ಮಂಗಳೂರು ದಸರಾ ಮೆರವಣಿಗೆ ಆರಂಭಕ್ಕೆ ಕ್ಷಣಗಣನೆ
ಮಂಗಳೂರು, ಸೆ. 30: ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.
ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ದಸರಾ ಪ್ರಯುಕ್ತ ಪ್ರತಿಷ್ಠಾಪಿಸಲ್ಪಟ್ಟು ಒಂಭತ್ತು ದಿನಗಳ ಪೂಜೆ ಹಾಗೂ ಲಕ್ಷಾಂತರ ಭಕ್ತರು ವೀಕ್ಷಿಸಿದ ಶಾರದಾ ಮಾತೆ, ವಿಘ್ನ ವಿನಾಯಕ ಹಾಗೂ ಆದಿಶಕ್ತಿಯನ್ನು ಒಳಗೊಂಡ ನವದುರ್ಗೆಯರ ಭವ್ಯ ಮೆರವಣಿಗೆ ಇನ್ನೇನು ಕೆಲ ಸಮಯದಲ್ಲೇ ಆರಂಭವಾಗಲಿದೆ.
ಕ್ಷೇತ್ರದಿಂದ ಹೊರಡುವ ಮೆರವಣಿಗೆಯು ನಗರದ ಲೇಡಿಹಿಲ್, ಲಾಲ್ಬಾಗ್, ಬಲ್ಲಾಳ್ಬಾಗ್, ಹಂಪನಕಟ್ಟೆಗೆ ಸಾಗಿ ಅಲ್ಲಿಂದ ಕ್ಷೇತ್ರಕ್ಕೆ ಮರಳಿ ಕ್ಷೇತ್ರದ ಪುಷ್ಕರಣಿಯಲ್ಲಿ ನವದುರ್ಗೆಯರ ವಿಗ್ರಹಗಳ ವಿಸರ್ಜನೆ ನಡೆಯಲಿದೆ. ಮೆರವಣಿಗೆಯಲ್ಲಿ ಹುಲಿ ವೇಷಗಳ ತಂಡ ಸೇರಿದಂತೆ ಹಲವಾರು ಟ್ಯಾಬ್ಲೋಗಳು ಸಾರ್ವಜನಿಕರಿಗೆ ಮನರಂಜನೆಯನ್ನು ಒದಗಿಸಲಿದೆ.
Next Story