Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಭಿನ್ನ ಮಾರ್ಗಗಳಲ್ಲಿ ಸರಕಾರಗಳು

ವಿಭಿನ್ನ ಮಾರ್ಗಗಳಲ್ಲಿ ಸರಕಾರಗಳು

ವಾರ್ತಾಭಾರತಿವಾರ್ತಾಭಾರತಿ1 Oct 2017 11:44 PM IST
share

ಮಾನ್ಯರೆ, 

ಗೋಹತ್ಯೆ ನಿಷೇಧ - ಅಯೋಧ್ಯೆ ರಾಮ ಮಂದಿರ ನಿರ್ಮಾಣ - ತ್ರಿವಳಿ ತಲಾಖ್ ನಿಷೇಧ - ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನಿರಾಕರಣೆ ಮುಂತಾದ ಕ್ರಮಗಳ ಮೂಲಕ ಧಾರ್ಮಿಕ ನೆಲೆಯಲ್ಲಿ ತಮ್ಮ ವೋಟೆಂಬ ಮೀನಿಗೆ ಗಾಳ ಹಾಕುತ್ತಿರುವ ಕೇಂದ್ರದ ಆಡಳಿತ ಪಕ್ಷ ಜಾತಿ ಜನಗಣತಿ - ಶಾದಿ ಭಾಗ್ಯ - ಅಹಿಂದ ಓಲೈಕೆ - ಬಸವ ಅನುಯಾಯಿಗಳ ನಡುವಿನ ಸಂಘರ್ಷ ಮುಂತಾದ ನೆಲೆಯಲ್ಲಿ ಜಾತಿ ಆಧಾರಿತ ವೋಟು ಬ್ಯಾಂಕಿಗೆ ಕೈ ಹಾಕುತ್ತಿರುವ ರಾಜ್ಯದ ಆಡಳಿತ ಪಕ್ಷ. ಈ ಎರಡೂ ವಿಭಿನ್ನ ದಾರಿಯಲ್ಲಿ ಸಾಗುತ್ತಿರುವ ಇವರಿಂದ ನಿಜವಾಗಲೂ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯವೇ?

ದಿನೇ ದಿನೇ ವಿಷಯಕ್ತ ಗಾಳಿ ನೀರು ಆಹಾರ ಸೇವಿಸುತ್ತಾ ದೈಹಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯ ಹುಡುಕಾಟ ದಲ್ಲಿ ದಿನ ದೂಡುತ್ತಿರುವ 125 ಕೋಟಿ ಜನರಿದ್ದರೂ ಅಂತಾರಾಷ್ಟ್ರೀಯವಾಗಿ ಹೆಚ್ಚಿನ ಸಾಧನೆ ಮಾಡದ ಸಾಮಾಜಿಕ ಆರ್ಥಿಕ ಅಸಮಾನತೆಯ ಕಾರಣಕ್ಕಾಗಿ ಬಹುತೇಕ ಸಮಾಜ ಅಸಹನೆ ಅಸಹಿಷ್ಣುತೆ ಕಡೆ ಸಾಗುತ್ತಿರುವಾಗ ಇದನ್ನೆಲ್ಲಾ ನಿಭಾಯಿಸಿ ನೈಜ ಅಭಿವೃದ್ಧಿ ಈ ಸರಕಾರಗಳಿಂದ ಸಾಧ್ಯವೇ?

ಹೌದು, ಆಯಾ ಪಕ್ಷಗಳ ನಾಯಕರ ಅಭಿಮಾನಿಗಳು ಮತ್ತು ಭಕ್ತರು ನಮ್ಮಿಂದ ಸಾಧ್ಯ ಎನ್ನುತ್ತಾರೆ. ಒಬ್ಬ ಸಾಮಾನ್ಯ ಪ್ರಜೆಯಾಗಿ ನಮಗೆ ಅನಿಸುವುದೇನು?

ಒಂದು ನಾಗರಿಕ ಪ್ರಜ್ಞೆಯ, ಕನಿಷ್ಠ ಮೂಲಭೂತ ಸೌಕರ್ಯ ಗಳನ್ನು ಹೊಂದಿದ, ಕಡಿಮೆ ಅಸಮಾನತೆಯ, ಒಂದಷ್ಟು ಭದ್ರತೆಯ, ಸಾಕಷ್ಟು ಕ್ರಿಯಾತ್ಮಕ ಚಟುವಟಿಕೆಯ ಸ್ವಸ್ಥ ಸಮಾಜ ನಿರ್ಮಾಣ ಈಗಿನ ಎರಡೂ ಸಾಂಪ್ರದಾಯಿಕ ಪಕ್ಷಗಳ ಮತ್ತು ನಾಯಕರಿಂದ ಖಂಡಿತ ಸಾಧ್ಯವಿಲ್ಲ.

ಇಡೀ ರಾಜ್ಯ ರಾಷ್ಟ್ರವನ್ನು ಸಮಗ್ರ ದೃಷ್ಟಿಯಿಂದ ನೋಡದೆ ಜಾತಿ ಮತ್ತು ಧರ್ಮದ ಕಣ್ಣುಗಳಲ್ಲಿ ನೋಡುತ್ತಿದ್ದಾರೆ. ಭಾಷಣಗಳಲ್ಲಿ ಮಾತ್ರ ಮೇಲ್ನೋಟಕ್ಕೆ ಶಾಂತಿ ಸೌಹಾರ್ದ ಸಮಾನತೆಯ ಮುಖವಾಡ ಧರಿಸುವ ಇವರು ಆಂತರ್ಯದಲ್ಲಿ ಒಂದು ವರ್ಗಗಳನ್ನು ಮಾತ್ರ ಓಲೈಸಿ ಚುನಾವಣೆಗಳಲ್ಲಿ ಅವರ ಮತಗಳಿಸಿ ಮತ್ತೆ ಅಧಿಕಾರ ಹಿಡಿಯುವ ದುರಾಸೆ ಬಿಟ್ಟರೆ,ಜನರನ್ನು - ರಾಜ್ಯ ದೇಶವನ್ನು ಸಮಷ್ಟಿ ಪ್ರಜ್ಞೆಯಿಂದ ಪರಿಶೀಲಿಸಿ ಅತ್ಯಂತ ಸಂವೇದನೆಯಿಂದ ಅಭಿವೃದ್ಧಿ ಸಾಧಿಸುವ ಯಾವ ಉತ್ಕಟತೆಯೂ ಅವರಲ್ಲಿ ಕಾಣುತ್ತಿಲ್ಲ.ಆ ಕಾರಣಕ್ಕಾಗಿಯೇ ಸಾಮಾನ್ಯ ಜನರಿಗೆ ರಾಜಕೀಯ ಎಂಬ ಪದವೇ ಕುಟಿಲತೆಯ, ಸ್ವಾರ್ಥದ, ಅಧಿಕಾರ ದಾಹದ ಪರ್ಯಾಯ ಪದ ಎಂಬಂತಾಗಿದೆ.

ಇದು ಸಂಪೂರ್ಣ ಇಲ್ಲವಾಗಿ ಹೊಸ ರಾಜಕೀಯ ಪ್ರಜ್ಞೆ ಸಾಮಾನ್ಯರಲ್ಲಿ ಮೂಡುವವರೆಗೂ ಅಭಿವೃದ್ಧಿ ಕೇವಲ ಕನಸು ಮಾತ್ರ. ಅಲ್ಲಿಯವರೆಗೂ ಅಕ್ಷರಗಳ ಮುಖಾಂತರ ಎಲ್ಲಾ ವರ್ಗದ ಎಲ್ಲಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಾವೆಲ್ಲಾ ಮಾಡುತ್ತಿರೋಣ..

-ವಿವೇಕಾನಂದ. ಎಚ್.ಕೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X