ಗೌರಿ ಲಂಕೇಶ್ಗೆ ಬಿದ್ದ ಗುಂಡು ನನಗೂ ಬೀಳಬಹುದು: ದಿನೇಶ್ ಅಮೀನ್ ಮಟ್ಟು
"ಸಂಘಪರಿವಾರದ ಸಭೆಯಲ್ಲಿ ಮಟ್ಟುವನ್ನು ಮಟ್ಟ ಹಾಕುವ ಚರ್ಚೆ"
ಮಂಗಳೂರು, ಸೆ.24: "ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಸಂಘಪರಿವಾರದ ಸಭೆಯಲ್ಲಿ 'ಮಟ್ಟುವನ್ನು ಮಟ್ಟ ಹಾಕಬೇಕು' ಎಂಬ ಮಾತುಗಳು ಕೇಳಿ ಬಂದಿವೆ ಎಂದು ನನಗೆ ತಿಳಿಯಿತು. ಮೊನ್ನೆ ಗೌರಿ ಲಂಕೇಶ್ಗೆ ಬಿದ್ದ ಗುಂಡು ನಾಳೆ ನನಗೂ ಬೀಳಬಹುದು" ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ 163ನೆ ಜನ್ಮದಿನಾಚರಣೆಯ ಅಂಗವಾಗಿ ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆದ ನಾರಾಯಣ ಗುರು ವಿಚಾರ ಕಮ್ಮಟ(ನಾವಿಕ)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ನಾವು ಮಾಡಬೇಕಾದ ಕೆಲಸ ಸಾಕಷ್ಟಿದೆ. ಸಾವಿನ ಬಗ್ಗೆ ನನಗೆ ಭಯವಿಲ್ಲ. ಆದರೆ ಅತೃಪ್ತ ಆತ್ಮಗಳಾಗಿ ಸಾಯಬಾರದು" ಎಂದು ದಿನೇಶ್ ಮಟ್ಟು ಎಂದವರು ಹೇಳಿದರು.
Next Story