ನುಡಿದಂತೆ ನಡೆದ ಮಹಾತ್ಮಾ ಗಾಂಧೀಜಿ : ಡಾ.ಬಿ.ಉದಯ
ಮಂಜೇಶ್ವರ, ಅ.2: ರಾಷ್ಟ್ರಪಿತ ಮಹಾತ್ಮಾಗಾಂಧಿ ಸತ್ಯ, ಶಾಂತಿ, ಅಹಿಂಸೆ ಹಾಗೂ ಸಹಿಷ್ಣುತೆ ಬಗ್ಗೆ ತುಂಬಾ ಚಿಂತನೆ ನಡೆಸಿದವರು ಹಾಗೂ ಮಾತನಾಡಿದವರು ಆದರೆ ಅದಕ್ಕಿಂತಲೂ ಹೆಚ್ಚಾಗಿ ಆಡಿದ್ದನ್ನು ಮಾಡಿ ತೋರಿಸಿದವರು. ಅವರು ಜಗತ್ತಿಗೇ ಮಾರ್ಗದರ್ಶಕರು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಉದಯ ಹೇಳಿದ್ದಾರೆ.
ಅವರು ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿನೋಬಾ-ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ ವತಿಯಿಂದ ಜರುಗಿದ ವಿಚಾರ ಗೋಷ್ಠಿ ಹಾಗೂ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದು ಮಾತನಾಡಿದರು.
ಅಧುನಿಕ ಯುಗದಲ್ಲಿ ಯುವಜನತೆಗೆ ಗಾಂಧಿಜೀ ತತ್ವಾದರ್ಶ, ಸರಳ ಬದುಕಿನ ಅರಿವಿಲ್ಲದಿರುವುದೇ ಸಮಾಜದಲ್ಲಿ ಕಂಡು ಬರುತ್ತಿರುವ ಅಸಹಿಷ್ಣುತೆ, ಅಶಾಂತಿ ಮುಂತಾದ ಸಾಮಜಿಕ ಪಿಡುಗುಗಳಿಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ , ಶಾಂತಿ ಸೇನಾ ಫೌಂಡೇಶನ್ ಸಂಚಾಲಕ ಹರ್ಷಾದ್ ವರ್ಕಾಡಿ ಅಧ್ಯ ಕ್ಷತೆ ವಹಿಸಿದ್ದರು. ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಅಬ್ದುಲ್ ಕರೀಂ ಪುಷ್ಪಾರ್ಚನೆಗೈದರು. ಎನ್.ಶಿವಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಗಾಂಧಿೀಜಿಯ ತತ್ವಗಳನ್ನು ಸರಳವಾಗಿ ಅವರ ಜೀವನದ ಸಂದೇಶದೊಂದಿಗೆ ತಿಳಿ ಹೇಳಿದ್ದಲ್ಲಿ ಮುಂದಿನ ಸಮಾಜ ಶಾಂತಿಯುತ ಸಮಾಜ ನಿರ್ಮಾಣವಾಗುವುದು ಎಂದು ಹೇಳಿದರು.
ವರ್ಕಾಡಿ ಚರ್ಚ್ ಧರ್ಮ ಧರ್ಮಗುರುಗಳಾದ ರೆ.ಫಾ. ಫ್ರಾನ್ಸಿಸ್ ರೋಡ್ರಿಗಸ್ , ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷರಾದ ಅಬ್ದುಲ್ ಮಜೀದ್, ಮಿಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಷಾದ್ ಶುಕೂರ್, ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್, ಪಂಚಾಯತು ಉಪಾಧ್ಯಕ್ಷೆ ಸುನಿತಾ ಡಿ.ಸೋಜಾ, ಹಾರಿಸ್ ಪಾವೂರು, ಶೋಭಾ ಸೋಮಪ್ಪ , ಸದಸ್ಯರಾದ ಸದಾಶಿವ ನಾಕ್, ಸೀತಾ, ಗೋಪಾಲಕೃಷ್ಣ ಪಜ್ವ, ಹೇಮಲತಾ ದಿವಾಕರ್, ಮಾಜೀ ಅಧ್ಯಕ್ಷರಾದ ಬಿ.ಮೊಹಮ್ಮದ್ ಕುಂಞ, ಪಿ.ಬಿ.ಅಬೂಬಕ್ಕರ್, ಎಸ್.ಅಬ್ದುಲ್ ಖಾದರ್, ಚಂದ್ರಹಾಸ ಶೆಟ್ಟಿ ಮಾಸ್ತರ್, ಚಂದ್ರಕುಮಾರ್ ಮಾಸ್ತರ್, ಸಂಕಬೈಲು ಸತೀಶ ಆಡಪ್ಪ, ನಾರಾಯಣ ಬೆಜ್ಜಂಗಳ, ಬಿ.ಕೆ.ಮೊಹಮ್ಮದ್, ಬಿ.ಎಂ.ಸೀನಾ, ಸೈಫುಲ್ಲಾ ತಂಙಳ್, ಕೆ.ಸುಧಾ ಕರ, ಆರಿಫ್ ಮಚ್ಚಂಪಾಡಿ, ದಾಮೋದರ ಮಾಸ್ತರ್ ತಲೇಕಳ, ಜಗದೀಶ್ ಮೂಡಂಬೈಲು, ಮೊಹಮ್ಮದ್ ಮಜಾಲ್, ಪುಷ್ಪವತಿ ಟೀಚರ್ ಮನೊೀಜ್ ಕೆ, ಶಾಂತಾ ಆರ್ ನಾಕ್, ಟಿ.ಪ್ರಭಾಕರ ನಾಕ್, ಕೃಷ್ಣವೇಣಿ ಟೀಚರ್, ಅಜಿತ್ ಪ್ರಸಾದ್ ನಾಕ್, ಶಶಿಧರ ನಾಕ್ , ಹಮೀದ್ ಬೋರ್ಕಳ, ಟಿ.ಆಹ್ಮದ್, ಮುಂತಾದವರು ಉಪಸ್ಥಿತರಿದ್ದರು.
ದಿವಾಕರ್ ಎಸ್.ಜೆ.ಸ್ವಾಗತಿಸಿ, ಉಮ್ಮರ್ ಬೋರ್ಕಳ ವಂದಿಸಿದರು. ಬಳಿಕ ಉಚಿತ ಸಸಿ ವಿತರಣೆ ಮಾಡಲಾಯಿತು.