ಬಡ ನಿವೇಶನ ರಹಿತರಿಂದ ಅರ್ಜಿ ಸ್ವೀಕಾರ
ಬೈಂದೂರು, ಸೆ.25: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾ ಪುರ ತಾಲೂಕು ಸಮಿತಿ ಮತ್ತು ಬೈಂದೂರು ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮಗಳ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬೈಂದೂರು ತಗ್ಗರ್ಸೆ ಹಾಗೂ ಯಡ್ತರೆ ಗ್ರಾಪಂ ವ್ಯಾಪ್ತಿಯ ಬಡ ನಿವೇಶನ ರಹಿತರಿಂದ ಅರ್ಜಿ ಸ್ವೀಕಾರ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಮನೆ ನಿವೇಶನ ರಹಿತರಿಂದ ಅರ್ಜಿ ಸ್ವೀಕಾರ ಕಾರ್ಯಕ್ರಮವನ್ನು ಬೈಂದೂರು ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕ ಗಣೇಶ ತೊಂಡೆಮಕ್ಕಿ ನಿವೇಶನ ರಹಿತರ ಅರ್ಜಿ ಸ್ವೀಕರಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯ ದರ್ಶಿ ವೆಂಕಟೇಶ ಕೋಣಿ, ಕುಂದಾಪುರ ತಾಲೂಕು ಸಮಿತಿ ಕಾರ್ಯದರ್ಶಿ ನಾಗರತ್ನ ನಾಡ, ಮುಖಂಡರಾದ ರಾಜೀವ ಪಡುಕೋಣೆ, ಪದ್ಮಾವತಿ ಶೆಟ್ಟಿ ಗಣೇಶ ಮೊಗವೀರ, ಸಮ್ಮದ್ ತೊಂಡೆಮಕ್ಕಿ, ರಮೇಶ ಮೊಗವೀರ, ನಾಗೇಂದ್ರ ಪೂಜಾರಿ, ದಿನಕರ ಪೂಜಾರಿ ಉದ್ದಬೆಟ್ಟು, ಗೋವಿಂದ ಪೂಜಾರಿ, ಮಂಜು ನಾಥ ಪೂಜಾರಿ, ಜಯಲಕ್ಷ್ಮೀ, ಜಟ್ಟಿ ಪೂಜಾರಿ ಯಡ್ತರೆ, ಥೋಮಸ್ ಡಯಾಸ್ ಯಡ್ತರೆ, ಕುಶಲ ಹಂಗಳೂರು, ಶ್ಯಾಮಲ ಗುಜ್ಜಾಡಿ ಉಪಸ್ಥಿತರಿದ್ದರು.
ಮನೆ ನಿವೇಶನ ಮಂಜೂರಾತಿ ಕೋರಿ ಸ್ವೀಕರಿಸಿದ ಅರ್ಜಿಗಳನ್ನು ಯಡ್ತರೆ ಗ್ರಾಪಂ ಕಛೇರಿಗೆ ಸೆ.28ರಂದು ಬೆಳಗ್ಗೆ 11 ಗಂಟೆಗೆ ಹಾಗೂ ಬೈಂದೂರು, ತಗ್ಗರ್ಸೆ ಗ್ರಾಪಂ ಕಛೇರಿಗೆ ಮಧ್ಯಾಹ್ನ 3ಗಂಟೆಗೆ ಸಾಮೂಹಿಕವಾಗಿ ಹಸ್ತಾಂತರಿಸ ಲಾಗುವುದು.