ಬೈಂದೂರು, ಸೆ.30: ಕೊಡೇರಿ ಬಳಿಯ ಸಮುದ್ರದಲ್ಲಿ ಸೆ.29ರಂದು ಬೆಳಗ್ಗೆ 5.30ರ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ಕೊಡೇರಿ ಗಾಂಧಿನಗರದ ನಾರಾಯಣ ಖಾರ್ವಿ(48) ಎಂಬವರು ಸಮುದ್ರದ ಅಲೆಗೆ ಪಾತಿ ದೋಣಿ ಯಿಂದ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.