ಚೊಕ್ಕಬೆಟ್ಟು: ನೂತನ ಎಚ್.ಕೆ. ಮೆಡಿಕಲ್ ಸೆಂಟರ್ ಶುಭಾರಂಭ
ಸುರತ್ಕಲ್, ಸೆ. 24: ಇಲ್ಲಿನ ಚೊಕ್ಕಬೆಟ್ಟು ತಮ್ರಾ ರೆಸಿಡೆನ್ಸಿಯಲ್ಲಿ ನೂತನವಾಗಿ ಶುಭಾರಂಭಗೊಂಡ ವೈದ್ಯಕೀಯ ತಪಾಸಣೆ, ಔಷಧಾಲಯ, ಇಸಿಜಿ, ಅತ್ಯಾಧುನಿಕ ಸ್ವಯಂ ಚಾಲಿತ ಲ್ಯಾಬೊರೇಟರಿ, ಡೇ ಕೇರ್ ವಿಭಾಗ, ನೆಬಿಲೈಝೇಶನ್ ಇತ್ಯಾದಿ ಸೇವೆಗಳನ್ನೊಳಗೊಂಡ ಎಚ್.ಕೆ. ಮೆಡಿಕಲ್ ಸೆಂಟರ್ನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ರವಿವಾರ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಲ್ಜಹ್ ದಅವತ್ತಿಲ್ ಇಸ್ಲಾಮಿ ಉಜಿರೆ ಇದರ ಅಧ್ಯಕ್ಷ ಅಸೈಯ್ಯದ್ ಜಲಾಲುದ್ದೀನ್ ತಂಙಳ್ ದುವಾ ಆಶೀರ್ವಚನಗೈದರು. ಮೆಡಿಕಲ್ ಸೆಂಟರ್ನ ಔಷಧಾಲಯವನ್ನು ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವ ಉದ್ಘಾಟಿಸಿದರು. ಲ್ಯಾಬ್ ವಿಭಾಗವನ್ನು ಕಾಟಿಪಳ್ಳ ಮಿಸ್ಬಾಹ್ ವಿಮೆನ್ಸ್ ಕಾಲೇಜ್ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ನ ಮಾಲಕ ಎಂ.ಕೆ. ಮುಹಮ್ಮದ್ ಹಾರಿಸ್, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ಗಳಾದ ಅಯಾಝ್, ಗುಣಕರ ಶೆಟ್ಟಿ, ತಮ್ರಾ ರೆಸಿಡೆನ್ಸಿಯ ಮಾಲಕ ಮುಹಮ್ಮದ್ ಅನ್ಸಾರ್, ನಾಸಿರ್ ಲಕ್ಕಿಸ್ಟಾರ್, ಆಸಿಫ್ ಸೂಫಿಖಾನ್ ಹೋಮ್ ಪ್ಲಸ್, ಮುಹಮ್ಮದ್ ಅಝೀಝ್ ಅರಿಕೆರೆ ಬೆಂಗಳೂರು, ಶ್ರೀನಿವಾಸ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞ ಡಾ. ಮೌನೇಶ್ ಪತ್ತಾರ್, ಮಂಗಳೂರು ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಹರೀಶ್ ಶೆಟ್ಟಿ, ಶ್ರೀನಿವಾಸ್ ಮೆಡಿಕಲ್ ಕಾಲೇಜ್ನ ಮೆಡಿಸಿನ್ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ತೇನ್ಸಿಂಗ್, ರೇಡಿಯಾಲಜಿಸ್ಟ್ ಡಾ.ರಾಘವೇಂದ್ರ ಭಟ್, ಫಿಸಿಶಿಯನ್ ಡಾ. ಮುಹಮ್ಮದ್ ಶಮೀಮ್, ಡಾ. ರಾಜೇಶ್ ಆರ್.ವಿ., ಕೆವಿಜೆ ಮೆಡಿಕಲ್ ಕಾಲೇಜ್ನ ಮೂಳೆ ತಜ್ಞ ಡಾ. ಪ್ರಸಾದ್ ಭಟ್, ಡಾ. ಕೇಶವ ಭಟ್, ಹುಸೈನ್ ಸಾಲೆತ್ತೂರು, ಡಾ.ಎಂ. ಜಾಫರ್ ಸಾದೀಕ್, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.