ಅ. 7ರಿಂದ ಬೆಂಗಳೂರಿನಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರತಿನಿಧಿ ಸಮಾವೇಶ
ಮಂಗಳೂರು, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಷ್ಟ್ರೀಯ ಪ್ರತಿನಿಧಿ ಸಮಾವೇಶವು ಅ. 7, 8ರಂದು ಬೆಂಗಳೂರು ಮಡಿವಾಳ ಹೋಟೆಲ್ ಸವೇರಿಯಾ ಸಭಾಂಗಣದಲ್ಲಿ ನಡೆಯಲಿದೆ.
ಶನಿವಾರ ಅಪರಾಹ್ನ 4:30ಕ್ಕೆ ಆರಂಭಗೊಂಡು ರವಿವಾರ ಸಂಜೆ 5:30ಕ್ಕೆ ಸಮಾರೋಪಗೊಳ್ಳಲಿದೆ. ಎಸ್ಸೆಸ್ಸಫ್ ರಾಷ್ಟ್ರೀಯ ಅಧ್ಯಕ್ಷ ಶೌಕತ್ ಅಲಿ ನಯೀಮಿ ಬುಖಾರಿ ಅಧ್ಯಕ್ಷತೆಯಲ್ಲಿ ಮೌಲಾನಾ ಶಮ್ಸುಲ್ ಹಖ್ ಅಲ್ ಖಾದಿರಿ ಉದ್ಘಾಟಿಸಲಿದ್ದು, ಕೇರಳ ರಾಜ್ಯಾಧ್ಯಕ್ಷ ಪಿ.ಎ. ಫಾರೂಕ್ ನಯೀಮಿ ಭಾಷಣ ಮಾಡುವರು. ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿರುವರು.
ಮುಹಮ್ಮದ್ ಹಾಮಿದ್ ರಝಾ ಬರಕಾತಿ, ನೌಶಾದ್ ಆಲಂ ಮಿಸ್ಬಾಹಿ ಒಡಿಶಾ, ಮೌಲಾನ ಹುಸೈನ್ ಮಿಸ್ಬಾಹಿ, ಮೌಲಾನ ಅಸ್ಲಂ ಸಖಾಫಿ, ಝುಹೈರ್ ನೂರಾನಿ ಕೋಲ್ಕತ್ತಾ, ಸೈಯದ್ ಸಾಜಿದ್ ಅಲಿ ಕಾಶ್ಮೀರ್ ವಿವಿಧ ಅಧ್ಯಯನ ತರಗತಿಗಳಿಗೆ ನೇತೃತ್ವ ನೀಡುವರು.
ಕಲ್ಲಿಕೋಟೆ ಮರ್ಕಝ್ ಉಪಾಧ್ಯಕ್ಷ ಎಸ್.ಎಸ್.ಎ. ಖಾದರ್, ಪತ್ರಕರ್ತ ಬಿ.ಎಂ. ಹನೀಫ್ ವಿಶೇಷ ಉಪನ್ಯಾಸ ನೀಡುವರು.
ರವಿವಾರ ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಎನ್.ಕೆ.ಎಂ. ಶಾಫಿ ಸಅದಿ ಅಧ್ಯಕ್ಷತೆಯಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಉದ್ಘಾಟಿಸುವರು. ಸಚಿವ ರೋಶನ್ ಬೇಗ್ , ಫಿಝಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎಂ. ಫಾರೂಕ್ , ಇಸ್ಲಾಮಿಕ್ ಶಿಕ್ಷಣ ಮಂಡಳಿಯ ರಾಷ್ಟ್ರೀಯ ಕೋಶಾಧಿಕಾರಿ ಹಾಜಿ ಅನ್ವರ್ ಶರೀಫ್ ಮುಖ್ಯ ಅತಿಥಿಗಳಾಗಿರುವರು.
ದೇಶದ 22 ರಾಜ್ಯಗಳಿಗೆ ಸೇರಿದ ನೂರಕ್ಕೂ ಅಧಿಕ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.