ಕಲಾವಿದನ ಮಗುವಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ನೆರವು
ಮಂಗಳೂರು, ಅ.3: ಬಡಗುತಿಟ್ಟಿನ ಸೌಕೂರು ಮೇಳದ ಭಾಗವತ ಮಂಜುನಾಥ ಪೂಜಾರಿಯ ಎಳೆಯ ಮಗು ರೋಗಕ್ಕೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಮಗುವಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ 25 ಸಾವಿರ ರೂ. ನೆರವು ನೀಡಿದೆ.
ಈ ಸಂದರ್ಭ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಟ್ರಸ್ಟಿಗಳಾದ ಸತೀಶ್ ಶೆಟ್ಟಿ ಕಟೀಲು, ರವಿ ಶೆಟ್ಟಿ ಅಶೋಕನಗರ, ಸದಸ್ಯ ಅಶ್ವಿತ್ ಶೆಟ್ಟಿ ಉಪಸ್ಥಿತರಿದ್ದರು.
Next Story