರ್ಯಾ ನಾಯ್ಕ ಹೇಳಿದರು.
ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರಕ್ಕೆ ಈಗಾಗಲೇ 80 ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೂರಗೊಂಡನಕೊಪ್ಪ ಶ್ರೀಕ್ಷೇತ್ರದ ಸಂತ ಸೇವಾಲಾಲ್ ಮತ್ತು ಮಾತಾ ಮರಿಯಮ್ಮ ಸೇವಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಬಾಲಕೃಷ್ಣ ಮಹಾರಾಜ್, ಸೂರ್ಯಾನಾಯ್ಕ, ಈಶ್ವರಾನಾಯ್ಕ, ಜಗದೀಶ್ನಾಯ್ಕ, ಹನುಮಂತನಾಯ್ಕ, ಸುರೇಶ್, ಉಮೇಶ್, ಕುಬೇರ್ನಾಯ್ಕ, ಶಂಕ್ರಾನಾಯ್ಕ, ಗಿರೀಶ್ನಾಯ್ಕ ಇದ್ದರು.
Next Story