Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕಾರಂತರ ಕಣ್ಣಲ್ಲಿ ಶ್ರಮ ಸಂಸ್ಕೃತಿ

ಕಾರಂತರ ಕಣ್ಣಲ್ಲಿ ಶ್ರಮ ಸಂಸ್ಕೃತಿ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ2 Oct 2017 12:04 AM IST
share
ಕಾರಂತರ ಕಣ್ಣಲ್ಲಿ ಶ್ರಮ ಸಂಸ್ಕೃತಿ

ಶಿವರಾಮ ಕಾರಂತ ಎನ್ನುವ ವ್ಯಕ್ತಿತ್ವ ಬಗೆದಷ್ಟೂ ಮುಗಿಯದ ಸಾಹಿತ್ಯ ನಿಧಿ. ಕಾರಂತರ ಸಾಹಿತ್ಯದ ವ್ಯಾಪ್ತಿ ಬಹುದೊಡ್ಡದು. ಅದರ ಕುರಿತಂತೆ ಬಂದ ಸಂಶೋಧನಾ ಬರಹಗಳಿಗೂ ಮಿತಿಯಿಲ್ಲ. ಕಾರಂತರ ಸಾಹಿತ್ಯ ಅಧ್ಯಯನ ಮತ್ತೆ ಮತ್ತೆ ಮರು ವಿಮರ್ಶೆಗೆ ಒಳಗಾಗುತ್ತಲೇ ಇದೆ. ಅವರ ಸಾಹಿತ್ಯ ಕೃತಿಗಳೂ ಮರು ಓದಿನ ಮೂಲಕ ವರ್ತಮಾನದ ಸಂದರ್ಭಗಳಿಗೆ ಸಂವಾದಿಯಾಗುತ್ತಿವೆ. ‘ಕಾರಂತರ ದುಡಿಮೆ ಪ್ರಪಂಚ’ ಅಧ್ಯಾಪಕಿ, ವಿಮರ್ಶಕಿ ಡಾ. ರೇಖಾ ಬನ್ನಾಡಿಯವರ ಮೊದಲ ವಿಮರ್ಶಾ ಸಂಕಲನ. ಕಾರಂತರ ಕಾಲ ದುಡಿಮೆ, ಶ್ರಮಸಂಸ್ಕೃತಿಯ ಮೂಲಕ ರೂಪುಗೊಂಡಿರುವುದು. ಕಾರಂತರು ಕೃಷಿ ಪ್ರಧಾನ ಪರಿಸರದಿಂದ ಎದ್ದು ಬಂದವರು. ಆದುದರಿಂದಲೇ ಅವರ ಕಾದಂಬರಿಗಳಲ್ಲಿ ದುಡಿಮೆ, ಪ್ರಕೃತಿ, ಮಣ್ಣು., ಬೆವರು ವೈವಿಧ್ಯಮಯವಾಗಿ ನಿರೂಪಿಸಲ್ಪಟ್ಟಿದೆ. ದುಡಿಮೆ ಸಹಜವಾಗಿಯೇ ತಳಸ್ತರದ ಬದುಕಿನ ಕಡೆಗೆ ನಮ್ಮನ್ನು ಹೊರಳಿಸುತ್ತದೆ. ಕಾರಂತರ ಹಲವು ಪ್ರಮುಖ ಪಾತ್ರಗಳು ತಳಸ್ತರ ಸಮುದಾಯದಿಂದ ಎದ್ದು ಬರುವುದು ಇದೇ ಕಾರಣಕ್ಕೆ.
‘‘....ಕಾರಂತರ ಕಾದಂಬರಿಗಳು ಕಾಲಾ ತೀತ ವೌಲ್ಯಗಳನ್ನು ಹೊಂದಿದವು. ಪ್ರತೀ ಹೊಸ ತಲೆಮಾರೂ ಕಾರಂತರ ಕಾದಂಬರಿ ಜಗತ್ತಿಗೆ ಮುಖಾಮುಖಿ ಆಗುವಾಗ ಅವುಗಳಿಗೆ ಒಂದು ತಾತ್ತ್ವಿಕ ಹಿನ್ನೆಲೆಯನ್ನು ಒದಗಿಸುವ ಕೆಲಸವನ್ನು ಪ್ರಸ್ತುತ ಈ ವಿಮರ್ಶಾ ಕೃತಿ ಮಾಡಿದೆ. ಶಿವರಾಮ ಕಾರಂತರ ಕೃತಿಗಳನ್ನು ಓದಲು ಮಾತ್ರವಲ್ಲ, ಓದಿ ಹೀಗೇ ದಾಟಿ ಬಿಡಬಹುದಾದ ಓದುಗರಿಗೆ ದುಡಿಮೆಯ ಪರಿಕಲ್ಪನೆಯೂ ಒಂದು ವಿಸ್ತಾರ ತಾತ್ತ್ವಿಕ ಚೌಕಟ್ಟನ್ನು ಇಲ್ಲಿನ ಲೇಖನಗಳು ಮಾಡುತ್ತವೆ’’ ಎಂದು ಪ್ರೊ. ಸಬಿಹಾ ಭೂಮಿಗೌಡ ತಮ್ಮ ಮುನ್ನುಡಿಯಲ್ಲಿ ವಿವರಿಸುತ್ತಾರೆ. ದುಡಿಮೆಯ ಕುರಿತಂತೆ ಕಾರಂತರ ಚಿಂತನೆಗಳು, ಕಾದಂಬರಿಗಳಲ್ಲಿ ಕೃಷಿ ನಿಷ್ಠೆ, ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಕಂಡು ಬರುವ ದುಡಿಮೆಯ ಸ್ಥಿತ್ಯಂತರ, ಕಾರ್ಮಿಕ ವಲಸೆ ಪ್ರಕ್ರಿಯೆ...ಹೀಗೆ ಬೇರೆ ಬೇರೆ ಮಗ್ಗುಲಲ್ಲಿ ದುಡಿಮೆ ಚರ್ಚೆಗೊಳಗಾಗುತ್ತದೆ. ಕಾದಂಬರಿಯಲ್ಲಿ ದುಡಿಮೆಯನ್ನು ಮಹಿಳೆ ಮತ್ತು ಪುರುಷ ಎಂದು ವಿಂಗಡಿಸಿ ಲೇಖಕಿ ಅದರ ಕುರಿತ ಲೋಕದೃಷ್ಟಿಯನ್ನು ಗುರುತಿಸುತ್ತಾರೆ. ಸನ್ಯಾಸಿಯ ಬದುಕು, ಇದ್ದರೂ ಚಿಂತೆ ಕಾದಂಬರಿಯ ವಿಶ್ಲೇಷಣೆಯೂ ಇಲ್ಲಿದೆ. 152 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94492 57263 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯ
-ಕಾರುಣ್ಯ
Next Story
X