Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಚಿಕ್ಕಮಕ್ಕಳನ್ನು ಲೈಂಗಿಕ ಕಿರುಕುಳದಿಂದ...

ಚಿಕ್ಕಮಕ್ಕಳನ್ನು ಲೈಂಗಿಕ ಕಿರುಕುಳದಿಂದ ಹೇಗೆ ರಕ್ಷಿಸುವುದು?

ಶಾಲೆಗಳಲ್ಲಿ ಚಿಕ್ಕಮಕ್ಕಳು ಎದುರಿಸುತ್ತಿರುವ ಲೈಂಗಿಕ ಕಿರುಕುಳಗಳು ಮಕ್ಕಳ ರಕ್ಷಣಾ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಬಯಲುಮಾಡಿದೆ.

ಅನು: ಶಿವಸುಂದರ್ಅನು: ಶಿವಸುಂದರ್29 Sept 2017 12:31 AM IST
share
ಚಿಕ್ಕಮಕ್ಕಳನ್ನು ಲೈಂಗಿಕ ಕಿರುಕುಳದಿಂದ ಹೇಗೆ ರಕ್ಷಿಸುವುದು?

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಪಠ್ಯ ಮತ್ತು ಸೌಕರ್ಯಗಳನ್ನು ಒದಗಿಸುವಲ್ಲಿ ಶಾಲೆಗಳ ಪಾತ್ರದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತಡೆಯೊಡ್ಡುತ್ತಿರುವ ಬಗ್ಗೆಯಾಗಲೀ, ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ಯಾವುದೇ ಪ್ರಸ್ತಾಪಗಳನ್ನು ಮಾಡಿಲ್ಲ.


ಹರ್ಯಾಣದ ಗುರುಗ್ರಾಮದ ಮೇಲ್ವರ್ಗದ ರಯಾನ್ ಅಂತಾರಾಷ್ಟ್ರೀಯ ಶಾಲೆಯ ಶೌಚಾಲಯದಲ್ಲಿ 2017ರ ಸೆಪ್ಟ್ಟಂಬರ್ 8 ರಂದು ಏಳು ವರ್ಷದ ಬಾಲಕನೊಬ್ಬನ ಹೆಣ ಪತ್ತೆಯಾಯಿತು. ನಂತರ ಪೊಲೀಸರು ಆ ಶಾಲೆಯ ಬಸ್ ಕಂಡಕ್ಟರ್‌ನನ್ನು ಬಂಧಿಸಿದರು. ತನ್ನೊಡನೆ ಸಲಿಂಗ ಕಾಮಕೇಳಿ ಮಾಡಲು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಕಂಡಕ್ಟರೇ ಬಾಲಕನನ್ನು ಕೊಂದನೆಂಬ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಪ್ರಕರಣದ ಬಗ್ಗೆ ಮುಂದುವರಿದಿರುವ ತನಿಖೆಯು ಶಾಲಾ ಆವರಣದಲ್ಲಿ ಸಂಭವಿಸಿರುವ ಗಂಭೀರ ಭದ್ರತಾ ವೈಫಲ್ಯಗಳನ್ನು, ಈ ವಿಷಯದಲ್ಲಿ ಶಾಲೆ ಮತ್ತು ಶಿಕ್ಷಕರಿಗೆ ಉತ್ತರದಾಯಿತ್ವವೇ ಇಲ್ಲದಿರುವುದನ್ನೂ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಬಗ್ಗೆ ಇರುವ ಸಾಂವಿಧಾನಿಕ ಕ್ರಮಗಳನ್ನು ಎತ್ತಿಹಿಡಿಯುವುದರಲ್ಲಿ ಸರಕಾರದ ವೈಫಲ್ಯವನ್ನು ಬಯಲುಮಾಡಿದೆ.

ನಗರದ ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸಾಚಾರದ ಪ್ರಕರಣಗಳು ಸತತವಾಗಿ ಬೆಳಕಿಗೆ ಬರುತ್ತಿದ್ದು ಅದರಲ್ಲಿ ಗುರುಗ್ರಾಮದ ಪ್ರಕರಣವು ಇತ್ತೀಚಿನ ಸೇರ್ಪಡೆಯಷ್ಟೆ. ಇಂತಹ ಪ್ರಕರಣಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಹಿಂಸಾಚಾರಕ್ಕೆ ಬಲಿಯಾಗುತ್ತಿರುವುದು ಗಮನಿಸಬೇಕಾದ ವಿಷಯವಾಗಿದೆ. ಹೀಗಾಗಿ ಇದಕ್ಕೆ ಪರಿಹಾರವಿರುವುದು ಮಕ್ಕಳ ರಕ್ಷಣೆಯ ವ್ಯವಸ್ಥೆಯಲ್ಲಿ ಮೂಲಭೂತ ಮಾರ್ಪಾಡುಗಳನ್ನು ತರುವುದರಲ್ಲೇ ವಿನಃ ಲಿಂಗಾಧಾರಿತವಾಗಿ ನಿಗಾ- ಉಸ್ತುವಾರಿಯನ್ನು ಹೆಚ್ಚು ಮಾಡುವುದರಿಂದಲ್ಲ.

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ನೀಡಿರುವ ಅಂಕಿಅಂಶಗಳ ಪ್ರಕಾರ ಲೈಂಗಿಕ ಕಿರುಕುಳದಿಂದ ಮಕಳ್ಳನ್ನು ರಕ್ಷಿಸುವ ಕಾಯ್ದೆ (ಪೋಕ್ಸ)ಯಡಿಯಲ್ಲಿ ದಾಖಲಾಗಿರುವ ಅಪರಾಧಗಳ ಸಂಖ್ಯೆ 2014 ಮತ್ತು 2015ರ ನಡುವೆ 8,904ರಿಂದ 14,913ಕ್ಕೇರಿದೆ. ಮಕ್ಕಳ ಮೇಲಿನ ಹಿಂಸಾಚಾರಗಳ ಬಗ್ಗೆ 2007ರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಮೂವರಲ್ಲಿ ಇಬ್ಬರು ಮಕ್ಕಳು ದೈಹಿಕ ಹಿಂಸಾಚಾರಕ್ಕೆ ತುತ್ತಾಗುತ್ತಾರೆ; ಶೇ.53.22 ಮಕ್ಕಳು ಒಂದಲ್ಲ ಒಂದು ಬಗೆಯ ಅಥವಾ ಒಂದಕ್ಕಿಂತ ಹೆಚ್ಚಿನ ರೂಪದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದರು; ಅಧ್ಯಯನದ ಭಾಗವಾಗಿ ಸಂದರ್ಶಿಸಲಾದ 12,000 ಮಕ್ಕಳಲ್ಲಿ ಶೇ. 50ರಷ್ಟು ಮಕ್ಕಳು ಶಾಲಾ ಆವರಣದಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದರು; ಅಧ್ಯಯನ ನಡೆಸಲಾದ 13 ರಾಜ್ಯಗಳಲ್ಲಿ ದೈಹಿಕ ಕಿರುಕುಳಕ್ಕೆ ತುತ್ತಾಗಿದ್ದ ಶೇ. 69ರಷ್ಟು ಮಕ್ಕಳಲ್ಲಿ ಶೇ.54.68ರಷ್ಟು ಹುಡುಗರಾಗಿದ್ದರು; ಮತ್ತು ಬಹಳಷ್ಟು ಮಕ್ಕಳು ಈ ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.

2015ರ ಜುಲೈನಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯೂನಿಸೆಫ್) ವರದಿಯೂ ಸಹ ಮಕ್ಕಳು ಎದುರಿಸುತ್ತಿರುವ ಈ ಬಿಕ್ಕಟ್ಟನ್ನು ಎತ್ತಿ ತೋರಿಸಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಮಕ್ಕಳ ರಕ್ಷಣ ಯೋಜನೆಯು (ಐಸಿಪಿಎಸ್) ಮಕ್ಕಳ ಜೀವ, ವ್ಯಕ್ತಿತ್ವ ಮತ್ತು ಬಾಲ್ಯಗಳ ಬಗ್ಗೆ ಇರುವ ಯಾವುದೇ ನೈಜ ಅಥವಾ ಸಂಭಾವ್ಯ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತಾಗಿ ಹೇಳಿಕೊಳ್ಳುತ್ತದೆ. ಸಮುದಾಯ, ಸರಕಾರ ಮತ್ತು ನಾಗರಿಕ ಸಮಾಜಗಳ ಬೆಂಬಲದೊಂದಿಗೆ ಕುಟುಂಬವು ತನ್ನ ಮಕ್ಕಳ ರಕ್ಷಣೆಯನ್ನು ಮಾಡಬೇಕಿರುತ್ತದೆ. ಶಾಲೆಗಳು ಈ ಸಹಕಾರ ಜಾಲದ ಮುಖ್ಯ ಕೊಂಡಿಯಾಗಿವೆ. ಮಕ್ಕಳು ತಮ್ಮ ದಿನದ ಮತ್ತು ಬಾಲ್ಯದ ಅರ್ಧ ಭಾಗವನ್ನು ಶಾಲೆಯ ಪರಿಸರದಲ್ಲೇ ಕಳೆಯುತ್ತಾರೆ. ಆದರೂ ಒಂದು ಸಂಸ್ಥೆಯಾಗಿ ಶಾಲೆಗಳನ್ನು ಈವರೆಗೆ ಮಕ್ಕಳ ರಕ್ಷಣೆಗೆ ಉತ್ತರದಾಯಿಗಳನ್ನಾಗಿ ಮಾಡಲಾಗಿಲ್ಲ.

ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳಲ್ಲಿ ಶಾಲೆಗಳ ಪಾತ್ರದ ಬಗ್ಗೆ ಇರುವ ಗೊಂದಲವು ಒಂದು ಪ್ರಧಾನ ಸಮಸ್ಯೆಯೇ ಆಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಪಠ್ಯ ಮತ್ತು ಸೌಕರ್ಯಗಳನ್ನು ಒದಗಿಸುವಲ್ಲಿ ಶಾಲೆಗಳ ಪಾತ್ರದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತಡೆಯೊಡ್ಡುತ್ತಿರುವ ಬಗ್ಗೆಯಾಗಲೀ, ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ಯಾವುದೇ ಪ್ರಸ್ತಾಪಗಳನ್ನು ಮಾಡಿಲ್ಲ. ಮತ್ತೊಂದು ಕಡೆ ಪೋಕ್ಸಾ ಕಾಯ್ದೆಯು ನೇರವಾಗಿ ಶಾಲೆಗಳ ಬಗ್ಗೆಯಾಗಲಿ ಅವುಗಳ ಆಡಳಿತ ಮಂಡಳಿಗಳ ಬಗ್ಗೆಯಾಗಲೀ ನೇರ ಪ್ರಸ್ತಾಪವನ್ನು ಮಾಡುವುದಿಲ್ಲ.

ಬದಲಿಗೆ ಮಕ್ಕಳ ಆರೋಗ್ಯಕರ ದೈಹಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಗಳನ್ನು ಖಾತರಿಗೊಳಿಸಬೇಕಾದ ಅಗತ್ಯಗಳ ಬಗ್ಗೆ ಮತ್ತು ಅದಕ್ಕೆ ಅಡ್ಡಿ ಮಾಡುವ ಅಪರಾಧಿಗಳ ವಿರುದ್ಧ ಶಿಕ್ಷಾ ಕ್ರಮಗಳನ್ನು ಜರುಗಿಸುವ ಬಗ್ಗೆ ಅಮೂರ್ತವಾಗಿ ಮಾತನಾಡುತ್ತದೆ. ಮಕ್ಕಳ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆಯು, ಅನಾಥ, ಕಳೆದುಹೋದ ಮತ್ತು ಪರಿತ್ಯಕ್ತ ಮತ್ತು ದುರ್ಬಳಕೆ ಮತ್ತು ನಿರ್ಲಕ್ಷ್ಯಕ್ಕೀಡಾದ ಮಕ್ಕಳನ್ನು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳೆಂಬ ಶೀರ್ಷಿಕೆಯಡಿಯಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಆದರೆ ಈ ಕಾಯ್ದೆಯೂ ಸಹ ನಿಗದಿಯಾದ ಬಾಲ ಕೇಂದ್ರಗಳಿಗೆ ಅಥವಾ ಆರೈಕೆ ಕೇಂದ್ರಗಳಿಗೆ ಮಕ್ಕಳನ್ನು ಪುನರ್ವಸತಿಗಾಗಿ ಕಳಿಸಬೇಕಾಗುವಷ್ಟು ಹಿಂಸೆ ಮತ್ತು ವಂಚನೆಗಳ ಅತಿರೇಕಕ್ಕೆ ಗುರಿಯಾದ ಪ್ರಕರಣಗಳನ್ನು ಮಾತ್ರ ಪರಿಗಣಿಸುತ್ತದೆ. ಈ ಕಾಯ್ದೆಯೂ ಸಹ ಶಾಲೆಗಳೂ ಕೂಡಾ ಮಕ್ಕಳ ಆರೈಕೆಯ ಬಗ್ಗೆ ಜವಾಬ್ದಾರಿ ಹೊಂದಿರಬೇಕಾದ ಒಂದು ಕೇಂದ್ರವೆಂದು ಪರಿಗಣಿಸುವುದಿಲ್ಲ.

ರಯಾನ್ ಶಾಲೆಯಂಥ ಪ್ರತಿಷ್ಠಿತ ಶಾಲೆಯಲ್ಲಿ ಇಂತಹ ಪ್ರಕರಣವು ನಡೆದಿರುವುದರಿಂದ ತುಂಬಾ ಕಾಲದಿಂದ ನನೆಗುದಿಗೆ ಬಿದ್ದಿದ್ದ ಮಕ್ಕಳ ಹಕ್ಕುಗಳ ಬಗೆಗಿನ ಚರ್ಚೆಗಳು ಒಂದಷ್ಟು ತ್ವರಿತಗತಿಯನ್ನು ಪಡೆದುಕೊಂಡಿರುವುದು ನಿಜವಾದರೂ ಇನ್ನೂ ಬಹಳಷ್ಟು ಆಗಬೇಕಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ನಿರ್ದೇಶಕರ ಹೇಳಿಕೆಯ ಪ್ರಕಾರ ವಿಭಿನ್ನ ಬಗೆಯ ಮಕ್ಕಳ ಮೇಲಿನ ಕಿರುಕುಳಗಳ ಕುರಿತು ಮತ್ತು ಅದನ್ನು ಶಾಲಾ ಪರಿಸರದಲ್ಲಿ ಹೇಗೆ ತಡೆಯಬಹುದೆಂಬುದರ ಕುರಿತು ಶೈಕ್ಷಣಿಕ ಅಂಶಗಳನ್ನು ಸೇರಿಸುವ ಪ್ರಸ್ತಾಪವಿದೆ. ನೊಬೆಲ್ ಪ್ರಶಸ್ತಿ ವಿಜೇತರಾದ ಕೈಲಾಷ್ ಸತ್ಯಾರ್ಥಿಯವರು ಮಕ್ಕಳ ಮೇಲಿನ ಕಿರುಕುಳದ ಬಗ್ಗೆ ಅರಿವನ್ನು ಮೂಡಿಸಲು ಭಾರತ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ.

ಹರ್ಯಾಣದಲ್ಲಿ ಇನ್ನು ಮುಂದೆ ಶಾಲೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮುನ್ನ ಪೊಲೀಸ್ ಪರಿಶೀಲನೆಗೆ ಒಳಗಾಗುವುದು ಕಡ್ಡಾಯ ಹಾಗೂ ಅಲ್ಲಿ ಪ್ರತಿಶಾಲೆಗಳಲ್ಲೂ ಮಕ್ಕಳ ಸುರಕ್ಷಾ ಸಮಿತಿಗಳನ್ನು ನೇಮಿಸಲಾಗುತ್ತಿದೆ ಮತ್ತು ಇಡೀ ಶಾಲಾ ಪರಿಸರದ ಮೇಲೆ ನಿಗಾ ಇಡುವಂತೆ ಸಿಸಿಟಿವಿ ಕ್ಯಾಮರಾಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಮಕ್ಕಳಿಗೆ ಸುರಕ್ಷಿತ ಪ್ರಯಾಣ ಸೌಲಭ್ಯವನ್ನು ಖಾತರಿಗೊಳಿಸಲಾಗುತ್ತಿದೆ. ಇವೆಲ್ಲಾ ಮಾಡಲೇ ಬೇಕಾದ ಪ್ರಾಥಮಿಕ ಕ್ರಮಗಳಾದರೂ ಅಷ್ಟೆ ಸಾಲುವುದಿಲ್ಲ. ಉತ್ತಮ ತಂತ್ರಜ್ಞಾನದ ಬಳಕೆ ಮತ್ತು ಉಸ್ತುವಾರಿಗಳ ಜೊತೆಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ಶಾಲೆಗಳನ್ನು ಉತ್ತರದಾಯಿಗಳನ್ನಾಗಿ ಮಾಡಬಲ್ಲ ಕಾನೂನಿನ ಆವಶ್ಯಕತೆಯಿದೆ. ಅಂತಿಮವಾಗಿ ಹೇಳುವುದಾದರೆ, ಮಕ್ಕಳನ್ನು ಕೇವಲ ಮೂಲಭೂತ ಸೌಕರ್ಯಗಳಿಂದ ಮತ್ತು ಶಿಕ್ಷಣದಿಂದಲೇ ರಕ್ಷಿಸಲು ಸಾಧ್ಯವಿಲ್ಲ.

ಪ್ರಭುತ್ವವು ಎಲ್ಲಾ ಮಕ್ಕಳ ಪೋಷಕರ ಪಾತ್ರವನ್ನು ವಹಿಸಲೇಬೇಕು. ಹೆಚ್ಚೆಚ್ಚು ಮಕ್ಕಳು ಶಾಲೆಗಳಿಗೆ ಅದರಲ್ಲೂ ಖಾಸಗಿ ಶಾಲೆಗಳಿಗೆ ನೋಂದಾಯಿಸಿಕೊಳ್ಳುತ್ತಿರುವಾಗ ಮತ್ತು ಖಾಸಗಿ ಶಾಲೆಗಳೆಂಬುದು ಉತ್ತಮ ಉದ್ಯಮವೂ ಆಗುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸುರಕ್ಷೆಯ ಬಗ್ಗೆ ಶಾಲೆಗಳ, ಉಪಾಧ್ಯಾಯರ ಮತ್ತು ಪೋಷಕರ ಪಾತ್ರಗಳನ್ನು ಮಕ್ಕಳ ಹಕ್ಕುಗಳ ಕಾಯ್ದೆಯಲ್ಲಿ ಸ್ಪಷ್ಟವಾಗಿ ನಿಗದಿಪಡಿಸುವ ಅಗತ್ಯವಿದೆ. ಯಾವುದೇ ವರ್ಗಕ್ಕೆ ಸೇರಿದ ಮಕ್ಕಳಗಾಲಿ, ಯಾವುದೇ ನಗರ, ಪಟ್ಟಣ ಅಥವಾ ಹಳ್ಳಿಗಳಿಗೆ ಸೇರಿದ ಮಕ್ಕಳಾಗಲೀ, ಪ್ರತಿಯೊಂದು ಮಗುವಿಗೂ ಶಾಲೆಯಲ್ಲಿ, ಮನೆಯಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತವಾದ, ಹಿಂಸಾಮುಕ್ತವಾದ ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುವ ಅಗತ್ಯವಿದ್ದೇ ಇದೆ. 

ಕೃಪೆ: : Economic and Political Weekly

share
ಅನು: ಶಿವಸುಂದರ್
ಅನು: ಶಿವಸುಂದರ್
Next Story
X