ಸಾಸ್ತಾನ: ಎಸ್ಸೆಸ್ಸೆಫ್ನಿಂದ ಏಕದಿನ ಶಿಬಿರ
ಬ್ರಹ್ಮಾವರ, ಸೆ.25: ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ಮಟ್ಟದ ವಿದ್ಯಾರ್ಥಿಗಳ ಎಸ್ಬಿಎಸ್ ವೆಜ್ಬಯರ್ ಮತ್ತು ಹೈಸ್ಕೂಲ್ ಪ್ರೆಟರ್ನಿಟಿ ಏಕದಿನ ಶಿಬಿರವು ಸಾಸ್ತಾನ ಮಸೀದಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಾಸ್ತಾನ ಮದ್ರಸ ಧರ್ಮಗುರು ಹನೀಫ್ ಮುಸ್ಲಿಯಾರ್ ದುವಾ ನೆರವೇರಿಸಿ ದರು. ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಉಪಾಧ್ಯಕ್ಷ ನೌಫಲ್ ಮದನಿ ನೇಜಾರ್ ಉದ್ಘಾಟಿಸಿದರು. ಶಿಬಿರದ ಮುಖ್ಯ ತರಗತಿಯನ್ನು ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಇದರ ದವ್ವಾ ಸೆಲ್ ಅಧ್ಯಕ್ಷ ಶರ್ವಾನಿ ಉಸ್ತಾದ್ ಮಣಿಪುರ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಧಾರ್ಮಿಕ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಬ್ರಹ್ಮಾವರ ಸೆಕ್ಟರ್ ಗೌರವ ಸಲಹೆಗಾರ ಸುಬುಹಾನ್ ಹೊನ್ನಾಳ ಮತ್ತು ರಝಾಕ್ ಮಾಸ್ಟರ್ ಸಾಸ್ತಾನ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಪ್ ಉಡುಪಿ ಡಿವಿಷನ್ ಕಾರ್ಯದರ್ಶಿ ನಝೀರ್ ಸಾಸ್ತಾನ, ಕೋಶಾಧಿಕಾರಿ ಇಬ್ರಾಹಿಂ ರಂಗನಕೆರೆ, ಸಾಸ್ತಾನ ಶಾಖಾ ಅಧ್ಯಕ್ಷ ರಮೀಝ್, ಕಾರ್ಯದರ್ಶಿ ರಫೀಕ್, ಎಸ್ಬಿಎಸ್ ಸೆಕ್ಟರ್ ಉಸ್ತುವಾರಿ ಮುತ್ತಲಿಬ್ ರಂಗನಕೆರೆ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನಯಾಝ್ ಭದ್ರಗಿರಿ, ಶಿಬಿರದ ಉಸ್ತುವಾರಿ ಅಬ್ದುರ್ರಹ್ಮಾನ್ ರಂಗನಕೆರೆ, ಗಾಂಧಿನಗರ ಮದ್ರಸದ ಅಧ್ಯಾಪಕ ಸಮೀರ್ ಮಿಸ್ಬಾಹಿ, ಎಸ್ಸೆಸ್ಸೆಫ್ ಬಾಲ ಸಂಘ ಅಧ್ಯಕ್ಷ ಆರಿಫ್ ಸಾಸ್ತಾನ ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಶಿಬಿರವನ್ನು ಸ್ವಾಗತಿಸಿ ವಂದಿಸಿದರು.