ವಕ್ಫ್ ಮಂಡಳಿಯ ಆದೇಶ ಪಾಲಿಸಿ: ಸಚಿವ ಖಾದರ್
ಮಂಗಳೂರು, ಸೆ. 23: ವಕ್ಫ್ ಮಂಡಳಿ ಯಾವ ಆದೇಶವನ್ನು ನೀಡುತ್ತದೆಯೋ ಅದನ್ನು ಪಾಲಿಸಬೇಕು. ಜಮಾಅತ್ನೊಳಗಿನ ಸಣ್ಣಪುಟ್ಟ ವಿಚಾರವನ್ನು ತಮ್ಮೊಳಗೆ ಪರಿಹರಿಸ ಬೇಕು. ಪಠ್ಯಪುಸ್ತಕ ವಿವಾದವನ್ನು ನ್ಯಾಯಾಲಯಕ್ಕೆ ಒಯ್ಯದೆ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಸರಕಾರವು ಮಸೀದಿಯ ಇಮಾಮ್, ಮುಅದ್ಸಿನ್ರಿಗೆ ಮಾಸಿಕ ಗೌರವ ಧನ ನೀಡಿದಂತೆ ಮದ್ರಸಗಳ ಮುಅಲ್ಲಿಮರಿಗೂ ಗೌರವ ಧನ ನೀಡಬೇಕು ಮತ್ತು ಶ್ರಮಶಕ್ತಿ ಯೋಜನೆಯನ್ನು ಮುಅಲ್ಲಿಮರೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸಚಿವ ಖಾದರ್ ಸಲಹೆ ನೀಡಿದರು.
Next Story