Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಲಿಂಗಾಯತಕ್ಕೆ ಬಸವಣ್ಣನೆ ಧರ್ಮಪಿತ:...

ಲಿಂಗಾಯತಕ್ಕೆ ಬಸವಣ್ಣನೆ ಧರ್ಮಪಿತ: ಎಸ್.ಪಿನಾಕಪಾಣಿ

ವಾರ್ತಾಭಾರತಿವಾರ್ತಾಭಾರತಿ26 Sept 2017 10:56 PM IST
share

ಬೆಂಗಳೂರು, ಸೆ.26: ವಾಮನನಾಗಿ ಭಾರತೀಯ ಸ್ವಾತಂತ್ರ ಸಂಗ್ರಾಮವನ್ನು ಪ್ರವೇಶಿಸಿ ತ್ರಿವಿಕ್ರಮನಾಗಿ ಬೆಳೆದು ಲಕ್ಷಾಂತರ ಜನರನ್ನು ಅಹಿಂಸೆ - ಸತ್ಯಾಗ್ರಹಗಳಿಂದ ಮುನ್ನಡೆಸಿ ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಯಶಸ್ವಿಯಾದ ಮಹಾತ್ಮ ಗಾಂಧಿಯವರು ರಾಷ್ಟ್ರಪಿತರಾದರೆ, ಪ್ರೀತಿ ವಿಶ್ವಾಸಗಳ ಮನಭರಿತ ಬದುಕಿನಿಂದ ಕಾಯಕ ದಾಸೋಹಗಳ ಮಹಾಮಂತ್ರದೊಂದಿಗೆ ಎಲ್ಲ ಜನರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮುನ್ನಡೆಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸ್ವಾತಂತ್ರಗಳನ್ನು ತಂದುಕೊಟ್ಟ ಮಹಾತ್ಮ ಬಸವಣ್ಣನವರು ಲಿಂಗಾಯತಕ್ಕೆ ಧರ್ಮಪಿತರಾಗಿದ್ದಾರೆ ಎಂದು ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ವಿಶ್ಲೇಷಿಸಿದರು.

ಮಂಗಳವಾರ ನಗರದ ಬಸವ ಸಮಿತಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಧರ್ಮಪಿತ ಮಹಾತ್ಮ ಬಸವಣ್ಣನವರ ಕುರಿತು ಉಪನ್ಯಾಸ ನೀಡಿದ ಮಾತನಾಡಿದ ಅವರು, ನಮ್ಮಲ್ಲಿ ಶ್ರೇಷ್ಠತೆಯ ಅಹಂ ಇದೆ. ಭಾರತೀಯ ಇತಿಹಾಸದಲ್ಲಿ ಪ್ರತಿಯೊಬ್ಬ ರಾಜರು ತಾವು ಸೂರ್ಯವಂಶ, ಚಂದ್ರವಂಶ ಎಂದು ಹೇಳಿಕೊಳ್ಳುತ್ತಾರೆ. ಅದರಂತೆ ಮಹಾಮುನಿ ಅಗಸತ್ತ್ಯ, ವಿಭಿಷಣ ಹಾಗೂ ಶ್ರೀಶಂಕರಾಚಾರ್ಯರಿಗೆ ಲಿಂಗೋಪದೇಶ ಮಾಡಿದ್ದು ಕೇವಲ ಪುರಾಣವಾಗುತ್ತದೆಯೇ ಹೊರತು ಐತಿಹಾಸಿಕವಲ್ಲ ಎಂದು ಹೇಳಿದರು.

ಹರಪ್ಪ ಮೆಹೆಂಜೋದಾರದಲ್ಲಿ ಲಿಂಗಪೂಜೆಯ ಕುರುಹು ಇದೆ ಎಂದರೆ ಅದು ವೀರಶೈವದ ಪುರಾತತ್ವವಾಗುವುದಿಲ್ಲ. ಶೈವ ಧರ್ಮದ ಹಲವು ಬಿಳಲುಗಳು ಕಾಶ್ಮೀರ ಶೈವದಿಂದ ತುಳು ಶೈವದವರೆಗೆ, ಕಾಳಾಮುಖರಿಂದ ನಾಗರವರೆಗೆ ಎಲ್ಲೆಲ್ಲಿಗೋ ಹರಡಿದೆ. ತಲೆಯ ಮೇಲೆ ಧರಿಸುವುದರಿಂದ, ಭುಜದ ಮೇಲೆ ಕಟ್ಟಿಕೊಳ್ಳುವುದರಿಂದ ಅಂಗೈಯಲ್ಲಿ ಹಿಡಿಯುವವರೆಗೆ ನಾನಾ ಅವಸ್ಥೆಗಳು ಇದಕ್ಕೆ ಇವೆ. ಸಾಂಕೇತಿಕವಾದ ಉಪಾಸನೆಗೆ ಸಾಮಾಜಿಕ ಸಮತೆ, ಧಾರ್ಮಿಕ ಕಂಪು, ಆರ್ಥಿಕ ಚಿಗುರನ್ನು ನೀಡಿದ ಬಸವಣ್ಣನೇ ಲಿಂಗಾಯತದ ಧರ್ಮಪಿತ ಎಂದು ಪ್ರತಿಪಾದಿಸಿದರು.

ಎಲ್ಲ ವರ್ಗ ವರ್ಣಗಳನ್ನು ಲಿಂಗದ ನೆಲೆಯಲ್ಲಿ ಸಂಯೋಜಿಸಿ ವೃತ್ತಿಗೆ ಕಾಯಕದ ಗೌರವ ನೀಡಿ, ಅಪರಿಮಿತ ಸಂಗ್ರಹದ ವಿರುದ್ಧ ದಾಸೋಹಭಾವವನ್ನು ಬಿತ್ತಿದ ಬಸವಣ್ಣ ಕೇವಲ ಧರ್ಮಪಿತನಷ್ಟೇ ಅಲ್ಲ, ಅವನು ಕನ್ನಡ ನಾಡಿನ, ಕನ್ನಡ ಸಂಸ್ಕೃತಿಯ ತೇಜೋಪುಂಜವಾಗಿದ್ದು, ಮಹಾರಾಷ್ಟ್ರಕ್ಕೆ ಶಿವಾಜಿಯ ರೀತಿ, ರಾಜಾಸ್ಥಾನಕ್ಕೆ ರಾಣಾಪ್ರತಾಪಸಿಂಗರ ರೀತಿ, ಸಿಖ್ ಸಮುದಾಯಕ್ಕೆ ಗುರುಗೋವಿಂದಸಿಂಗರ ರೀತಿ, ಜೈನಧರ್ಮಕ್ಕೆ ಇಪ್ಪತ್ತನಾಲ್ಕನೆಯ ತೀರ್ಥಂಕರ ಮಹಾವೀರರ ರೀತಿ ಸ್ವಾಭಿಮಾನದ ಆತ್ಮಪ್ರಜ್ಞೆಯ ಕಿರಣವಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಚನಜ್ಯೋತಿ ಬಳಗದ ಕಲಾವಿದೆಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ವೀಣಾಮೂರ್ತಿ, ಚಂದ್ರಮತಿ ಗೀರೀಶ್ ವಚನಗಳನ್ನು ಹಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X