ಅಂಗಡಿಯಿಂದ ಕಾಳುಮೆಣಸು ಕಳವು
ಪುತ್ತೂರು,ಸೆ.26: ಪಾಣಾಜೆ ಗ್ರಾಮದ ಆರ್ಲಪದವು ಸಮೀಪ ಅಂಗಡಿಯಿಂದ ಕಾಳುಮೆಣಸು ಕಳವು ಮಾಡಿದ ಘಟನೆ ರವಿವಾರ ನಡುರಾತ್ರಿ ಸಂಭವಿಸಿದೆ.
ಪಡ್ಯಂಬೆಟ್ಟು ನಿವಾಸಿ ಅಬ್ದುಲ್ ಕರೀಂ ಎಂಬವರಿಗೆ ಸೇರಿದ ಅಂಗಡಿಯಿಂದ ಕಳವು ನಡೆದಿದೆ. ರಾತ್ರಿ ಸುಮಾರು 11 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆ ನಡುವೆ ಕಳವುಗೈಯಲಾಗಿದೆ ಎಂದು ಅಂದಾಜಿಸಲಾಗಿದೆ.
ಅಂಗಡಿ ಶಟರ್ನ ಬೀಗ ಮುರಿದ ಕಳ್ಳರು, ಒಳನುಗ್ಗಿದ್ದಾರೆ. ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು 9 ಕ್ವಿಂಟಾಲ್ ಕಾಳುಮೆಣಸು ಕದ್ದೊಯ್ದಿದ್ದಾರೆ. ಇದರ ಮೌಲ್ಯ ಸುಮಾರು 3 ಲಕ್ಷ 30 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
Next Story