ಕೊಲ್ಲರಕೋಡಿ: ನೂತನ ಮದರಸ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ
ನರಿಂಗಾನ, ಅ.2: ಮಂಜನಾಡಿ ಸಮೀಪದ ಕೊಲ್ಲರಕೋಡಿ ಎಂಬಲ್ಲಿ ನೂತನ ಮದರಸ ಕಟ್ಟಡ ನಿರ್ಮಾಣಕ್ಕೆ ಅಬ್ದುಲ್ ರಹ್ಮಾನ್ ಸಅದಿ ಪಣ್ಣಿಪ್ಪಾರೆ ಉಸ್ತಾದ್ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು. ಝಕರಿಯಾ ಪೈಝಿ ಉಸ್ತಾದ್ ಅವರು ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ರಝಾಕ್ ಪಾರೆ, ಕಾರ್ಯದರ್ಶಿ ಹಮೀದ್ ತಟ್ಲ, ಮದರಸ ಕಮಿಟಿ ಅಧ್ಯಕ್ಷ ಎನ್. ಐ. ಮುಹಮ್ಮದ್, ಕಾರ್ಯದರ್ಶಿ ಅಬ್ದುಲ್ ಖಾದರ್ ಚೌಕ, ಎಸ್ಎಸ್ಎಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ, ನೂರುಲ್ ಹುದಾ ಮಸ್ಜಿದ್ ತಖ್ವಾ ಇಮಾಮ್ ಉಮರ್ ಮದನಿ, ಮುಹಲ್ಲಿಮ್ ಅಬ್ಬಾಸ್ ಸಖಾಫಿ,ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಎಸ್ಎಸ್ಎಫ್ ಕೊಲ್ಲರಕೋಡಿ ಉಪಾಧ್ಯಕ್ಷ ಮಹಮ್ಮದ್ ಅನೀಸ್, ಕಾರ್ಯದರ್ಶಿ ಉಸ್ಮಾನ್ ಶಬೀರ್ ಮತ್ತಿತರರು ಉಪಸ್ಥಿತರಿದ್ದರು,
Next Story