ಬಾವಿಗೆ ಬಿದ್ದು ಯುವತಿ ಮೃತ್ಯು
ಕಾರ್ಕಳ, ಸೆ.28: ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಿಯ್ಯಿರು ಗ್ರಾಮದ ಹೊಸಬೆಟ್ಟು ಎಂಬಲ್ಲಿ ಸೆ.27 ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಹೊಸಬೆಟ್ಟು ಕಂಠಿಬೈಲು ನಿವಾಸಿ ಸುಂದರ ಆಚಾರ್ಯ ಎಂಬವರ ಮಗಳು ಜಯಶ್ರೀ(23) ಎಂದು ಗುರುತಿಸಲಾಗಿದೆ. ಇವರು ಗೆಳತಿ ಉಷಾ ಎಂಬವರ ಮನೆಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿ ದ್ದಾಗ ದಾರಿಯ ಬದಿಯಲ್ಲಿದ್ದ ಆವರಣ ಇಲ್ಲದ ಪಾಳು ಬಾವಿಗೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





