Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪುರೋಹಿತ ಶಾಹಿ, ಮನು ಧರ್ಮ ಪ್ರಣೀತ...

ಪುರೋಹಿತ ಶಾಹಿ, ಮನು ಧರ್ಮ ಪ್ರಣೀತ ಬುದ್ಧಿ ದೇಶವನ್ನು ಆಳುತ್ತಿವೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ವಾರ್ತಾಭಾರತಿವಾರ್ತಾಭಾರತಿ27 Sept 2017 11:26 PM IST
share
ಪುರೋಹಿತ ಶಾಹಿ, ಮನು ಧರ್ಮ ಪ್ರಣೀತ ಬುದ್ಧಿ ದೇಶವನ್ನು ಆಳುತ್ತಿವೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಮೈಸೂರು,ಸೆ.27: ಪುರೋಹಿತ ಶಾಹಿ ಹಾಗೂ ಮನುಧರ್ಮ ಪ್ರಣೀತ ಬುದ್ಧಿ ದೇಶವನ್ನು ಆಳುತ್ತಿವೆ. ಆದಿಕವಿ ಪಂಪ ಕೂಡ ವೈದಿಕ ಶಾಹಿಯ ವಿರೋಧವನ್ನು ಎದುರಿಸಿದ್ದ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿದ್ದ ನಾಲ್ಕು ದಿನಗಳ ಕವಿಗೋಷ್ಠಿಯ ಕೊನೆಯ ದಿನವಾದ ಬುಧವಾರ ನಡೆದ ವಿಖ್ಯಾತ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಚ್ಛಿದ್ರಕಾರಿ ಶಕ್ತಿಗಳನ್ನು ದೂರೀಕರಿಸಿ ಮಾನವೀಯತೆಯ ಭಾವವೇ ಕಾವ್ಯ. ಕನ್ನಡ ಪರಂಪರೆಗೆ ಪಂಪ ಹೊಸ ಕಾವ್ಯ ಮೀಮಾಂಸೆ ಬರೆದ. ಆತ ಸರಸ್ವತಿಯನ್ನು ಪುರೋಹಿತ ಶಾಹಿಗೆ ವಿರುದ್ಧವಾಗಿ ಜಿನೇಂದ್ರವಾಣಿಯಾಗಿ ಪ್ರತಿಪಾದಿಸುತ್ತಾನೆ. ತೀರ್ಥಂಕರನ ಸ್ತ್ರೀ ರೂಪ ಅದು ಎನ್ನುತ್ತಾನೆ. ಅಭಿವ್ಯಕ್ತಿ ಕ್ರಿಯೆಯನ್ನು ಕಟ್ಟುವ ಕವಿಗಳಿಗೆ ಸಾವಿಲ್ಲ. ಅಂತಹವರ ಕವಿತೆಗಳು ಸುಳ್ಳು ಹೇಳುವುದಿಲ್ಲ. ಕವಿ ತನ್ನ ಪರಂಪರೆಯನ್ನು ಅಕ್ಷರ ಲೋಕಕ್ಕೆ ತೆರೆದಿಡಬೇಕು. ಬಹುತ್ವದ ಭಾರತವನ್ನು ಕಟ್ಟುವ ಕ್ರಿಯೆಯಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಅಮೆರಿಕ ಮತ್ತು ಉತ್ತರ ಕೊರಿಯ ನಡುವೆ ನಿರ್ಮಾಣವಾಗಿರುವ ಯುದ್ಧ ಸನ್ನಿವೇಶದಿಂದ ಜಗತ್ತು ಆತಂಕ, ಭಯದಿಂದ ತಲ್ಲಣಗೊಂಡಿದೆ. ಅವರ ಕೈಲಿರುವುದು ಆಟಿಕೆಗಳಲ್ಲ ವಿಶ್ವವನ್ನೇ ವಿನಾಶ ಮಾಡಬಲ್ಲ ಶಕ್ತಿಯ ಅಣ್ವಸ್ತ್ರಗಳು. ಅವರ ಸಮಸ್ಯೆ ಇಂದು, ನೆನ್ನೆಯದಲ್ಲ. ಜಾಗತಿಕ ಚರಿತ್ರೆಯ ವಿದ್ವೇಷ ಅದು. ಅದನ್ನು ತಡೆಯುವ ಅಗತ್ಯವಿದೆ ಎಂದರು.

ಗೋವಾದಲ್ಲಿ 55 ಕನ್ನಡಿಗರ ಕುಟುಂಬಗಳ ಮನೆಗಳನ್ನು ನೆಲಸಮ ಮಾಡಲಾಗಿದೆ. ಅವರ ರಕ್ಷಣೆಗೆ ಧಾವಿಸಬೇಕಾಗಿರುವುದು ರಾಜ್ಯ ಸರ್ಕಾರದ ಹೊಣೆಯಲ್ಲ. ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಕಿವಿ ಹಿಂಡಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಆರಂಭದಲ್ಲಿ ಬುದ್ಧನಾದ ಸಿದ್ದಾರ್ಥ ಕವನ ವಾಚಿಸಿದ ಕವಿ ಡಾ.ವಿ.ಮುನಿವೆಂಕಟಪ್ಪ ಅವರು, ಆರ್ಯರ ಆಗಮನದಿಂದ ಸಾಮಾಜಿಕ, ಧಾರ್ಮಿಕ, ಆರ್ಥಿಕತೆ ತತ್ತರಿಸಿತ್ತು ಎಂದು ಹೇಳುವ ಮೂಲಕ ಪುರೋಹಿತ ಶಾಹಿ ವಿರುದ್ಧ ವಾಗ್ದಾಳಿ ಆರಂಭಿಸಿದರು. ಕೆಲ ಕವಿತೆಗಳೂ ಕೂಡ ಅದನ್ನೇ ಬಿಂಬಿಸಿದವು.

ಕವಿ ಡಾ.ಬಂಜಗೆರೆ ಜಯಪ್ರಕಾಶ್ ಅವರು, ತೊಳೆಯಬೇಕಾದದ್ದು ದೇವಾಲಯ ಮಾತ್ರವಲ್ಲ ಶೌಚಾಲಯ ಕೂಡ, ಶೌಚವೆಂಬುದು ಸೂತ್ರ, ಸತ್ಯವೆಂಬುದು ಶಾಸ್ತ್ರ ಜೀವ ಎಂಬುದು ಪವಿತ್ರ ಸಹಜೀವ ಇನ್ನೂ ಪವಿತ್ರ ಎಂದು ವಾಕ್ ಸ್ವಾತಂತ್ರ್ಯದ ಮೇಲಿನ ಹಲ್ಲೆಯನ್ನು ಖಂಡಿಸಿದರೆ, ಸಿ.ಎಂ.ಚನ್ನಬಸಪ್ಪ ಅವರು, ಪಂಚಾಂಗ ಪದ್ಧತಿ ಅಳಿಸಿ ಹಾಕೋಣ, ರಾಜ್ಯಾಂಗ ನೀತಿಯ ಪಾಲಿಸೋಣ ಎಂದರು.

ಆಲೂರು ದೊಡ್ಡನಿಂಗಪ್ಪ ಅವರು, ಬಂಗಾರದ ಬೆವರು ಕವಿತೆಯ ಮೂಲಕ ಜೀತದ ಬದಲಾದ ಆಯಾಮದ ಯಾತನೆಯನ್ನು ಬಿಡಿಸಿಟ್ಟರು.

ಸಾಕು ಸಾಕು ಜೀತ: ಸಂಜಯ ಜಿ.ಕುರಣೆ ಅವರು, ಅಜ್ಜನ ಜೀತ ಅಂದು, ಅಪ್ಪನ ಜೀತ ಇಂದು, ಸಾಗದಿರಲಿ ಮುಂದು ಸಾಕು ಸಾಕು ಜೀತ ಎಂದು ಇಳಿದನಿಯಲ್ಲೇ ಅಬ್ಬರಿಸಿದರು. ಹೇಮಲತಾ ಮೂರ್ತಿ ಅವರು 40 ದಾಟಿದರೂ ಅವಿವಾಹಿತೆಯಾದ ಹೆಣ್ಣಿನ ಅಳಲನ್ನು ಶ್ರೋತೃಗಳ ಮುಂದಿಟ್ಟರು. 
ಜಯಶ್ರೀ ಇಡ್ಕಿದು ಅವರ ತಮ್ಮ 'ಕತ್ತಲು ಬೆಳಕು' ಕಾವ್ಯದಲ್ಲಿ, ಕರಿಯ ಬೂಟಿನಡಿ ಬಿಳಿಯ ಹೂವು, ಬೆತ್ತಲಾದ ನ್ಯಾಯ, ಅರಾಜಕತೆ ಹಾವು, ಜಾತಿ ಹೆಸರ ಹೇಳಿ ಮೂರು ಬಿಟ್ಟವರು, ಜಾತಿ ಹೆಸರ ಹೇಳಿ ಸ್ವಾರ್ಥ ನೆಟ್ಟವರು ಎಂದು ಶೋಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯನ್ನು ಕಟುವಾಗಿ ಟೀಕಿಸಿದರು.

'ಬಾ ಗೌರಿ ಚಂಡಿಕೆಯೆ' ಶೀರ್ಷಿಕೆಯ ಕವನ ವಾಚಿಸಿದ ಕವಿತಾ ರೈ ಅವರು, ನಿನ್ನ ಮಾತುಗಳಿಗೆ ಕಿವಿಯಾದವರೆಲ್ಲ ಒಪ್ಪಿದ್ದರು, ಸ್ವಾತಂತ್ರ್ಯದ ಅಭಿವ್ಯಕ್ತಿಗೆ ರಕ್ಷಣೆ ಇದೆ, ಬಲವಿದೆ ಭಾರತಕ್ಕೆ ಸಂವಿಧಾನ ಒಂದೇ ಭಗವದ್ಗೀತೆ ಎನ್ನುವ ಮೂಲಕ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ವಿರುದ್ಧ ಕಿಡಿಕಾರಿದರು.

ಇದಕ್ಕೂ ಮೊದಲು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ವಿಖ್ಯಾತ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿದ್ದ ಕವಿ, ಚಲನಚಿತ್ರ ಗೀತ ರಚನಕಾರ ಡಾ.ಜಯಂತ ಕಾಯ್ಕಿಣಿ ಮಾತನಾಡಿದರು. 

ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷೆ ಡಾ.ರತ್ನೆ ಅರಸ್, ಉಪಾಧ್ಯಕ್ಷ ಪಿ.ಪ್ರಸನ್ನ, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್.ವರ್ಧನ್, ಕಾರ್ಯಾಧ್ಯಕ್ಷೆ ಡಾ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿ ಬಿ.ಮಂಜುನಾಥ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X