ನಲ್ಮೆಯ ನಾಳೆಗಳಿಗೆ ಮುಹರ್ರಂ ದಾರಿದೀಪವಾಗಲಿ: ಹಝೀಝ್ ಸಅದಿ
ಅಲ್ ಅಹ್ಸಾ, ಸೆ. 23: ಸಹದಿಯ ಹಾಲ್ ಹುಫೂಫ್ನಲ್ಲಿ ಕೆಸಿಎಫ್ ಅಲ್ ಅಹ್ಸಾ ಸೆಕ್ಟರ್ ವತಿಯಿಂದ "ಮೊಹರ್ರಂ ಸಂದೇಶ" ಕಾರ್ಯಕ್ರಮ ಸೆಕ್ಟರ್ ಅಧ್ಯಕ್ಷ ಹಾರೀಸ್ ಕಾಜೂರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಝಕರಿಯ ಉಸ್ತಾದ್ ಉದ್ಘಾಟಿಸಿದರು.
ಮುಖ್ಯ ಪ್ರಭಾಷಕರಾಗಿ ಕೆಸಿಎಫ್ ದಮಾಮ್ ನಾಯಕ ಹಝೀಝ್ ಸಹದಿ ಮಾತನಾಡಿ ನಲ್ಮೆಯ ನಾಳೆಗಳಿಗೆ ಮುಹರ್ರಂ ಹೇತುವಾಗಲಿ, ಆಧುನಿಕ ಕಾಲದಲ್ಲಿ ಜೀವಿಸುತ್ತಿರುವ ಯುವ ತಲೆಮಾರು ಸಮಾಜಿಕ ಜಾಲತಾಣಗಳಿಂದ ದೂರ ಸರಿಯಬೇಕು, ಅದಕ್ಕೆ ಈ ಹೊಸ ವರ್ಷದ ಮುಹರ್ರಂ ನಾಂದಿಯಾಗಲಿ ಎಂದು ಹೇಳಿದರು. ಈ ಸಂದರ್ಭ ಅಂಬಾಗಿಲು ಹಾಗೂ ಇತರರು ಉಪಸ್ಥಿತರಿದ್ದರು. ಹಬೀಬ್ ರೆಹ್ಮಾನಿ ಸ್ವಾಗತಿಸಿ, ಇರ್ಷಾದ್ ಪಕ್ಷಿಕೆರೆ ವಂದಿಸಿದರು.
Next Story