ಉಡುಪಿ : ಸೆ.28ರಂದು ‘ಹೆಜ್ಜೆ ಗುರುತು’ಕಾರ್ಯಕ್ರಮ
ಉಡುಪಿ, ಸೆ.26: ಉಡುಪಿ ಬೀಯಿಂಗ್ ಸೋಶಿಯಲ್, ತ್ರಿಶಾ ಕ್ಲಾಸಸ್, ವಿಕ್ಕಿ ಮೊಬೈಲ್ಸ್ ಮತ್ತು ಎಂಜಿಎಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ‘ಹೆಜ್ಜೆ ಗುರುತು’ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರ ಜೀವನದ ಯಶೋಗಾಥೆ ಕಾರ್ಯಕ್ರಮವು ಸೆ.28ರಂದು ಸಂಜೆ 5:20ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾ ಸರಕಾರಿ ವಕೀಲ ಮಹಮ್ಮದ್ ಸುಹಾನ್ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಅಮೃತ್ ಶೆಣೈ ಅತಿಥಿಗಳನ್ನು ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story