ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕ ಉದ್ಘಾಟನೆ
ಉಳ್ಳಾಲ, ಅ. 7: ಕನ್ನಡದ ಜನರ ಏಳಿಗೆಗಾಗಿ ಹೋರಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಯುವಸಮುದಾಯಕ್ಕೆ ನಾಯಕತ್ವದ ಗುಣವನ್ನು ಕಲಿಸುತ್ತಾ ಬಂದಿದೆ ಎಂದು ಕರವೇ ಚಿಕ್ಕಮಗಳೂರು ಹಾಗೂ ದ.ಕ. ಉಸ್ತುವಾರಿ ಜಿಲ್ಲಾಧ್ಯಕ್ಷ ಜಗದೀಶ್ ಅರಸ್ ತೇಗೂರು ಹೇಳಿದ್ದಾರೆ.
ಅವರು ಉಳ್ಳಾಲ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಳ್ಳಾಲ ಭಾಗದಲ್ಲಿ ಜಾತಿಗಳ ಮಧ್ಯೆ ಹೊಡೆದಾಳುವ ನೀತಿ ನಡೆಯುತ್ತಿದೆ. ಈ ನಡುವೆ ಕನ್ನಡವೇ ಜಾತಿ , ಧರ್ಮ ಅನ್ನುವುದನ್ನು ಪಾಲಿಸುತ್ತಾ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು ಉಳ್ಳಾಲದಲ್ಲಿ ಬೆಳೆಸುವ ಕಾರ್ಯ ಯುವಸಮುದಾಯದಿಂದ ಆಗಬೇಕಿದೆ. ಈ ಮೂಲಕ ಶಾಂತಿಯುತ ಉಳ್ಳಾಲದ ಜತೆಗೆ , ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆಯನ್ನು ಕಲ್ಪಿಸಿದಂತಾಗುತ್ತದೆ ಎಂದರು.
ಕರವೇ ದ,ಕ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಮಾತನಾಡಿ, ಅನಿಲ್ ದಾಸ್ ಮಾತನಾಡಿ ಕೆಲವರ ಸ್ವಾರ್ಥಕ್ಕಾಗಿ ಇಡೀ ಉಳ್ಳಾಲದ ನಾಗರಿಕರನ್ನು ಭಯ ಪಡಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನು ಹೋಗಲಾಡಿಸುವ ಪ್ರಯತ್ನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಡೆಯಲಿದೆ. ಶಿಕ್ಷಣ ವಂಚಿತರು, ಸಾಮಾಜಿಕವಾಗಿ ಹಿಂದುಳಿದವರ ದನಿಯಾಗಿ ಕರವೇ ಹೋರಾಟ ನಡೆಸುತ್ತಾ ಬಂದಿದ್ದು, ಗಡಿಪ್ರದೇಶ ಮಂಜೇಶ್ವರದಲ್ಲಿ ಕನ್ನಡ ಶಾಲೆಯನ್ನು ಮುಚ್ಚಿಸುವುದನ್ನು ನಿಲ್ಲಿಸುವಲ್ಲಿ ಜಿಲ್ಲೆಯ ಕರವೇ ಪ್ರಮುಖ ಪಾತ್ರ ವಹಿಸಿತ್ತು ಎಂದರು.
ಜಿಲ್ಲಾ ವಕ್ತಾರ ಮೊಹಶಿರ್ ಅಹ್ಮದ್ ಸಾಮಣಿಗೆ ಮಾತನಾಡಿ ಕರವೇ ಜಿಲ್ಲಾ ವಕ್ತಾರ ಮುನ್ಶೀರ್ ಮಾತನಾಡಿ ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಮೊಳ ಗುವ ಭಜನೆ, ಬಾಂಗ್, ಪ್ರಾರ್ಥನೆಯಲ್ಲಿ ಎಲ್ಲಿಯೂ ಇತರರನ್ನು ದ್ವೇಷಿಸಿ ಅನ್ನುವುದಿಲ್ಲ. ಸ್ವಾರ್ಥ ಹಿತಾಸಕ್ತಿಗಾಗಿ ಜಾತಿ ಕಲಹಗಳು ನಡೆಯುತ್ತಲಿವೆ. ಕನ್ನಡದ ನೆಲೆಯಲ್ಲಾದರೂ ಉಳ್ಳಾಲದ ಜನತೆ ಒಂದಾಗಬೇಕಿದೆ. ಶಾಲನ್ನು ಆಯುಧವಾಗಿ ಇಟ್ಟುಕೊಂಡು ಸರಕಾರಿ ಕಚೇರಿಗಳಲ್ಲಿ ಆಗದ ಕೆಲಸವನ್ನು ಶೋಷಿತ ಜನರಿಗೆ ಮಾಡುವ ಉದ್ದೇಶ ಕರವೇ ಯದ್ದಾಗಿದೆ ಎಂದರು. ಕರವೇ ಘಟಕವನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ನೆರವೇರಿಸಿದರು.
ಉಳ್ಳಾಲ ನಗರ ಸಭೆ ಪೌರಾಯುಕ್ತೆ ವಾಣಿ ಅಳ್ವ, ಸದಸ್ಯ ಫಾರೂಕ್ ಉಳ್ಳಾಲ, ಸದಸ್ಯೆ ರಝೀಯಾ ಇಬ್ರಾಹೀಂ, ಕರವೇ ದ.ಕ ಜಿಲ್ಲಾ ಕನೂನು ಸಲಹೆಗಾರ ಮಯೂರ್ ಕೀರ್ತಿ, ದ.ಕ ಜಿಲ್ಲಾ ಗೌರವಾಧ್ಯಕ್ಷ ಖಾದರ್ ತಲಪಾಡಿ, ದ.ಕ ಜಿಲ್ಲಾ ಮಹಿಳಾಧ್ಯಕ್ಷ ಲತಾ ಸಾಲಿಯಾನ್, ದ.ಕ ಜಿಲ್ಲಾ ಉಪಾಧ್ಯಕ್ಷರುಗಳಾದ ಮೊಹಿದ್ದೀನ್ ನಝೀರ್, ಅರುಣ್ ಕುಮರ್, ದ.ಕ ಜಿಲ್ಲಾ ರಿಕ್ಷಾ ಘಟಕಾಧ್ಯಕ್ಷ ಜೆರಾಲ್ಡ್ ಕುಟ್ಟಿನಾ, ದ.ಕ ಕೋಶಾಧಿಕಾರಿ ರಿಯಾರ್ ಹರೇಕಳ, ಕೈರಂಗಳ ಘಟಕಾಧ್ಯಕ್ಷ ಅಬೂ ಸ್ವಾಲಿಹ್, ದ.ಕ ವಿದ್ಯಾರ್ಥಿ ಘಟಕ ಉಪಾಧ್ಯಕ್ಷ ನದೀಮ್ ಅಹ್ಮದ್ ಬಾವ, ದ.ಕ ಜಿಲ್ಲಾ ಕಾರ್ಯದರ್ಶಿ ಜಯರಾಜ್ ಜಪ್ಪಿನ ಮೊಗರು, ಉಳ್ಳಾಲ ಘಟಕ ಪ್ರ.ಕಾರ್ಯದರ್ಶಿ ಇಫ್ತಿಕಾರ್ ಉಳ್ಳಾಲ, ಉಪಾಧ್ಯಕ್ಷ ಹಮೀದ್ ಉಳ್ಳಾಲ ಉಪಸ್ಥಿತರಿದ್ದರು.
ಈ ಸಂದರ್ಭ 36 ವರ್ಷಗಳಿಂದ ಕನ್ನಡ ಅಧ್ಯಾಪಕರಾಗಿ ಸೇವೆಸಲ್ಲಿಸಿದ ನಿವೃತ್ತ ಕನ್ನಡ ಅಧ್ಯಾಪಕ ಗುಡಾಜೆ ರಾಮಚಂದ್ರ ಭಟ್ ಮತ್ತು ಉಳ್ಳಾಲ ವಲಯದಲ್ಲಿ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 5 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಇದೇ ವೇಳೆ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಅರುಣ್ ಡಿಸೋಜ ಸೇರಿದಂತೆ 15 ಮಂದಿ ಕ.ರ.ವೇ ಗೆ ಸೇರ್ಪಡೆಗೊಂಡರು.
ಬಂಟ್ವಾಳ ತಾಲೂಕು ಅಧ್ಯಕ್ಷ ಅಬ್ದುಲ್ ಜಲೀಲ್ ಮುಡಿಪು ಪ್ರಸ್ತಾವಿಕ ಮಾತುಗಳಾನ್ನಾಡಿದರು. ಮಂಗಳೂರು ತಾಲೂಕು ಅಧ್ಯಕ್ಷ ಮಧುಸೂದನ್ ಗೌಡ ಸ್ವಾಗತಿಸಿದರು. ದ.ಕ ವಿದ್ಯಾರ್ಥಿ ಘಟಕಾಧ್ಯಕ್ಷ ಮುಫೀದ್ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ಘಟಕಾಧ್ಯಕ್ಷ ಫೈರೋರ್ ಡಿ.ಎಮ್ ವಂದಿಸಿದರು.