ಬೆಂಕಿ ಆಕಸ್ಮಿಕ: ಗಾಯಾಳು ಮೃತ್ಯು
ಕುಂದಾಪುರ, ಸೆ.25: ಹಳ್ನಾಡು ದೊಡ್ಡಮನೆ ಎಂಬಲ್ಲಿ ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿ ಯಾಗಿದೆ.
ಮೃತರನ್ನು ಹಳ್ನಾಡು ನಿವಾಸಿ ಪ್ರಫುಲ್ಲಾ ಶೆಟ್ಟಿ(71)ಎಂದು ಗುರುತಿಸಲಾಗಿದೆ. ಇವರು ಆ.18ರಂದು ಸಂಜೆ 4:30ರ ಸುಮಾರಿಗೆ ಬಚ್ಚಲು ಒಲೆಗೆ ಬೆಂಕಿ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಸೀರೆಗೆ ತಗುಲಿ ಗಂಭೀರ ಸುಟ್ಟ ಗಾಯ ದೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಸೆ.25ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story