Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ತಾರಕ್: ಇಮೇಜು ಬದಲಿಸುವ ಪ್ರಯತ್ನ

ತಾರಕ್: ಇಮೇಜು ಬದಲಿಸುವ ಪ್ರಯತ್ನ

ಕನ್ನಡ ಸಿನೆಮಾ

ಶಶಿಧರ ಚಿತ್ರದುರ್ಗಶಶಿಧರ ಚಿತ್ರದುರ್ಗ1 Oct 2017 12:06 AM IST
share
ತಾರಕ್:  ಇಮೇಜು ಬದಲಿಸುವ ಪ್ರಯತ್ನ

ದರ್ಶನ್ ಬದಲಾಗುವ ಸೂಚನೆ ನೀಡಿದ್ದಾರೆ. ‘ಸಾರಥಿ’ ನಂತರ ತೆರೆಕಂಡ ಅವರ ಸಿನೆಮಾಗಳು ಸ್ಟಾರ್‌ಗಿರಿಯನ್ನೇ ಆಧರಿಸಿ ತಯಾರಾಗಿದ್ದವು. ಒಂದು ಸೀಮಿತ ಅಭಿಮಾನಿ ವರ್ಗಕ್ಕೆಂದೇ ಮಾಡಿದಂತಿದ್ದ ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನೇನೂ ಕಾಣಲಿಲ್ಲ. ಮತ್ತೊಂದೆಡೆ ಇಂತಹ ಹೀರೋನನ್ನು ವಿಜೃಂಭಿಸುವ ಚಿತ್ರಗಳಿಂದಾಗಿ ದರ್ಶನ್ ಕೂಡ ಕೌಟುಂಬಿಕ ಪ್ರೇಕ್ಷಕ ಸಮುದಾಯದಿಂದ ದೂರವಾಗಿದ್ದರು. ಈಗ ಎಚ್ಚೆತ್ತುಕೊಂಡಿರುವ ಅವರು ಹೀರೋಯಿಸಂನಿಂದ ಹೊರತಾಗಿ ಕಥಾಪ್ರಧಾನ ಚಿತ್ರವನ್ನು ಆಯ್ಕೆ ಮಾಡಿಕೊಂಡು ಭಿನ್ನ ಹಾದಿ ತುಳಿದಿದ್ದಾರೆ. ಆ ಮಟ್ಟಿಗೆ ‘ತಾರಕ್’ ಅವರಿಗೆ ನೆರವಿಗೆ ಬಂದಿದೆ.

‘ಮಿಲನ’ ಚಿತ್ರದ ಸೂಕ್ಷ್ಮ ಕತೆ, ಆಕರ್ಷಕ ನಿರೂಪಣೆಯಿಂದ ಸಿನಿಪ್ರೇಮಿಗಳ ಮನ ಗೆದ್ದಿದ್ದ ಪ್ರಕಾಶ್ ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೂ ‘ತಾರಕ್’ ನಿರೀಕ್ಷೆ ಹುಟ್ಟಿಸಿತ್ತು. ಮಾಸ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ದರ್ಶನ್‌ಗೆ ಅವರು ಹೇಗೆ ಚಿತ್ರ ಮಾಡಬಹುದು ಎಂದು ಉದ್ಯಮದವರಿಗೂ ಕುತೂಹಲವಿತ್ತು. ಎಲ್ಲರ ನಿರೀಕ್ಷೆ, ಕುತೂಹಲಗಳಿಗೆ ಪ್ರಕಾಶ್ ಸೂಕ್ತ ಉತ್ತರ ಕೊಟ್ಟಿದ್ದು ಮತ್ತೊಮ್ಮೆ ನಿರ್ದೇಶಕನಾಗಿ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ದರ್ಶನ್ ಕೂಡ ಸಿನೆಮಾದ ಯಾವ ಹಂತದಲ್ಲೂ ಮೂಗು ತೂರಿಸದೆ ನಿರ್ದೇಶಕನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಹಾಗಾಗಿ ‘ತಾರಕ್’ ಸದಭಿರುಚಿಯ ಫ್ಯಾಮಿಲಿ ಎಂಟರ್‌ಟೇನರ್ ಆಗಿ ತೆರೆ ಮೇಲೆ ಮೂಡಿದೆ.

ಸಾಲು ಸಾಲಾಗಿ ಹೊಡೆದಾಟದ ಸಿನೆಮಾಗಳನ್ನು ಮಾಡಿಕೊಂಡು ಬಂದಿದ್ದ ದರ್ಶನ್‌ಗೆ ಇಂಥದ್ದೊಂದು ಕತೆ ಹೆಣೆಯುವುದು ಸವಾಲೇ ಸರಿ. ಪ್ರಕಾಶ್ ಬುದ್ಧಿವಂತಿಕೆಯಿಂದ ಕತೆ ಮಾಡಿಕೊಂಡಿದ್ದಾರೆ. ದರ್ಶನ್‌ರ ಮಾಸ್ ಇಮೇಜ್‌ಗೂ ಧಕ್ಕೆಯಾಗದಂತೆ ಒಂದಷ್ಟು ಆ್ಯಕ್ಷನ್ ಮಾಡಿಕೊಂಡು ಚೆಂದದ ತ್ರಿಕೋನ ಪ್ರೇಮಕಥೆ ಹೆಣೆದಿದ್ದಾರೆ. ಜೊತೆಗೆ ತಾತ-ಮೊಮ್ಮಗನ ಭಾವುಕ ಸನ್ನಿವೇಶಗಳಿಗೂ ಜಾಗವಿದೆ. ಪ್ರೀತಿ, ಕೌಟುಂಬಿಕ ಮೌಲ್ಯಗಳೆದುರು ಹೊಡೆದಾಟದ ಸನ್ನಿವೇಶಗಳು ಮುನ್ನೆಲೆಯಲ್ಲಿ ಕಾಣಿಸದಂತೆ ನಿರೂಪಿಸುವಲ್ಲಿ ಪ್ರಕಾಶ್ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದರ್ಶನ್‌ರ ಮಾಸ್ ಅಭಿಮಾನಿ ಬಳಗವೂ ಖುಷಿಯಿಂದ ಸಿನೆಮಾ ಮೆಚ್ಚಿಕೊಳ್ಳುತ್ತಾರೆ.

ಇನ್ನು ಅಭಿನಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ದರ್ಶನ್, ಶಾನ್ವಿ ಶ್ರೀವತ್ಸ ಮತ್ತು ಶೃತಿ ಹರಿಹರನ್ ತಮ್ಮ ಪಾತ್ರಗಳ ಔಚಿತ್ಯ ಅರಿತು ನಟಿಸಿದ್ದಾರೆ. ದರ್ಶನ್ ಇಲ್ಲಿ ನಿರ್ದೇಶಕರ ನಟನಾಗಿದ್ದು, ಭಾವುಕ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಸಾಮಾನ್ಯವಾಗಿ ಸ್ಟಾರ್ ಮಾಸ್ ಹೀರೋಗಳ ಚಿತ್ರಗಳಲ್ಲಿ ನಾಯಕಿಯರಿಗೆ ನಟನೆಗೆ ಹೆಚ್ಚು ಸ್ಕೋಪ್ ಇರುವುದಿಲ್ಲ. ಆದರೆ ಇಲ್ಲಿ ನಾಯಕಿಯರಾದ ಶಾನ್ವಿ ಮತ್ತು ಶೃತಿ ಹರಿಹರನ್ ಅವರಿಗೆ ಒಳ್ಳೆಯ ಸ್ಕೋಪ್ ಇದೆ. ಅವರು ಕೂಡ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇನ್ನು ಹಿರಿಯ ನಟ ದೇವರಾಜ್ ಅವರಿಗಿದು ನಿಸ್ಸಂಶಯವಾಗಿ ವೃತ್ತಿ ಬದುಕಿನ ಉತ್ತಮ ಪಾತ್ರಗಳಲ್ಲೊಂದು. ಎಪ್ಪತ್ತೈದರ ತಾತನ ಪಾತ್ರವನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಚಿತ್ರದ ಸದಭಿರುಚಿಗೆ ಕಪ್ಪುಚುಕ್ಕೆ ಇಟ್ಟಂತೆ ಕುರಿ ಪ್ರತಾಪ್‌ರ ಒಂದು ಕೆಟ್ಟ ಕಾಮಿಡಿ ಸೀನ್ ಇದೆ. ಅದು ಹೇಗೆ ಪ್ರಕಾಶ್ ಇದನ್ನು ಚಿತ್ರಿಸಿದರೋ!?

ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಸಾಹಿತ್ಯವೇನೂ ಕಿವಿಗೆ ಕೇಳಿಸುವುದಿಲ್ಲ. ಹಾಗೆಂದು ಸಂಗೀತ ಅಬ್ಬರವಾಗೇನೂ ಇಲ್ಲ. ಆದರೆ ಥಿಯೇಟರ್‌ನಿಂದಾಚೆ ಬಂದರೆ ಹಾಡುಗಳು ನೆನಪಾಗುವುದಿಲ್ಲವಷ್ಟೆ. ಇಟಲಿ, ಸ್ವಿಟ್ಝರ್‌ಲ್ಯಾಂಡ್ ಸನ್ನಿವೇಶಗಳನ್ನು ಛಾಯಾಗ್ರಾಹಕ ಕೃಷ್ಣಕುಮಾರ್ ಕಣ್ಣಿಗೆ ಹಿತವೆನಿಸುವಂತೆ ಸೆರೆಹಿಡಿದಿದ್ದಾರೆ. ಹಿತಮಿತವಾದ ಫೈಟ್ ದೃಶ್ಯಗಳಿದ್ದು, ಅವು ಕೌಟುಂಬಿಕ ಚಿತ್ರಕಥೆಯ ಆಶಯಕ್ಕೇನೂ ಧಕ್ಕೆಯಾಗೋಲ್ಲ. ಒಟ್ಟಾರೆ ಒಂದೊಳ್ಳೆಯ ಸದಭಿರುಚಿಯ ಚಿತ್ರವಾಗಿ ‘ತಾರಕ್’ ನೋಡುಗರಿಗೆ ಇಷ್ಟವಾಗುವಂತಿದೆ.


ನಿರ್ದೇಶನ: ಪ್ರಕಾಶ್ ನಿರ್ಮಾಣ: ಲಕ್ಷ್ಮಣ ದುಶ್ಯಂತ್
ಸಂಗೀತ: ಅರ್ಜುನ್ ಜನ್ಯ,
ಛಾಯಾಗ್ರಹಣ: ಎ.ವಿ.ಕೃಷ್ಣಕುಮಾರ್
ತಾರಾಗಣ: ದರ್ಶನ್, ಶೃತಿ ಹರಿಹರನ್, ಶಾನ್ವಿ ಶ್ರೀವತ್ಸ, ದೇವರಾಜ್, ಸುಮಿತ್ರ, ಕುರಿ ಪ್ರತಾಪ್ ಮತ್ತಿತರರು.

ರೇಟಿಂಗ್ - ***


* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

share
ಶಶಿಧರ ಚಿತ್ರದುರ್ಗ
ಶಶಿಧರ ಚಿತ್ರದುರ್ಗ
Next Story
X