ಮಳೆನೀರು ಹರಿದು ಹೋಗಲು ಕ್ರಮ ಕೈಗೊಳ್ಳಲು ಸೂಚನೆ
ಮಂಗಳೂರು, ಸೆ.21:ಯಾವುದೇ ಕಾರಣಕ್ಕೂ ತೋಡುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸರಾಗವಾಗಿ ತೋಡುಗಳನ್ನು ಶುಚಿಗೊಳಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ವಿವಿಧೆಡೆ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಜನರಿಗೆ ಸಮಸ್ಯೆಯುಂಟಾದ ಹಿನ್ನೆಲೆಯಲ್ಲಿ ಕದ್ರಿಯಲ್ಲಿರುವ ತನ್ನ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ತೋಡುಗಳನ್ನು ಅಗಲಗೊಳಿಸಬೇಕು. ತೋಡುಗಳನ್ನು ನೋಡಿಕೊಂಡು ಒಳಚರಂಡಿ ಸ್ವಚ್ಛತೆಯನ್ನು ಮಾಡಬೇಕು ಎಂದು ಅವರು ಸೂಚಿಸಿದರು.
ಅನಧಿಕೃತ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈಲ್ವೆ ಸೇತುವೆಗೆ ಮಧ್ಯದಲ್ಲಿ ಹಾಕಿರುವ ಪಿಲ್ಲರ್ನಿಂದ ಮಳೆ ನೀರನ್ನು ತಡೆಹಿಡಿಯಲು ಶಾಸಕ ಲೋಬೊ ತಿಳಿಸಿದರು.
ಸಭೆಯಲ್ಲಿ ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
Next Story