ಪೊಲೀಸ್ ನೌಕರರ ಸಹಕಾರ ಸಂಘದ ಮಹಾಸಭೆ
ಉಡುಪಿ, ಸೆ.25: ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.23ರಂದು ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಸಂಘದ ಅಧ್ಯಕ್ಷ ಡಾ.ಸಂಜೀವ ಎಂ.ಪಾಟೀಲ ಸಂಘದ ಸದಸ್ಯರಿಗೆ ಶೇ.8 ಡಿವಿಡೆಂಡ್ ಘೋಷಿಸಿ, ಸದಸ್ಯರಿಗೆ ಸಾಲ ಮತ್ತು ಮರುಪಾವತಿ ಬಗ್ಗೆ ಹಿತ ವಚನ ನೀಡಿದರು. ಸಾಲದ ಬಡ್ಡಿದರವನ್ನು ಶೇ.13ರಿಂದ 12ಕ್ಕೆ ಇಳಿಸಿದರು. ಸಂಘದ ಉಪಾಧ್ಯಕ್ಷ ಎಸ್. ಜೆ.ಕುಮಾರಸ್ವಾಮಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರ್.ಪಿ.ಐ ರಾಘವೇಂದ್ರ, ನಿರ್ದೇಶಕರುಗಳು ಹಾಗೂ ಸದಸ್ಯರು ಹಾಜರಿದ್ದರು. ಮನಮೋಹನ ರಾವ್ 2016-17ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಎಎಸ್ಸೈ ಗೋಪಾಲಕೃಷ್ಣ ಜೋಗಿ ವಂದಿಸಿದರು.
Next Story