Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ರೂಪಾಂತರಗೊಳ್ಳುವ ಮನೆ

ರೂಪಾಂತರಗೊಳ್ಳುವ ಮನೆ

ಸರಳ ವಿಜ್ಞಾನ

ಪ್ರಭಾವತಿ.ಪಿ,ಪ್ರಭಾವತಿ.ಪಿ,24 Sept 2017 5:10 PM IST
share
ರೂಪಾಂತರಗೊಳ್ಳುವ ಮನೆ

ಮಳೆಗಾಲ ಮುಗಿದು ಚಳಿಗಾಲ ಇನ್ನೇನು ಶುರುವಾಗಲಿದೆ. ಚಳಿಗೆ ಆದಷ್ಟು ಹೆಚ್ಚಾಗಿ ಸೂರ್ಯನ ಬೆಳಕು ಬಿದ್ದು ಸುತ್ತಲಿ ರುವ ವಾತಾವರಣ ಬೆಚ್ಚಗಾದರೆ ಅದೇ ಸ್ವರ್ಗ. ಇರುವ ಒಂದು ಮನೆ ಯಲ್ಲಿ ಈ ರೀತಿಯ ಬಯಕೆ ಪೂರೈಸಲಾಗದು. ಆದರೆ ಮನಸ್ಸಿದ್ದರೆ ಮಾರ್ಗವುಂಟು. ಈ ಕಲ್ಪನೆಯೊಂದಿಗೆ ಹಲವು ವರ್ಷಗಳ ಕಾಲ ಪ್ರಯೋಗಿಸಿ, ಪ್ರಾಮಾಣಿಸಿ ಒಂದು ಮನೆಯನ್ನು ಕಟ್ಟಲಾಗಿದೆ.

                           (ಚಿತ್ರ-1)

 ಡೆವನ್ ಹೌಸ್ ಎಂದು ಕರೆಯಲಾಗುತ್ತಿರುವ ಈ ಮನೆಯನ್ನು ಎರಡು ಮಿಲಿಯನ್ ಪೌಂಡ್‌ಗಳ ವೆಚ್ಚದಲ್ಲಿ ದೂರದ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಕಟ್ಟಲಾಗಿದೆ. ಇದರ ವೈಶಿಷ್ಟಯೇನೆಂದರೆ, ಈ ಮನೆ ಚಳಿಗಾಲದಲ್ಲಿ ಚತುರ್ಭುಜಾಕಾರದಲ್ಲಿದ್ದು, ಬೇಸಿಗೆಯಲ್ಲಿ ತ್ರಿಕೋನಾಕಾರದಲ್ಲಿರುತ್ತದೆ. ಅಲ್ಲದೇ ಸಿಮೆಂಟ್, ಕಾಂಕ್ರಿಟ್ ಗೋಡೆಗಳು, ಗಾಜಿನ ಕಿಟಕಿಗಳು ತಿರುಗಿ, ಸ್ಥಳ ಬದಲಾಯಿಸುತ್ತವೆ. Dynamic Haus ಎಂಬ ಕಂಪೆನಿಯೊಂದು ಈ ಮೊದಲ ತಿರುಗುವ ಟೇಬಲ್, ಬೆಳಕಿನ ವ್ಯವಸ್ಥೆ ಮುಂಚೆ ನಿರೂಪಿಸುತ್ತಿತ್ತು. ಈಗ ಅದೇ ರೀತಿಯ ತಿರುಗುವ ವ್ಯವಸ್ಥೆಯನ್ನು ಮನೆಯೊಂದಕ್ಕೆ ಅಳವಡಿಸಿ ಭವಿಷ್ಯತ್ತಿನ ಮನೆಯನ್ನಾಗಿ ರೂಪಿಸಿದೆ. (ಚಿತ್ರ-1).

ಒಂದು ಕಲ್ಪನೆ ಸಾಕಾರಗೊಂಡಿರುವುದಕ್ಕೆ ಇದೊಂದು ಉದಾ ಹರಣೆಯಾಗಿರಬಹುದು. ಆದರೆ ಮೂಲತಃ ಇದು ರೇಖಾ ಗಣಿತದ ಒಂದು ಸಮಸ್ಯೆ ಮತ್ತು ಅದರ ಪರಿಹಾರ, ಗಣಿತದ ಒಗಟು ಎಂದೇ ತಿಳಿಯಬಹುದು. ಸಮಸ್ಯೆಯೇನೆಂದರೆ, ಒಂದು ಸಮಭುಜ ತ್ರಿಕೋನವನ್ನು ಚೌಕಾಕೃತಿಯಾಗಿ ಹೇಗೆ ಪರಿವರ್ತಿಸಬಹುದು ?

                           (ಚಿತ್ರ-2)

ಇಂಗ್ಲಿಷ್ ಗಣಿತಜ್ಞರಾದ ಹೆನ್ರಿ ಅರ್ನೆಸ್ಟ್ ಡ್ಯೂಡಿನೇ ಅವರಿಗೆ ಈ ಸಮಸ್ಯೆ ಮೂಡಿದ್ದು ಮತ್ತು ಅದರ ಪರಿಹಾರವನ್ನು 1908 ರಲ್ಲಿ ಅವರೇ ಕಂಡುಹಿಡಿದರು. ಇದರಲ್ಲಿ ಒಂದು ನಿಯಮವಿದೆ. ತ್ರಿಕೋನ ವನ್ನು ಮೂರು ಗೆರೆಗಳನ್ನು ಬಳಸಿ ನಾಲ್ಕು ಭಾಗಗಳಾಗಿ ಮಾತ್ರ ವಿಂಗಡಿಸಬೇಕು. ಈ ಸಮಸ್ಯೆಯನ್ನು ಹ್ಯಾಬರ್ಡಾಷರ್ ಸಮಸ್ಯೆ ಯೆಂದು ಕರೆಯುತ್ತಾರೆ. ಡ್ಯೂಡಿನೇ ಸರ್ ಅರ್ಥರ್ ಕಾನ್‌ನ ಡಾಯ್ಲಾ ಅವರೊಡನೆ ಜೊತೆಗೂಡಿ ಹಲವಾರು ಗಣಿತದ ಒಗಟುಗಳನ್ನು ಪರಿಚಯಿಸಿದ್ದಾರೆ. ರಾಯಲ್ ಸೊಸೈಟಿಯಲ್ಲಿ ಇವರು ಪರಿಚಯಿ ಸಿದ ಒಗಟುಗಳನ್ನು ಮತ್ತು ಅವುಗಳ ಉತ್ತರವನ್ನು ಪ್ರದರ್ಶಿಸಿದ್ದಾರೆ.

 (ಚಿತ್ರ-3)

ಈಗ ಡೇವನ್ ಹೌಸ್ ಬಗ್ಗೆ ಇನ್ನಷ್ಟು ತಿಳಿಯೋಣ. ಈ ಮನೆ ಯಲ್ಲಿ ಮಲಗುವ ಕೋಣೆ, ಊಟದ ಕೋಣೆ ಮತ್ತು ಮೊಗಸಾಲೆ ಗಳನ್ನು ಮೂರು ತಿರುಗಣೆ/ಕೀಲುಗಳನ್ನಾಗಿ ಬಳಸಲಾಗಿದೆ. (ಚಿತ್ರ-3) ಈ ತಿರುಗಣೆಗಳ ಸ್ಥಾನವನ್ನು ತ್ರಿಕೋನಾಕೃತಿಯಲ್ಲಿ (ಚಿತ್ರ-4)ರಲ್ಲಿರು ವಂತೆ ಗುರುತಿಸಿರುತ್ತಾರೆ. ಜಲಚಾಲಿತ ಯಂತ್ರಗಳ ಮೂಲಕ ಮನೆಯನ್ನು ಈ ತಿರುಗಣೆಗಳ ಮೂಲಕ ಅರಳಿಸಿ, ಹೊರಳಿಸಿ, ಕೂಡಿಸಿ ಚತುರ್ಭುಜಾಕೃತಿಯನ್ನಾಗಿ ಮಾಡುವಂತೆ ವಿನ್ಯಾಸಗೊಳಿ ಸಲಾಗಿದೆ. ಋತುಮಾನಕ್ಕನುಗುಣವಾಗಿ, ದಿನಂಪ್ರತಿ, ಸೂರ್ಯನ ಬೆಳಕನ್ನು ಅನುಸರಿಸಿ ಈ ಮನೆಯನ್ನು ಹೊರಳಿಸಬಹುದು (ಚಿತ್ರ-2).ಅಲ್ಲದೇ, ಸೂರ್ಯನ ಬೆಳಕನ್ನೆ ಬಳಸಿ ವಿದ್ಯುತ್ತನ್ನು ಉತ್ಪಾದಿಸಲಾ ಗುತ್ತದೆ. ಬೆಂಕಿ, ಕಳ್ಳಕಾಕರುಗಳಿಂದ ರಕ್ಷಿಸಲು ಬಾಗಿಲುಗಳನ್ನು ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. 2012ರಲ್ಲಿ ನಿರ್ಮಿ ಸಿದರೂ ಹಲವು ಮಾರ್ಪಾಡುಗಳೊಂದಿಗೆ ಪುನರ್‌ನಿರ್ಮಿಸಲಾಗಿದೆ. ಲಂಡನ್ ಪೌರಸಂಸ್ಥೆಯಿಂದ ಅನುಮತಿ ದೊರೆತರೆ, ಎಲ್ಲೆಡೆ ಈ ಮನೆಗಳು ಭವಿಷ್ಯತ್ತಿನಲ್ಲಿ ನೋಡಲು ಸಿಗಬಹುದು.

ಸಮಸ್ಯೆಯೊಂದನ್ನು ಸಮಸ್ಯೆಯಾಗಿಯೇ ಉಳಿಯಗೊಟ್ಟರೆ ಎಂದಿಗೂ ಸಮಸ್ಯೆಯಾಗಿರುತ್ತದೆ. ಆದರೆ ಕುತೂಹಲದಿಂದ ದಿಟ್ಟವಾಗಿ ಮುನ್ನಡೆದರೆ, ಯಾವ ಸಮಸ್ಯೆಯೂ ಸಮಸ್ಯೆ ಯಾಗಿರುವುದಿಲ್ಲ. ಜೊತೆಗೆ ಕ್ರಿಯಾತ್ಮಕವಾಗಿದ್ದರೆ, ಈ ರೀತಿಯ ರೂಪಾಂತರಗೊಳ್ಳುವ ಮನೆಯಂತಹ ಉದಾಹರಣೆಗಳು ಎಲ್ಲೆಡೆ ಸಿಗಬಹುದು.

                    (ಚಿತ್ರ-4)

share
ಪ್ರಭಾವತಿ.ಪಿ,
ಪ್ರಭಾವತಿ.ಪಿ,
Next Story
X