Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಚಿವುಟಿದಷ್ಟೂ ಚಿಗುರು-ಹೆಣ್ಣಿನ ಒಳ...

ಚಿವುಟಿದಷ್ಟೂ ಚಿಗುರು-ಹೆಣ್ಣಿನ ಒಳ ಹೊರಗಿನ ಮಾತು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ23 Sept 2017 12:09 AM IST
share
ಚಿವುಟಿದಷ್ಟೂ ಚಿಗುರು-ಹೆಣ್ಣಿನ ಒಳ ಹೊರಗಿನ ಮಾತು

 ಈಗಾಗಲೇ ತನ್ನ ವಿಚಾರಪೂರ್ಣ ಲೇಖನ ಬರಹಗಳ ಮೂಲಕ, ಭಾಷಣಗಳ ಮೂಲಕ ರಾಜ್ಯಾದ್ಯಂತ ಗುರುತಿಸಿ ಕೊಂಡಿರುವ ಡಾ. ಎಚ್. ಎಸ್. ಅನುಪಮಾ ಅವರ ಸಣ್ಣ ಕತೆಗಳ ಸಂಕಲನ ‘ಚಿವುಟಿದಷ್ಟೂ ಚಿಗುರು’. ಇಲ್ಲಿ ಕತೆಗಳನ್ನು ಎರಡು ಭಾಗಗಳಾಗಿ ಮಾಡಲಾಗಿದೆ. ಚಿಗುರು ಭಾಗದಲ್ಲಿ 12 ಕತೆಗಳಿವೆ. ಡಾಕ್ಟ್ರಮ್ಮನ ಡೈರಿ ಭಾಗದಲ್ಲಿ 6 ಕತೆಗಳಿವೆ. ಡಾ. ಅನುಪಮಾ ಅವರು ವೃತ್ತಿಯಲ್ಲಿ ವೈದ್ಯರೂ ಆಗಿದ್ದಾರೆ. ಆದಿವಾಸಿಗಳಿರುವ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ ದಟ್ಟ ಅನುಭವವನ್ನು ಹೊಂದಿದವರು. ಆ ಅನುಭವದ ತಳಹದಿಯಲ್ಲಿ ಮೊಳಕೆ ಒಡೆದಿರುವ ಕತೆಗಳಾಗಿರುವುದರಿಂದ ಅವರು ಡಾಕ್ಟ್ರಮ್ಮನ ಡೈರಿ ಎಂದು ಪ್ರತ್ಯೇಕವಾಗಿ ನಮೂದಿಸಿರುವ ಸಾಧ್ಯತೆಗಳಿವೆ. ಒಬ್ಬ ವೈದ್ಯೆಯ ಅನುಭವ ಮತ್ತು ರೋಗಿಗಳ ಮುಗ್ಧತೆಯನ್ನು ತಿಳಿಯಾಗಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ಹೆಚ್ಚಿನ ಕತೆಗಳ ಹಂದರದಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳು ಒಂದರ ಹಿಂದೊಂದು ಸರಪಳಿಯಂತೆ ಕಟ್ಟಿಕೊಂಡು ಓದುಗರನ್ನು ಬಿಟ್ಟೂ ಬಿಡದೆ ಕಾಡುವಂತಿವೆ. ಸಾಮಾಜಿಕ ಹೋರಾಟಗಳಿಗೆ, ಸಮಸ್ಯೆಗಳಿಗೆ ಅನುಪಮಾ ಮುಖಮುಖಿಯಾಗುತ್ತಾ ಬಂದಿರುವುದರಿಂದ ಅವರ ಕತೆಗಳಲ್ಲೂ ಅವು ಅವರ ಪ್ರಜ್ಞೆಯನ್ನು ಮೀರಿ ದಾಖಲಾಗುತ್ತವೆ. ಆದುದರಿಂದ ಹೆಚ್ಚಿನ ಕತೆಗಳೂ ವಿಚಾರ ಪ್ರಧಾನವಾಗಿವೆ. ಆದರೆ ವಿಚಾರಗಳನ್ನು ಪಾತ್ರಗಳ ಬದುಕಿನ ಮೂಲಕವೇ ದಾಟಿಸುವಲ್ಲಿ ಲೇಖಕರು ವಿಫಲವಾಗುವುದಿಲ್ಲ. ಉದಾಹರಣೆಗೆ ಇರೋಮ್ ಶರ್ಮಿಳಾರನ್ನು ಕತೆಗಾರ್ತಿ ಕೇವಲ ಹೋರಾಟಗಾರ್ತಿಯಾಗಿ ಮಾತ್ರ ಕಾಣುವುದಿಲ್ಲ. ಅವಳೊಳಗಿನ ಹೆಣ್ಣು ಮನಸ್ಸನ್ನು ‘ಇಳಾ’ ಮೂಲಕ ಮುಟ್ಟುವ ಪ್ರಯತ್ನವನ್ನು ಕತೆಗಾರ್ತಿ ಮಾಡುತ್ತಾರೆ. ಬನದ ಕರಡಿ ಕತೆಯ ದೇವಿಯ ಪಾತ್ರವೂ ಹೆಣ್ತನದ ಹಿರಿಮೆಯನ್ನು, ಸ್ವಂತಿಕೆಯನ್ನು ಎತ್ತಿ ಹಿಡಿಯುವ ಕತೆ. ಹೆಣ್ಣನ್ನು ಇಲ್ಲಿರುವ ಕತೆಗಳ ಮೂಲಕ ಅನುಪಮಾ ಕಟ್ಟಿಕೊಡುವ ರೀತಿ ಅತಿ ವಿಶಿಷ್ಟವಾದುದು. ಇಲ್ಲಿರುವ ಕತೆ, ಹೆಣ್ಣಿನ ಹೊರ ಬದುಕು ಮತ್ತು ಒಳ ಬದುಕು ಎರಡನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನುಪಮಾ ಅತ್ಯಂತ ಮಹತ್ವದ ಬರಹಗಾರ್ತಿಯಾಗಿ ಬೆಳೆಯುತ್ತಿದ್ದಾರೆ. ಇಲ್ಲಿರುವ ಕತೆಗಳು ಅವರ ಪ್ರತಿಭೆಯ ಇನ್ನೊಂದು ಕವಲನ್ನು ಕಾಣಿಸುತ್ತದೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ.
 

share
-ಕಾರುಣ್ಯಾ
-ಕಾರುಣ್ಯಾ
Next Story
X